ಹಿರೇಕೆರೂರ:ಧಾರ್ಮಿಕ-ಸಾಂಸ್ಕೃತಿಕತೆಗೆ ಹೆಸರಾದ ಮಡ್ಲೂರು


Team Udayavani, May 24, 2023, 6:37 PM IST

ಹಿರೇಕೆರೂರ:ಧಾರ್ಮಿಕ-ಸಾಂಸ್ಕೃತಿಕತೆಗೆ ಹೆಸರಾದ ಮಡ್ಲೂರು

ಹಿರೇಕೆರೂರ: ಧಾರ್ಮಿಕ ಹಾಗೂ ಸಾಂಸ್ಕೃತಿಕತೆಗೆ ಹೆಸರಾಗಿರುವ ತಾಲೂಕಿನ ಮಡ್ಲೂರು ಗ್ರಾಮ, ಕೆರೆ-ಕಟ್ಟೆಗಳ ನೀರಾವರಿ ಕ್ಷೇತ್ರದಿಂದ ಸಮೃದ್ಧ ಕೃಷಿ  ಭೂಮಿಯನ್ನೂ ಹೊಂದಿದೆ.

ಈ ಗ್ರಾಮ ತಾಲೂಕು ಕೇಂದ್ರ ಹಿರೇಕೆರೂರಿನಿಂದ 18 ಕಿ.ಮೀ., ಹೋಬಳಿ ಕೇಂದ್ರ ಹಂಸಭಾವಿಯಿಂದ 10 ಕಿ.ಮೀ ಅಂತರದಲ್ಲಿದೆ. ಇಲ್ಲಿನ ಶಾಸನ ಫಲಕದಲ್ಲಿ ಬೇರೆ ಬೇರೆ ಕಾಲಕ್ಕೆ ಸೇರಿದ ಎರಡು ಶಾಸನಗಳಿವೆ. ಒಂದು ಶಾಸನ ಕ್ರಿ.ಶ. 1079 ರಿಂದ 1126ರ ಅವಧಿಯ ಮಾಹಿತಿ ನೀಡುತ್ತದೆ. ಇನ್ನೊಂದು ಶಾಸನ 1247ಕ್ಕೆ ಸೇರಿದ್ದಾಗಿದೆ. ಇವುಗಳಲ್ಲಿ ಮೂರು ಕಡೆ ಈ ಗ್ರಾಮದ ಹೆಸರು ಮಡಲೂರು ಎಂದು ಉಲ್ಲೇಖವಾಗಿದೆ.ಆದರೆ, 18ನೇ ಶತಮಾನದ ಇನ್ನೊಂದು ಶಾಸನದಲ್ಲಿ ಮಡಲುರ ಎಂದಿದೆ.

ಚಾಲುಕ್ಯ ವಂಶದ ವಿಕ್ರಮಾದಿತ್ಯನ ಕಾಲದಲ್ಲಿ ಈ ಊರು ಸುತ್ತ 7 ಹಳ್ಳಿಗಳಿಗೆ ಕೇಂದ್ರವಾಗಿತ್ತು. ಹೀಗಾಗಿ, ಇದಕ್ಕೆ ಮಡಲು (ಮಧ್ಯದ+ಹೊಟ್ಟೆಯಂತಹ) ಮಡಲೂರು ಮುಂದೆ ಮಡ್ಲೂರು ಎಂದಾಗಿದೆ ಎನ್ನಲಾಗುತ್ತಿದೆ.

