ಅದ್ದೂರಿ ಅಕ್ಷರ ಜಾತ್ರೆ ಯಶಸ್ವಿ


Team Udayavani, Jan 9, 2023, 5:50 AM IST

ಅದ್ದೂರಿ ಅಕ್ಷರ ಜಾತ್ರೆ ಯಶಸ್ವಿ

ಹಾವೇರಿ: ಮೂಲ ಸೌಲಭ್ಯ ಕೊರತೆ ಕಾರಣ ದಿಂದಲೇ ಹಲವು ದಶಕಗಳಿಂದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಂಚಿತ ಹಾವೇರಿ, ಮೊದಲ ಬಾರಿಗೆ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಹುದಹುದು ಎನ್ನುವಂತೆ ನಡೆದು, ಸೌಲಭ್ಯಗಳೊಂದೇ ಸಮ್ಮೇಳನಕ್ಕೆ ಮನದಂಡವಲ್ಲ ಎಂಬು ದನ್ನು ಸಾಕ್ಷೀಕರಿಸಿ ಅದ್ದೂರಿ ನುಡಿ ಜಾತ್ರೆಯಾಗಿ ಹೊರಹೊಮ್ಮಿತು.

ಸಾಮರಸ್ಯದ ಭಾವ ಕನ್ನಡದ ಜೀವ ಎಂಬ ಅರ್ಥಪೂರ್ಣ ಧ್ಯೇಯಯೊಂದಿಗೆ ಮೂರು ದಿನ ನಡೆದ ಯಶಸ್ವಿ ಸಮ್ಮೇಳನ, ಮುಂದಿನ ಸಾಹಿತ್ಯ ಸಮ್ಮೇಳನಗಳ ಅಚ್ಚುಕಟ್ಟು ವ್ಯವಸ್ಥೆಗೆ ಮುನ್ನುಡಿ ಹಾಕಿಕೊಟ್ಟಂತಾಗಿದೆ. ಸಮ್ಮೇಳನಾ ಧ್ಯಕ್ಷರ ಅದ್ದೂರಿ ಮೆರವಣಿಗೆ, ಅರಮನೆ ದರ್ಬಾರ್‌ ಮಾದರಿಯಲ್ಲಿ ರಚಿಸಿದ ಕೆಂಪು, ಹಳದಿ ಹಾಗೂ ಬಂಗಾರದ ವರ್ಣಗಳಿಂದ ನಿರ್ಮಿ ಸಿದ ವಿಶೇಷ ರಥ, ರಾಜ್ಯಾದ್ಯಂತ ಸಂಚ ರಿಸಿದ ತಾಯಿ ಭುವನೇಶ್ವರಿಯ ಸುಂದರ ಕನ್ನಡ ರಥಯಾತ್ರೆ, ಏಲಕ್ಕಿ ಕಂಪಿನ ನಗರಕ್ಕೆ ದಸರಾ ಮಾದರಿಯಲ್ಲಿ ಮಾಡಿದ ದೀಪಾಲಂಕಾರ, ಅಕರ್ಷಕ ಸಾರೋಟುಗಳ ವ್ಯವಸ್ಥೆ, ಲಕ್ಷಾಂತರ ಜನರಿಗೆ ನಿತ್ಯ ರುಚಿ-ಶುಚಿಯಾದ ವೈವಿ ಧ್ಯಮ ಯ ಖಾದ್ಯದ ಊಟ, ಯಾವುದೇ ಗದ್ದಲ ಗಲಾಟೆಗೆ ಆಸ್ಪದ ನೀಡದಿರಲು ಮಾಡಿದ 200 ಊಟದ ಕೌಂಟರ್‌ಗಳು, ವಸತಿ ವ್ಯವಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

86 ಪುಸ್ತಕಗಳ ಬಿಡುಗಡೆ: ವಸತಿ, ಊಟದ ಜತೆಗೆ ಮಸ್ತಕಕ್ಕೂ ಜ್ಞಾನಸುಧೆ ಹರಿಸಲಾಯಿತು. 86ನೇ ಸಮ್ಮೇಳನಕ್ಕಾಗಿಯೇ ಬರೋಬ್ಬರಿ 86 ಪುಸ್ತಕಗಳನ್ನು ಬಿಡುಗಡೆಯ ಜತೆಗೆ ವೈವಿಧ್ಯಮಯ ಹಾಗೂ ಹೊಸ ವಿಚಾರಗಳನ್ನೊಳ ಗೊಂಡ 32ಗೋಷ್ಠಿಗಳು ಗಮನ ಸೆಳೆದವು. ಸಮ್ಮೇಳನದ ಹೊರಗೆ ಹೇಗೆ ಜನಸ್ತೋಮ ತುಂಬಿತ್ತೋ ಅಷ್ಟೇ ಜನಸ್ತೋಮ ಆಸಕ್ತಿಯಿಂದ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿದ್ದರು

