ಹಳ್ಳಿಗಳಲ್ಲಿ ಬೆಳೆಯಲಿ ಆಧುನಿಕ ರಂಗಭೂಮಿ; ಶೇಷಗಿರಿಯ ಪ್ರಭು

ಕಲೆಯನ್ನು ಬೆಳೆಸುವ ಅವಕಾಶ ಮಾಡಿಕೊಡುವುದೇ ವಿಶ್ವರಂಗಭೂಮಿ ದಿನಾಚರಣೆಯ ಉದ್ದೇಶ

Team Udayavani, Mar 31, 2023, 6:38 PM IST

ಹಳ್ಳಿಗಳಲ್ಲಿ ಬೆಳೆಯಲಿ ಆಧುನಿಕ ರಂಗಭೂಮಿ; ಶೇಷಗಿರಿಯ ಪ್ರಭು

ಹಾವೇರಿ: ನಗರಗಳಿಗಿಂತ ಹಳ್ಳಿಗಳಲ್ಲಿ ಆಧುನಿಕ ರಂಗಭೂಮಿ ಬೆಳೆಯಬೇಕು. ನಾಟಕ ಬದುಕುವುದನ್ನು ಮತ್ತು ಸಂಕುಚಿತ ಪ್ರವೃತ್ತಿಗಳನ್ನು ಮೀರಿ ಸಮಾಜದಲ್ಲಿ ಬೆರೆಯುವುದನ್ನು ಹೇಳಿಕೊಡುತ್ತದೆ ಎಂದು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಶೇಷಗಿರಿಯ ಪ್ರಭು ಗುರಪ್ಪನವರ ಹೇಳಿದರು.

ನಗರದ ತೋಟದಯಲ್ಲಾಪುರ ರಸ್ತೆಯಲ್ಲಿರುವ ಮೈಲಾರ ಮಹದೇವ ಸಭಾಭವನದಲ್ಲಿ ಜಿಲ್ಲಾ ಕಲಾ ಬಳಗ ಮತ್ತು ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಎನ್‌ಎಸ್‌ಎಸ್‌ ಘಟಕದ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಐವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ನಿವೃತ್ತ ಮುಖ್ಯೋಪಾಧ್ಯಾಯ, ಹಿರಿಯ ಹವ್ಯಾಸಿ ನಟ ಸಿ.ಎಸ್‌. ಮರಳಿಹಳ್ಳಿ, ಯಕ್ಷ ರಂಗಭೂಮಿಯ ಪ್ರೊ.ಶಮಂತಕುಮಾರ ಕೆ.ಎಸ್‌., ರಂಗ ಸಂಗೀತಕಾರ ಹನುಮಂತಪ್ಪಾ ಕರವಾಳಿ, ಶೇಷಗಿರಿಯ ಯುವ ರಂಗಕರ್ಮಿ ಸಣ್ಣಪ್ಪ ಗೊರವರ ಹಾಗೂ ರಂಗ ಗಾಯನದ ಮಹಾಂತೇಶ ಮರಿಗೂಳಪ್ಪನವರ ಅವರಿಗೆ ಆಕರ್ಷಕ ಫಲಕ ನೀಡಿ ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಿ.ಜಿ.ಕೆ. ರಂಗ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ರೊಟ್ಟಿ ಮಾತನಾಡಿ, ಹಳ್ಳಿಗಾಡಿನ ನನ್ನಂಥ ರಂಗಕಲಾವಿದ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಲು ರಂಗಭೂಮಿ ಕಾರಣ. ಜೀವನದ ಕನ್ನಡಿಯೇ ರಂಗಭೂಮಿ ಎಂದರು.

ಸಮಾರಂಭದ ಸಂಯೋಜಕ ಹಿರಿಯ ಕಲಾವಿದ ಕೆ.ಆರ್‌. ಹಿರೇಮಠ ಮಾತನಾಡಿ, ಗಡಿ, ಜಾತಿ, ಮತ, ಪಂಥಗಳನ್ನು ಮೀರುವುದನ್ನು ಕಲಿಸುವುದೇ ನಾಟಕ. ಗ್ರಾಮ, ನಗರಗಳ ಭೇದ-ಭಾವ ಅಳಿಸಿ ರಂಗ ಚಿಂತನೆ ಮತ್ತು ಕಲೆಯನ್ನು ಬೆಳೆಸುವ ಅವಕಾಶ ಮಾಡಿಕೊಡುವುದೇ ವಿಶ್ವರಂಗಭೂಮಿ ದಿನಾಚರಣೆಯ ಉದ್ದೇಶ ಎಂದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಸಿ.ಎಸ್‌. ಮರಳಿಹಳ್ಳಿ, ಶಮಂತಕುಮಾರ ಹಾಗೂ ಮರಿಗೂಳಪ್ಪನವರ ಮಾತನಾಡಿದರೆ, ಗಾಯಕ ಹನುಮಂತಪ್ಪ ಕರವಾಳಿ ಹಾಡು ಹಾಡಿ ರಂಜಿಸಿದರು.

