ಬದಲಾವಣೆಗೆ ಮುನ್ನುಡಿ ಬರೆಯಿರಿ: ವೀರಭದ್ರಪ್ಪ
Team Udayavani, Oct 14, 2021, 3:20 PM IST
ಹಾನಗಲ್ಲ: ಶ್ರೀನಿವಾಸ ಮಾನೆ ತಮ್ಮ ಅಪರೂಪದನಾಯಕತ್ವದಿಂದ ಹಾನಗಲ್ಲ ತಾಲೂಕಿನಾದ್ಯಂತಮನೆ ಮಾತಾಗಿದ್ದಾರೆ. ವಿಶೇಷವಾಗಿ ಯುವಕರುಅವರ ನಾಯಕತ್ವಕ್ಕೆ ಮಾರು ಹೋಗಿದ್ದಾರೆ.ಜಿಡ್ಡುಗಟ್ಟಿದ ಆಡಳಿತಕ್ಕೆ ಶ್ರೀನಿವಾಸ ಮಾನೆ ಚುರುಕುಮುಟ್ಟಿಸಲಿದ್ದು, ಜನರ ಸಂಕಷ್ಟಕ್ಕೆ ಸ್ಪಂದಿಸಿ ಕಾರ್ಯನಿರ್ವಹಿಸಲಿದ್ದಾರೆ.
ಚುನಾವಣೆಯಲ್ಲಿ ಬೆಂಬಲನೀಡುವ ಮೂಲಕ ಬದಲಾವಣೆಗೆ ಮುನ್ನುಡಿಬರೆಯುವಂತೆ ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂವೀರಭದ್ರಪ್ಪ ಮನವಿ ಮಾಡಿದರು.ಹಾನಗಲ್ಲ ಉಪಚುನಾವಣೆ ಹಿನ್ನೆಲೆಯಲ್ಲಿಬುಧವಾರ ಕ್ಷೇತ್ರದ ದೇವರ ಹೊಸಪೇಟೆ ಸೇರಿದಂತೆಹಲವು ಗ್ರಾಮಗಳಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿಶ್ರೀನಿವಾಸ್ ಮಾನೆ ಪರ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದರು.
ಶ್ರೀನಿವಾಸ ಮಾನೆ ಅವರ ನಾಯಕತ್ವ, ಆಡಳಿತಕಾರ್ಯವೈಖರಿ, ಜನಸ್ಪಂದನೆ ಕಂಡು ವಿರೋಧಪಕ್ಷದವರು ಬೆಚ್ಚಿ ಬಿದ್ದಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ಗೆವ್ಯಕ್ತವಾಗುತ್ತಿರುವ ಅಪಾರ ಜನ ಬೆಂಬಲ ಅವರಲ್ಲಿನಡುಕ ಹುಟ್ಟಿಸಿದೆ ಎಂದರು.ಮಾಜಿ ಶಾಸಕ ಡಿ.ಆರ್.ಪಾಟೀಲ ಮಾತನಾಡಿ,ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿಶ್ರೀನಿವಾಸ್ ಮಾನೆ ಜನಾನುರಾಗಿ ಎನಿಸಿದ್ದಾರೆ.
ಹಾನಗಲ್ಲ ತಾಲೂಕನ್ನು ನೋಡಲ್ ಕ್ಷೇತ್ರವಾಗಿಸಿಇಲ್ಲಿನ ಅಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ.ಅವರಂಥ ದಿಟ್ಟ ನಿಲುವಿನ ನೇತಾರನ ಅಗತ್ಯಇದೀಗ ಹಾನಗಲ್ಲಗೆ ಬೇಕಿದೆ. ಕ್ಷೇತ್ರದ ಪ್ರತಿಯೊಂದುಗ್ರಾಮಗಳಲ್ಲೂ ಕಾಂಗ್ರೆಸ್ ಬಗೆಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತದಿಂದ ಜನ ಬೇಸತ್ತಿದ್ದಾರೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದಯಾಸೀರಖಾನ್ ಪಠಾಣ, ದುಂಡಪ್ಪ ಹಳ್ಳಿ, ಕುಮಾರಕ್ಯಾಬಳ್ಳಿ, ದೊಡ್ಡಸಿದ್ದಪ್ಪ ಹಳ್ಳಿ, ರಾಜೂ ಮಂತ್ರೋಡಿ,ಬಸಪ್ಪ ಯಳ್ಳೂರ, ರುದ್ರಯ್ಯ ವೆಂಕಟಾಪೂರಮಠ,ಸಹದೇವಪ್ಪ ಹಳ್ಳಿ, ರಾಮಣ್ಣ ಕುರುಬರ, ಶೇಖಪ್ಪಭಜಂತ್ರಿ, ಶಾಂತಪ್ಪ ಕ್ಯಾಬಳ್ಳಿ, ಬಸವಣ್ಣೆಪ್ಪ ಹಳ್ಳಿ,ನಾಗರಾಜ್ ಕ್ಯಾಬಳ್ಳಿ ಮೊದಲಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