ಬೆಲೆ ಕುಸಿತ: ರೈತನಿಂದಲೇ ಮೆಣಸಿನಕಾಯಿ ಬೆಳೆ ನಾಶ
Team Udayavani, May 4, 2020, 3:26 PM IST
ಹಾವೇರಿ: ಆಲದಕಟ್ಟಿಯಲ್ಲಿ ರೈತ ಹಸಿಮೆಣಸಿನ ಬೆಳೆ ನಾಶ ಪಡಿಸಿದನು.
ಹಾವೇರಿ: ಹಸಿಮೆಣಸಿನಕಾಯಿ ಬೆಲೆ ಕುಸಿದಿದ್ದರಿಂದ ತಾಲೂಕಿನ ಆಲದಕಟ್ಟಿ ಗ್ರಾಮದ ಬಸವಂತಪ್ಪ ಅಗಡಿ ತಾವು ಮೂರು ಎಕರೆ ಪ್ರದೇಶದಲ್ಲಿ ಬೆಳೆದ ಮೆಣಸನ್ನು ನಾಶಪಡಿಸಿದ್ದಾರೆ.
ಕೋವಿಡ್ ಹಾವಳಿಯಿಂದಾಗಿ ಪುಣೆ-ಮುಂಬೈ ಹಾಗೂ ಹೊರ ದೇಶಗಳಿಗೆ ರಫ್ತು ಮಾಡಲಾಗದೆ, ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದ್ದರಿಂದ ರೈತ ಈ ನಿರ್ಧಾರ ಕೈಗೊಂಡು ಬೆಳೆ ಟ್ರ್ಯಾಕ್ಟರ್ನಿಂದ ನಾಶಪಡಿಸಿದ್ದಾನೆ. ಸಂಕಷ್ಟದಲ್ಲಿರುವ ರೈತನಿಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಪ್ರಗತಿಪರ ರೈತರಾದ ಶಿವಯೋಗಿ ವಾರ್ತಿ, ಸದಾನಂದ ಹಿರೇಮಠ, ಮಂಜುನಾಥ ಅಗಡಿ, ಕೃಷಿ ಸಲಹೆಗಾರ ಡಾ| ಜಿ.ಎಸ್. ಕುಲಕರ್ಣಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.