2ನೇ ವಾರದ ಲಾಕ್ಡೌನ್ ಯಶಸ್ವಿ
Team Udayavani, May 31, 2021, 7:14 PM IST
ಕಲಬುರಗಿ: ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಸೋಂಕಿನ ಎರಡನೇ ಅಲೆಯ ಚೈನ್ ಕತ್ತರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜಾರಿ ಮಾಡಿದ್ದ ವಾರಾಂತ್ಯದ ಸಂಪೂರ್ಣ ಲಾಕ್ಡೌನ್ಗೆ ಉತ್ತಮ ಜನ ಸಂ³ದನೆ ಸಿಕ್ಕಿದೆ. ಗುರುವಾರದಿಂದ ಆರಂಭವಾಗಿದ್ದ ಎರಡನೇ ವಾರದ ಲಾಕ್ಡೌನ್ ರವಿವಾರಕ್ಕೆ ಕೊನೆಯಾಗಿದ್ದು, ಜಿಲ್ಲಾದ್ಯಂತ ಯಶಸ್ವಿ ಆಗಿದೆ. ಸಂಪೂರ್ಣ ಲಾಕ್ಡೌನ್ನಲ್ಲಿ ಆಸ್ಪತ್ರೆ ಗಳು, ಮೆಡಿಕಲ್ ಮತ್ತು ತುರ್ತು ಸೇವೆ ಹಾಗೂ ಅಗತ್ಯ ಸೇವೆಗಳು, ಹಾಲು, ಮೊಟ್ಟೆ ಮತ್ತು ಹೋಟೆಲ್ಗಳಲ್ಲಿ ಪಾರ್ಸೆಲ್ ಹೊರತು ಪಡಿಸಿ ಎಲ್ಲ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿತ್ತು.
ಹೀಗಾಗಿ ನಾಲ್ಕು ದಿನಗಳ ಬಹುತೇಕ ಜನರು ಮನೆಗಳಲ್ಲೇ ಬಂಧಿಯಾಗಿದ್ದರು. ಸೆಮಿ ಲಾಕ್ಡೌನ್ನಲ್ಲಿದ್ದ ತರಕಾರಿ ಮತ್ತು ದಿನಸಿ ವಸ್ತುಗಳ ಖರೀದಿಗೆ ಬೆಳಗಿನ ನಾಲ್ಕು ಗಂಟೆಗಳ ಅವಕಾಶವೂ ಸಂಪೂರ್ಣ ಲಾಕ್ಡೌನ್ನಲ್ಲಿ ಇರಲಿಲ್ಲ. ಹೀಗಾಗಿ ಅನವಶ್ಯಕವಾಗಿ ಜನರಿಗೆ ಹೊರ ಬರುವ ಪ್ರಮೇಯವೂ ಉದ್ಭವಿಸಲಿಲ್ಲ. ಒಂದೇ ವೇಳೆ ಬೇಕಾಬಿಟ್ಟಿ ಬಂದರೂ ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಸರ್ಪಗಾವಲು ಹಾಕಿರುತ್ತಿದ್ದರು. ಇದರಿಂದಾಗಿ ಶೋಕಿಗೆಂದು ಹೊರ ಬರುತ್ತಿದ್ದ ಯುವಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆಗಳಿಗೆ ವಾಪಸ್ ಹೋಗುತ್ತಿದ್ದರು.
ಜನ ಸಂಚಾರ, ವಾಹನ ಓಡಾಟ ಎರಡಕ್ಕೂ ಕಡಿವಾಣ ಬಂದಿತ್ತು. ಗುರುವಾರದಿಂದ ರವಿವಾರದವರೆಗೂ ಈ ಪರಿಸ್ಥಿತಿ ಇತ್ತು. ನಗರದ ಗಂಜ್ ಪ್ರದೇಶ, ಕಿರಾಣ ಬಜಾರ, ಸೂಪರ್ ಮಾರ್ಕೆಟ್, ಮುಸ್ಲಿಂ ಚೌಕ್, ದರ್ಗಾ ರಸ್ತೆ, ಜಗತ್ ವೃತ್ತ, ಲಾಲ್ಗೇರಿ ಕ್ರಾಸ್, ಸರ್ದಾರ ವಲ್ಲಭಬಾಯಿ ಪಟೇಲ ವೃತ್ತ, ಬಸ್ ನಿಲ್ದಾಣ, ರಾಮ ಮಂದಿರ ವೃತ್ತ ಸೇರಿದಂತೆ ಪ್ರಮುಖ ಪ್ರದೇಶಗಳು, ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆಟೋ ಹಾಗೂ ಖಾಸಗಿ ವಾಹನಗಳ ಸಂಚಾರ ಪೂರ್ತಿ ನಿಂತಿದ್ದರಿಂದ ರೈಲಿನ ಮೂಲಕ ಬಂದಿದ್ದ ಪ್ರಯಾಣಿಕರ ಪರದಾಟ ರವಿವಾರವೂ ಮುಂದುವರೆದಿತ್ತು. ಕೆಲವೆಡೆ ಜನರು ಟಾಂಗಾಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಇತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್
MUST WATCH
ಹೊಸ ಸೇರ್ಪಡೆ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್