ಪಾರ್ಕಿಂಗ್‌ಗಾಗಿ ಕ್ಯೂಆರ್‌ ಕೋಡ್‌: ಸಮ್ಮೇಳನ ಹಲವು ಪ್ರಥಮಗಳಿಗೂ ನಾಂದಿಯಾಯಿತು. ಇದೇ ಮೊದಲ ಬಾರಿಗೆ ವಾಹನಗಳ ಪಾರ್ಕಿಂಗ್‌ಗಾಗಿ ಕ್ಯೂಆರ್‌ ಕೋಡ್‌ ಬಳಕೆ ಮಾಡಿ ದ್ದರಿಂದ ವಾಹನ ನಿಲುಗಡೆ ವ್ಯವಸ್ಥಿತವಾಗಿ ನಡೆದು, ಯಾರಿಗೂ ಕಿರಿಕಿರಿ ಎನಿಸಲಿಲ್ಲ. ವೇದಿಕೆಯಲ್ಲಿ ಎಲ್ಲರಿಗೂ ಮಾತನಾಡುವ ಸಮಯದ ಮಿತಿಯನ್ನು ಆಮಂತ್ರಣ ಪತ್ರಿಕೆಯಲ್ಲಿಯೇ ಪ್ರಕಟಿಸುವ ಧೈರ್ಯ ಪ್ರದರ್ಶಿಸಿದ್ದು ಇದೇ ಮೊದಲು. ಪ್ರತಿನಿಧಿಗಳ ನೋಂದಣಿಗೆ ಆನ್‌ಲೈನ್‌ ವ್ಯವಸ್ಥೆ ಮಾಡಲಾಗಿತ್ತು. ಈ ಪ್ರಥಮಗಳ ಹೊಸ ಅಂಶಗಳ ಅನುಷ್ಠಾನದಲ್ಲಿ ಕೆಲವೊಂದು ಸಣ್ಣಪುಟ್ಟ ಲೋಪದೋಷಗಳು ಕಂಡು ಬಂದರೂ ಇವು ಕೆಲವು ಸುಧಾರಣೆಗಳೊಂದಿಗೆ ಮುಂದಿನ ಸಮ್ಮೇಳನಗಳಿಗೆ ಹೊಸ ಭಾಷ್ಯ ಬರೆದಂತಾಯಿತು.

ಸಮ್ಮೇಳನದ ಅತಿಥ್ಯ ನೀಡಲು ಮೂಲ ಸೌಕರ್ಯ ಕೊರತೆಯೇ ನೆಪವಾಗಬಾರದು. ಇಚ್ಛಾ ಶಕ್ತಿಯಿದ್ದರೆ ಸಮ್ಮೇಳನದ ಹೆಸರಲ್ಲಿ ಆ ಸ್ಥಳದಲ್ಲಿ ಸೌಲಭ್ಯಗಳ ಸೃಷ್ಟಿಗೆ ಕಾರಣವಾಗ ಬಹುದು ಎಂಬ ಹೊಸ ಸಂದೇಶವನ್ನೂ ಹಾವೇರಿ ಸಮ್ಮೇಳನ ಸಾರಿದೆ. ಇದೇ ಮೊದಲ ಬಾರಿಗೆ ಎಂಬಂತೆ ಹಾವೇರಿಯಲ್ಲಿ ಮೂರು ದಿನಗಳ ಕಾಲ ನಿರಂತರ ಲಕ್ಷಾಂತರ ಜನರನ್ನು ಹಿಡಿದಿಡುವ ರಾಜ್ಯಮಟ್ಟದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವ್ಯವಸ್ಥಿತವಾಗಿ ನಡೆದಿದೆ.

