ಕೃಷಿ ವಿಜ್ಞಾನಿಗಳಿಂದ ಕಬ್ಬಿನ ಬೆಳೆ ಪರಿಶೀಲನೆ


Team Udayavani, Dec 28, 2020, 3:48 PM IST

ಕೃಷಿ ವಿಜ್ಞಾನಿಗಳಿಂದ ಕಬ್ಬಿನ ಬೆಳೆ ಪರಿಶೀಲನೆ

ರಾಣಿಬೆನ್ನೂರ: ಹನುಮನಮಟ್ಟಿ ಕೃಷಿವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ಕಬ್ಬಿನ ಬೆಳೆಯ ತಾಕಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿದರು.

ಈ ವೇಳೆ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ| ಅಶೋಕ ಪಿ. ಮಾತನಾಡಿ, ಕಬ್ಬಿನ ಬೆಳೆಯು ಲಘು ಪೋಷಕಾಂಶವಾದಕಬ್ಬಿಣದ ಕೊರತೆಯಿಂದಾಗಿದ್ದು, ಇದಕ್ಕೆ ರೈತರು ಕೇದಿಗೆ ರೋಗ, ಹಳದಿ ರೋಗ ಎಂದುಕರೆಯುತ್ತಾರೆ. ಲಘು ಪೋಷಕಾಂಶಗಳ ಕೊರತೆ ಹೆಚ್ಚಾಗಿ ಕಬ್ಬು ಬಿಳುಚಿಕೊಳ್ಳುವುದು ಇತ್ತೀಚಿನದಿನಗಳಲ್ಲಿ ಪ್ರಮುಖವಾದ ಸಮಸ್ಯೆಯಾಗಿದೆ.ಪ್ರಥಮ ಹಂತದಲ್ಲಿ ಕೊರತೆಯೂ ಇದ್ದರುಸಹ ಬೆಳೆ ಅದನ್ನು ತೋರ್ಪಡಿಸುವುದಿಲ್ಲ. ಈಲಕ್ಷಣವನ್ನು ಹಿಡನ್‌ ಹಂಗರ್‌ ಎಂದು ಕರೆಯಲಾಗುತ್ತದೆ ಎಂದರು.

ಇದಕ್ಕೆ ಮುಖ್ಯಕಾರಣಗಳೆಂದರೆ ಕೊಟ್ಟಿಗೆ ಗೊಬ್ಬರಗಳ ಬಳಕೆಯ ಪ್ರಮಾಣ ಕಡಿಮೆ ಆಗಿರುವುದು, ಲಘು ಪೋಷಕಾಂಶಗಳ ಬಳಕೆ ಇಲ್ಲದಿರುವುದು, ಕಬ್ಬಿನ ನಂತರ ಕಬ್ಬು ಬೆಳೆ ಯೋಜನೆ, ಭೂಮಿಯಲ್ಲಿ ಲವಣಾಂಶ/ ಸವಳು ಹೆಚ್ಚಾಗಿರುವುದು, ಜವಳು ಮತ್ತು ಕ್ಷಾರ ಭೂಮಿಯಲ್ಲಿ ಕಬ್ಬಿಣದ ಅಂಶ ಬೆಳೆಗೆ ಲಭ್ಯವಾಗಲಾರದೆ ಕೊರತೆ ಹೆಚ್ಚು, ಕ್ಯಾಲ್ಸಿಯಂ ಹೆಚ್ಚಾಗಿರುವ ಎರೆ ಭೂಮಿಯಲ್ಲಿ ಕಬ್ಬಿಣದ ಅಂಶ ಬೆಳೆಗೆ ಲಭ್ಯವಾಗಲಾರದೆ ಕೊರತೆ ಉಂಟಾಗುವುದು ಮತ್ತು ಮರಳು/ಗರಸು/ಮಡ್ಡಿ ಜಮೀನಿನಲ್ಲಿ ಲಘು ಪೋಷಕಾಂಶಗಳ ಲಭ್ಯತೆ ಕಡಿಮೆಯಾಗಿ ಫಲವತ್ತತೆಕಡಿಮೆ ಇರುವುದರಿಂದ ಬಿಳಿಚಿನ ಲಕ್ಷಣ ಹೆಚ್ಚಾಗಿ ಕಂಡು ಬರುತ್ತಿದೆ ಎಂದರು.