ಒಂದು ಕಾಲದಲ್ಲಿ ಪ್ಲೇಗ್‌ ರೋಗ ಬಂದು ಈ ಊರು ಬೇರೊಂದು ಕಡೆಗೆ ಸ್ಥಳಾಂತರವಾಗಿತ್ತು. ನಂತರದ ದಿನಗಳಲ್ಲಿ ಮೊದಲಿದ್ದ ಈ ಸ್ಥಳದಲ್ಲಿ ಮೊಲವು ನಾಯಿಯನ್ನು ಅಟ್ಟಿಸಿಕೊಂಡು ಹೋಗುವ ದೃಶ್ಯವನ್ನು ಕಂಡ ಜನರು, ಇದು ಗಂಡುಮೆಟ್ಟಿನ
ಸ್ಥಳವೆಂದು ಭಾವಿಸಿ ಮೊದಲಿದ್ದ ಊರಿಗೆ ಬಂದು ವಾಸವಾದರು. ಹೀಗಾಗಿ, ಮೊದಲೂರು ಎಂದೂ, ನಂತರ ಮಡ್ಲೂರು ಎಂದು ಬದಲಾಗಿದೆ ಎಂದು ಸಾಹಿತಿ, ಸಂಶೋಧಕ ಡಾ|ಭೋಜರಾಜ ಪಾಟೀಲ ಅವರು ತಮ್ಮ ಹಿರೇಕೆರೂರ ತಾಲೂಕಿನ ಗ್ರಾಮನಾಮ ಚರಿತೆ ಕಿರು ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.

ಈ ಗ್ರಾಮದಲ್ಲಿ 5110 ಜನ ಸಂಖ್ಯೆ ಯಿದ್ದು, ನಿಟ್ಟೂರು, ಚೊಗಚಿಕೊಪ್ಪ, ಮಡೂÉರ ಗ್ರಾಮಗಳನ್ನೊಳಗೊಂಡ ಗ್ರಾಮ ಪಂಚಾಯಿತಿಯನ್ನು ಹೊಂದಿದೆ. ಈ ಗ್ರಾಮ ಹೆಚ್ಚಿನ ಪ್ರಮಾಣದಲ್ಲಿ ನೀರಾವರಿ ಕೃಷಿ ಭೂಮಿ ಹೊಂದಿದ್ದು, ಸುಮಾರು 35 ಕೆರೆಗಳಿವೆ. ಇವುಗಳಿಂದ ರೈತಾಪಿ ಜನ ಕೆರೆ ನೀರು ಬಳಸಿ ಭತ್ತ ಬೆಳೆಯುತ್ತಾರೆ. ಮಳೆಯಾಶ್ರಿತವಾಗಿ ಮೆಕ್ಕೆಜೋಳ, ಹತ್ತಿ, ರಾಗಿ, ನೀರಾವರಿ ಯಿಂದ ಟೊಮೆಟೊ, ಮೆಣಸು, ಕಬ್ಬು ಇನ್ನಿತರ ಬೆಳೆಗಳನ್ನು ಬೆಳೆಯುತ್ತಾರೆ.

ಈ ಗ್ರಾಮದ ಮುರುಘಾಮಠ ಸುತ್ತಲಿನ ಗ್ರಾಮಗಳ ಭಕ್ತರ ನೆಚ್ಚಿನ ತಾಣವಾಗಿದ್ದು, ಇಲ್ಲಿನ ಮುರುಘರಾಜೇಂದ್ರ ಸ್ವಾಮೀಜಿ ಭಕ್ತರಿಗೆ ದಾರಿದೀಪವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಇಲ್ಲಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿ ಭಾನುವಾರ ಭಕ್ತರ ಕಷ್ಟಗಳಿಗೆ ಪರಿಹಾರ ಮಾರ್ಗಗಳನ್ನು ನೀಡಲಾಗುತ್ತಿದೆ.

ಇಲ್ಲಿನ ಪ್ರಾಚೀನ ಮೂಕೇಶ್ವರ ದೇವಸ್ಥಾನದಲ್ಲಿ ಪ್ರತಿ ಶ್ರಾವಣದ ಕೊನೆಯ ವಾರದಲ್ಲಿ ಅನ್ನಸಂತರ್ಪಣೆ ವೇಳೆ ಕೆರೆಯಲ್ಲಿ ಬೆಳೆಯುವ ಕೇಸು ಸಸ್ಯದ ಸಾಂಬಾರು ಮಾಡಿ ಸವಿಯಲಾಗುತ್ತದೆ. ಗ್ರಾಮದ ಮಹಾರುದ್ರಪ್ಪ ಇಟಗಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇದಲ್ಲದೇ, ಗ್ರಾಮದಲ್ಲಿ ಸಾಂಸ್ಕೃತಿಕವಾಗಿ ವೀರಭದ್ರೇಶ್ವರ ನವಚೇತನ ದೊಡ್ಡಾಟ ಕಲಾ ತಂಡವಿದ್ದು, ಇವರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದು ಗ್ರಾಮದ ಶಿಕ್ಷಕ ಮಲ್ಲೇಶಪ್ಪ ಲಕ್ಕೊಂಡ್ರ
ತಿಳಿಸಿದ್ದಾರೆ.