ಈ ಸಂದರ್ಭದಲ್ಲಿ ಶಂಕರ ತುಮ್ಮಣ್ಣನವರ ಅವರ ಭೂಕಂಪ ಏಕಾಂಕ ನಾಟಕ ಕುರಿತು ಡಾ. ಮಹಾದೇವಿ ಕಣವಿ ಮಾತನಾಡಿ, ಪರಿಸರ ಜೀತ ಹಾಗೂ ಶೋಷಣೆ ಕುರಿತು ಬರೆದ ಭೂಕಂಪ ಪ್ರಬುದ್ಧ ನಾಟಕ ಎಂದರು. ನಾಟಕಗಳ ಕೊರತೆ ಇರುವ ಈ ದಿನಗಳಲ್ಲಿ ಭೂಕಂಪ ಹೊಸ ನಾಟಕಕಾರರಿಗೆ ಪ್ರೇರಣೆಯಾಗಲಿ ಎಂದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎನ್‌ಎಸ್‌ ಎಸ್‌ ಸಂಯೋಜಕ ಡಾ.ಶಿವಾನಂದ ಪಾಯಮಲ್ಲೆ, ಶೇಷಗಿರಿಯ ಕಲಾವಿದ ಜಮೀರ ಪಠಾಣ, ಈರಣ್ಣ ಬೆಳವಡಿ, ಕಲಾವಿದೆ ಲತಾ ಪಾಟೀಲ, ಶಿವಮೂರ್ತಿ, ಕರಿಯಪ್ಪ ಹಂಚಿನಮನಿ, ಲತಾ ಮರಿಗೂಳಪ್ಪನವರ ಇತರರು ಇದ್ದರು. ನಾಟಕಕಾರ ಶಂಕರ ತುಮ್ಮಣ್ಣ ನವರ ಅವರನ್ನು ಗೌರವಿಸಲಾಯಿತು.ಎನ್‌ಎಸ್‌ಎಸ್‌ ಶಿಬಿರದ ಚಟುವಟಿಕೆಗಳ ಪರಿಚಯವನ್ನು ಶಿಬಿರಾರ್ಥಿ ಆಕಾಶ ಪೂಜಾರ ಮಾಡಿದರು.ಮತ್ತೋಬ್ಬ ಶಿಬಿರಾರ್ಥಿ ಐಶ್ವರ್ಯ ಮಾನೇಗಾರ ವಿಶ್ವ ರಂಗಭೂಮಿ ಸಂದೇಶ ಓದಿದರು. ಪೃಥ್ವಿರಾಜ ಬೆಟಗೇರಿ ಕಾರ್ಯಕ್ರಮ ನಿರೂಪಿಸಿದರು. ಶಂಕರ ಬಡಿಗೇರ ವಂದಿಸಿದರು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಪ್ರಚಾರಕರ ತೀರ್ಮಾನ ಪಕ್ಷದ್ದು: ಬೊಮ್ಮಾಯಿ

Lok Sabha Election; ಸ್ಟಾರ್‌ ಪ್ರಚಾರಕರ ತೀರ್ಮಾನ ಪಕ್ಷದ್ದು: ಬೊಮ್ಮಾಯಿ

ರಾಣಿಬೆನ್ನೂರ:ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಿದ್ದಾಳೆ ಮಹಿಳೆ- ರೂಪಾ

ರಾಣಿಬೆನ್ನೂರ:ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಿದ್ದಾಳೆ ಮಹಿಳೆ- ರೂಪಾ

ಬೃಹತ್‌ ಅಡ್ಡಪಲ್ಲಕ್ಕಿ ಉತ್ಸವ; ಸಮಾನತೆಯ ಸಂದೇಶ ಸಾರಿದ ರೇಣುಕಾಚಾರ್ಯರು

ಬೃಹತ್‌ ಅಡ್ಡಪಲ್ಲಕ್ಕಿ ಉತ್ಸವ; ಸಮಾನತೆಯ ಸಂದೇಶ ಸಾರಿದ ರೇಣುಕಾಚಾರ್ಯರು

Haveri; ಈ ಸರ್ಕಾರದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಯೋಮಯಾಗಿದೆ: ಬೊಮ್ಮಾಯಿ

Haveri; ಈ ಸರ್ಕಾರದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಯೋಮಯಾಗಿದೆ: ಬೊಮ್ಮಾಯಿ

Lok Sabha Elections; ಹಾವೇರಿ ಕಾಂಗ್ರೆಸ್‌ನಲ್ಲೂ ಭುಗಿಲೆದ್ದ ಆಕ್ರೋಶ

Lok Sabha Elections; ಹಾವೇರಿ ಕಾಂಗ್ರೆಸ್‌ನಲ್ಲೂ ಭುಗಿಲೆದ್ದ ಆಕ್ರೋಶ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.