ಕಬ್ಬಿಣದ ಕೊರತೆಯನ್ನು ನಿವಾರಿಸಲು ಕಬ್ಬನ್ನು ನಾಟಿ ಮಾಡುವಾಗ ಎಕರೆಗೆ 10 ಟನ್‌ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್‌ ಅನ್ನು ಭೂಮಿಗೆ ಹಾಕಬೇಕು. ಶಿಫಾರಸ್ಸು ಮಾಡಿದ ರಾಸಾಯನಿಕಗೊಬ್ಬರದೊಡನೆ ನಾಟಿ ಮಾಡುವಾಗ 10 ಕೆ.ಜಿಕಬ್ಬಿಣದ ಸಲ್ಪೇಟ ಅನ್ನು ಸುಮಾರು 50 ಕೆ.ಜಿ.ಎರೆಹುಳು ಗೊಬ್ಬರದೊಡನೆ ಬೆರೆಸಿ, ನೀರುಚಿಮುಕಿಸಿ ಒಂದು ರಾತ್ರಿ ಇಟ್ಟು ಮರುದಿನ ಕಬ್ಬು ಹಚ್ಚುವ ಸಾಲುಗಳಲ್ಲಿ ಭೂಮಿಗೆ ಸೇರಿಸಬೇಕು. ಇದರಿಂದ ಮಣ್ಣಿನ ಫಲವತ್ತತೆ ವೃದ್ಧಿಯಾಗುವುದು ಎಂದರು.

ವಿಜ್ಞಾನಿಗಳಾದ ಡಾ| ರಾಜಕುಮಾರ ಜಿ.ಆರ್‌. ಮತ್ತು ಡಾ|ಶಾಂತವೀರಯ್ಯ ಅವರು ರೈತರಿಗೆ ಸೂಕ್ತ ಮಾಹಿತಿ ನೀಡಿದರು.