ಟಾಪ್ ನ್ಯೂಸ್

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

Burhanpur; ನೇಣಿಗೆ ಶರಣಾದ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷೆ

Burhanpur; ನೇಣಿಗೆ ಶರಣಾದ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷೆ

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

Madhya Pradesh: ಭೋಪಾಲ್​ನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ

Madhya Pradesh: ಭೋಪಾಲ್​ನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ

1-sdasdas

350 Years ಬಳಿಕ ಛತ್ರಪತಿ ಶಿವಾಜಿಯ ‘ಹುಲಿ ಉಗುರುಗಳ ಆಯುಧ’ ಭಾರತಕ್ಕೆ ಮರಳಲಿದೆ

arrested

Multan ; ಭಿಕ್ಷಾಟನೆಗಾಗಿ ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ 16 ಮಂದಿಯ ಬಂಧನ

1——dsad

Women’s Reservation Bill ಮೂಲಕ ‘ಶಕ್ತಿ’ಯನ್ನು ಪೂಜಿಸುವ ಭಾವನೆ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sasa-sa

Hirekerur ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ

Haveri: ಜಿಲ್ಲೆಯಲ್ಲಿ 229 ಮಕ್ಕಳು ಶಿಕ್ಷಣದಿಂದ ವಂಚಿತ

Haveri: ಜಿಲ್ಲೆಯಲ್ಲಿ 229 ಮಕ್ಕಳು ಶಿಕ್ಷಣದಿಂದ ವಂಚಿತ

Haveri: ಖಾತ್ರಿ ಯೋಜನೆಯಡಿ ಪ್ರಾಚೀನ ವಸ್ತುಗಳ ಸಂರಕ್ಷಣೆ

Haveri: ಖಾತ್ರಿ ಯೋಜನೆಯಡಿ ಪ್ರಾಚೀನ ವಸ್ತುಗಳ ಸಂರಕ್ಷಣೆ

Shiggaavi: ಜಾನಪದ ವಿವಿಗೆ ಫ್ರಾನ್ಸ್‌ ಸಂಶೋಧಕ ಭೇಟಿ

Shiggaavi: ಜಾನಪದ ವಿವಿಗೆ ಫ್ರಾನ್ಸ್‌ ಸಂಶೋಧಕ ಭೇಟಿ

Ranebennur; ಶ್ರೀ ಸದ್ಗುರು ಸಿದ್ದಾರೂಢ ಕಥಾಮೃತ ಪುರಾಣ ಮಂಗಲೋತ್ಸವ

Ranebennur; ಶ್ರೀ ಸದ್ಗುರು ಸಿದ್ದಾರೂಢ ಕಥಾಮೃತ ಪುರಾಣ ಮಂಗಲೋತ್ಸವ

MUST WATCH

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

ಹೊಸ ಸೇರ್ಪಡೆ

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

Burhanpur; ನೇಣಿಗೆ ಶರಣಾದ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷೆ

Burhanpur; ನೇಣಿಗೆ ಶರಣಾದ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷೆ

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್

Madhya Pradesh: ಭೋಪಾಲ್​ನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ

Madhya Pradesh: ಭೋಪಾಲ್​ನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ

1-sdasdas

350 Years ಬಳಿಕ ಛತ್ರಪತಿ ಶಿವಾಜಿಯ ‘ಹುಲಿ ಉಗುರುಗಳ ಆಯುಧ’ ಭಾರತಕ್ಕೆ ಮರಳಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.