ಇದು ಸಮ್ಮೇಳನ ಆತಿಥ್ಯ ಬಯಸುವ ಪುಟ್ಟ ಜಿಲ್ಲೆಗಳಲ್ಲಿ ಹೊಸ ಪ್ರೇರಣೆ ತುಂಬಿದಂತಾಗಿದೆ. ಸಾಹಿತ್ಯ ಸಮ್ಮೇಳನ ಇಷ್ಟೊಂದು ಅಚ್ಚು ಕಟ್ಟಾಗಿ, ಅರ್ಥಪೂರ್ಣವಾಗಿ ನಡೆದಿರುವುದರ ಹಿಂದೆ ಹಾವೇರಿ ಜಿಲ್ಲೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕಸಾಪ ಅಧ್ಯಕ್ಷ ಡಾ| ಮಹೇಶ ಜೋಶಿ ಅವರ ತವರು ಜಿಲ್ಲೆ ಎಂಬ ಬಲವೂ ಇತ್ತು ಎಂಬುದನ್ನು ಮರೆಯುವಂತಿಲ್ಲ.

ಜನಪದ ಜಾತ್ರೆಯಾದ ನುಡಿ ಜಾತ್ರೆ
ಹಾವೇರಿಯಲ್ಲಿ ನಡೆದ ಅಕ್ಷರ ಜಾತ್ರೆ ಕೇವಲ ಸಾಹಿತ್ಯ-ಸಾಂಸ್ಕೃತಿಕ ಜಾತ್ರೆ ಆಗಿರಲಿಲ್ಲ. ಇದು ಅಕ್ಷರಶಃ ಜನಪದ ಜಾತ್ರೆಯಾಗಿ, ಜನಸಾಮಾನ್ಯರ ಉತ್ಸವವಾಗಿ ಅಚರಿಸಲ್ಪಟ್ಟಿತು. ಮಾತಲ್ಲಿ, ಮನದಲ್ಲಿ ಅಷ್ಠೆà ಏಕೆ, ಇಡೀ ಬದುಕಲ್ಲಿ ಕನ್ನಡವನ್ನೇ ಉಸಿರಾಗಿಸಿಕೊಂಡ ಉತ್ತರ ಕರ್ನಾಟಕದ ಅಪ್ಪಟ್ಟ ಗ್ರಾಮೀಣ ಕನ್ನಡಿಗರೇ ಸಮ್ಮೇಳನದಲ್ಲಿ ಅ ಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ, ಸಾಹಿತ್ಯ ಸಮ್ಮೇಳನ ಜನಪದ ಸಮ್ಮೇಳನದ ರಂಗು ಪಡೆದುಕೊಂಡಿದ್ದು ಸಹ ವಿಶೇಷ.

ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಐತಿಹಾಸಿಕ. ಇಲ್ಲಿಯ ವ್ಯವಸ್ಥಿತ ಆಯೋಜನೆ ನಿಜಕ್ಕೂ ಮುಂದಿನ ಸಮ್ಮೇಳನಗಳಿಗೆ ಮಾದರಿ ಯಾಗಿದೆ. ಇಲ್ಲಿ ನಡೆದ ಗೋಷ್ಠಿಗಳಲ್ಲಿ ಜನರು ಆಸಕ್ತಿಯಿಂದ ಭಾಗವಹಿಸಿದ್ದು ನೋಡಿದರೆ ಸಮ್ಮೇಳನ ಅರ್ಥಪೂರ್ಣವಾಗಿದೆ ಎಂದೇ ಹೇಳಬೇಕು.
ಶಿವರಾಜ ಪಾಟೀಲ, ವಿಶ್ರಾಂತ ನ್ಯಾಯಮೂರ್ತಿ, ಸುಪ್ರಿಂ ಕೋರ್ಟ್‌

ಮೊದಲು ಸಮ್ಮೇಳನ ಹೇಗೆ ನಡೆಯುತ್ತದೆಯೋ ಎಂಬ ಆತಂಕ ಇತ್ತು. ಈಗ ಹಾವೇರಿ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯುವ ಮೂಲಕ ಜಿಲ್ಲೆಯ ಹೆಮ್ಮೆ, ಕೀರ್ತಿ ಹೆಚ್ಚಿಸಿದೆ. ಲಕ್ಷಾಂತರ ಜನರು ಸೇರುವ ಕಾರ್ಯಕ್ರಮ ನಡೆಸಲು ಹಿಂದೇಟು ಹಾಕುತ್ತಿದ್ದ ಜಿಲ್ಲೆಯವರಿಗೆ ಈ ಸಮ್ಮೇಳನದ ಯಶಸ್ಸು ಹೊಸ ಉತ್ಸಾಹ ತುಂಬಿದೆ.
-ಎಂ.ಎಸ್‌. ಕೋರಿಶೆಟ್ಟರ್‌, ಸಾಮಾಜಿಕ ಕಾರ್ಯಕರ್ತರು, ಹಾವೇರಿ

-ಎಚ್‌.ಕೆ.ನಟರಾಜ್‌

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.