ಟಾಪ್ ನ್ಯೂಸ್

Puttur: ಕಾಲೇಜು ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ

Puttur: ಕಾಲೇಜು ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ

Road Mishap ಕಾರ್ನಾಡು: ಢಿಕ್ಕಿ; ರಸ್ತೆ ಬದಿ ಉರುಳಿ ಬಿದ್ದ ಕಾರು

Road Mishap ಕಾರ್ನಾಡು: ಢಿಕ್ಕಿ; ರಸ್ತೆ ಬದಿ ಉರುಳಿ ಬಿದ್ದ ಕಾರು

Haleangadi ನಾಪತ್ತೆಯಾದ ಯುವಕನ ಬಟ್ಟೆ ಅಣೆಕಟ್ಟಿನ ಬಳಿ ಪತ್ತೆ

Haleangadi ನಾಪತ್ತೆಯಾದ ಯುವಕನ ಬಟ್ಟೆ ಅಣೆಕಟ್ಟಿನ ಬಳಿ ಪತ್ತೆ

utದಿ| ದಾಮೋದರ ಆರ್‌. ಸುವರ್ಣ ಸ್ಮಾರಕ; ಕುಂಜತ್ತಬೈಲಿನಲ್ಲಿ “ಬಿಲ್ಲವ ಹಾಸ್ಟೆಲ್‌’ ಉದ್ಘಾಟನೆ

ದಿ| ದಾಮೋದರ ಆರ್‌. ಸುವರ್ಣ ಸ್ಮಾರಕ; ಕುಂಜತ್ತಬೈಲಿನಲ್ಲಿ “ಬಿಲ್ಲವ ಹಾಸ್ಟೆಲ್‌’ ಉದ್ಘಾಟನೆ

ರಾಜ್ಯ ಆ್ಯತ್ಲೆಟಿಕ್‌ ಸಂಸ್ಥೆ : ಉಪಾಧ್ಯಕ್ಷರಾಗಿ ಮಹೇಶ್‌ ಠಾಕೂರ್‌ ಆಯ್ಕೆ

Udupi ರಾಜ್ಯ ಆ್ಯತ್ಲೆಟಿಕ್‌ ಸಂಸ್ಥೆ : ಉಪಾಧ್ಯಕ್ಷರಾಗಿ ಮಹೇಶ್‌ ಠಾಕೂರ್‌ ಆಯ್ಕೆ

Kundapura ವನವಾಸ: ಯುವಕ ಚೇತರಿಕೆ: ಫಲ ನೀಡಿತು ಮನೆಯವರ ಪ್ರಾರ್ಥನೆ

Kundapura ವನವಾಸ: ಯುವಕ ಚೇತರಿಕೆ: ಫಲ ನೀಡಿತು ಮನೆಯವರ ಪ್ರಾರ್ಥನೆ

saಸೌರಶಕ್ತಿಯ ಸದುಪಯೋಗ: ಸೆಲ್ಕೋ ಕಚೇರಿಗೆ ಆಫ್ರಿಕಾ ಪ್ರತಿನಿಧಿಗಳ ಭೇಟಿ

Manipal ಸೌರಶಕ್ತಿಯ ಸದುಪಯೋಗ: ಸೆಲ್ಕೋ ಕಚೇರಿಗೆ ಆಫ್ರಿಕಾ ಪ್ರತಿನಿಧಿಗಳ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shiggaavi: ಜಾನಪದ ವಿವಿಗೆ ಫ್ರಾನ್ಸ್‌ ಸಂಶೋಧಕ ಭೇಟಿ

Shiggaavi: ಜಾನಪದ ವಿವಿಗೆ ಫ್ರಾನ್ಸ್‌ ಸಂಶೋಧಕ ಭೇಟಿ

Ranebennur; ಶ್ರೀ ಸದ್ಗುರು ಸಿದ್ದಾರೂಢ ಕಥಾಮೃತ ಪುರಾಣ ಮಂಗಲೋತ್ಸವ

Ranebennur; ಶ್ರೀ ಸದ್ಗುರು ಸಿದ್ದಾರೂಢ ಕಥಾಮೃತ ಪುರಾಣ ಮಂಗಲೋತ್ಸವ

Haveri ಹತ್ಯೆಗೆ ಸಂಚು: 8 ಆರೋಪಿಗಳ ಸೆರೆ

Haveri ಹತ್ಯೆಗೆ ಸಂಚು: 8 ಆರೋಪಿಗಳ ಸೆರೆ

Hirekerur; ಸೀತಿಕೊಂಡ ಗ್ರಾಮದಲ್ಲಿ 11ನೇ ಶತಮಾನದ ಶಿಲಾ ಶಾಸನ ಪತ್ತೆ

Hirekerur; ಸೀತಿಕೊಂಡ ಗ್ರಾಮದಲ್ಲಿ 11ನೇ ಶತಮಾನದ ಶಿಲಾ ಶಾಸನ ಪತ್ತೆ

Haveri: ಮಕ್ಕಳ ಪ್ರತಿಭಾ ಅನ್ವೇಷಣೆ ಅಗತ್ಯ – ನಿರಂಜನ ಗುಡಿ

Haveri: ಮಕ್ಕಳ ಪ್ರತಿಭಾ ಅನ್ವೇಷಣೆ ಅಗತ್ಯ – ನಿರಂಜನ ಗುಡಿ

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

Puttur: ಕಾಲೇಜು ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ

Puttur: ಕಾಲೇಜು ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ

Modi

Swatchhata Abhiyan: ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಿ: ಮೋದಿ ಕರೆ

Road Mishap ಕಾರ್ನಾಡು: ಢಿಕ್ಕಿ; ರಸ್ತೆ ಬದಿ ಉರುಳಿ ಬಿದ್ದ ಕಾರು

Road Mishap ಕಾರ್ನಾಡು: ಢಿಕ್ಕಿ; ರಸ್ತೆ ಬದಿ ಉರುಳಿ ಬಿದ್ದ ಕಾರು

rahul gandhi

Politics: ಪಂಚರಾಜ್ಯ ಗೆಲುವು ನಿಶ್ಚಿತ: ರಾಹುಲ್‌ ಗಾಂಧಿ 

MODI 4

G-20 ವಿ.ವಿ.ಕನೆಕ್ಟ್ ಫಿನಾಲೆ: ವಿದ್ಯಾರ್ಥಿಗಳು, ಯುವ ವೃತ್ತಿಪರರಿಗೆ ಪ್ರಧಾನಿ ಮೋದಿ ಆಹ್ವಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.