40 ಸಾವಿರ ಸಸಿ ನೆಟ್ಟು ಪೋಷಿಸಿದ ಉದ್ಯೋಗ ಖಾತ್ರಿ ಕಾರ್ಮಿಕರು

ಹಸಿರೀಕರಣಕ್ಕೂ ಉದ್ಯೋಗ ಖಾತ್ರಿ ವರದಾನ,ಕೂಲಿ ಕಾರ್ಮಿಕರಿಗೂ ನಿರಂತರ ಕೂಲಿ ಕೆಲಸ,ಸರ್ಕಾರಿ ಸ್ವಾಧೀನದ ಭೂಮಿಯಲ್ಲಿ ಕಾರ್ಯಾಚರಣೆ,ಇಂಗುಗುಂಡಿ-ಬದು ನಿರ್ಮಾಣ

Team Udayavani, Feb 17, 2021, 6:48 PM IST

40 ಸಾವಿರ ಸಸಿ ನೆಟ್ಟು ಪೋಷಿಸಿದ ಉದ್ಯೋಗ ಖಾತ್ರಿ ಕಾರ್ಮಿಕರು

ಕಲಬುರಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ) ಕೂಲಿ ಕಾರ್ಮಿಕರು, ಬಡ ವರ್ಗದ ಜನರಿಗೆ ಉದ್ಯೋಗ ನೀಡುವುದಲ್ಲದೇ, ಹಸಿರೀಕರಣಕ್ಕೂವರದಾನವಾಗಿದೆ. ತಾಲೂಕಿನ ಹೊನ್ನಕಿರಣಗಿ ಗ್ರಾಮ ಪಂಚಾಯಿತಿ ಯೊಂದರಲ್ಲೇ  ಸುಮಾರು 40 ಸಾವಿರ ಸಸಿಗಳನ್ನು ನೆಟ್ಟುಮರಗಳನ್ನಾಗಿ ಬೆಳೆಸಿ “ಮನರೇಗಾ’ ಪೋಷಿಸುತ್ತಿದೆ.

ನಗರ ಪ್ರದೇಶದಿಂದ 25 ಕಿಲೋ ಮೀಟರ್‌ದೂರದ ಹೊನ್ನ ಕಿರಣಗಿ, ಫಿರೋಜಾಬಾದ್‌, ದಿನಸಿಣ್ಣೂರ ವ್ಯಾಪ್ತಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಘಟಕ ಸ್ಥಾಪನೆಗಾಗಿ 1,600 ಎಕರೆ ಭೂಮಿ ಗುರುತಿಸಲಾಗಿದೆ. ಈ ಘಟಕದವ್ಯಾಪ್ತಿಯ 21 ಕಿ.ಮೀ ಸುತ್ತಳತೆಯಲ್ಲಿ2016ರಲ್ಲಿ ಮನರೇಗಾ ಕೂಲಿ ಕಾರ್ಮಿಕರ ಮೂಲಕ ಬೇವು, ಮಾವು, ಹುಣಸಿ,ಬಸವನಪಾದ, ಆಕಾಶ ಮಲ್ಲಿಗೆ, ನೇರಳೆ,ಬಿದರು ಅರಳಿ, ಹೊಂಗೆ ಹೇಗೆ ವಿವಿಧ ಬಗೆಸಸಿಗಳನ್ನು ನೆಡಲಾಗಿದೆ. ಈಗ ಅವು 15ಅಡಿಗೂ ಹೆಚ್ಚು ಎತ್ತರ ಬೆಳೆದಿದ್ದು, ಅವುಗಳನ್ನು ಘೋಷಿಸುವ ಕೆಲಸ ಮನರೇಗಾದಡಿಯಲ್ಲೇ ಭರದಿಂದ ನಡೆಯುತ್ತಿದೆ.

ನಾಲ್ಕು ತಿಂಗಳು ನಿರಂತರ ಕೆಲಸ:

ಹಸಿರೀಕರಣವನ್ನು ಮನರೇಗಾ ಯೋಜನೆಯಲ್ಲೂ ಮಾಡಬಹುದು ಎನ್ನುವ ಪರಿಕಲ್ಪನೆ ತುಂಬಿದವರು ಐಎಎಸ್‌ ಅಧಿಕಾರಿ ಅನಿರುದ್ಧ ಶ್ರವಣ್‌. ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಅವರು ಈ ಉದ್ದೇಶಿತ ಉಷ್ಣ ವಿದ್ಯುತ್‌ಸ್ಥಾವರ ಘಟಕ ಪ್ರದೇಶದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಇಡೀ ಭೂಮಿ ಸರ್ಕಾರದ ಸ್ವಾಧೀನದಲ್ಲಿದ್ದು, ಯಾವುದೇ ಕಾಮಗಾರಿ ಆರಂಭವಾಗದ ಕಾರಣ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನುಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಕಾಂಪೌಂಡ್‌ ಪ್ರದೇಶಕ್ಕೆ ಹೊಂದಿಕೊಂಡುಮೂರು ಸಾಲುಗಳಲ್ಲಿ ಸಸಿ ನೆಡಲಾಗಿದೆ. ಅರಣ್ಯ ಇಲಾಖೆಯಿಂದ ಮೊದಲು 15 ಸಾವಿರ ಸಸಿ ಪಡೆದು ನೆಡಲಾಗಿದೆ. ಅಲ್ಲದೇ, ಪ್ರತಿ ಐದು ಮೀಟರ್‌ ಅಂತರದಲ್ಲಿ 30 ಸಾವಿರದಷ್ಟು ಬೀಜ ಬಿತ್ತಲಾಗಿದೆ. ಶೇ.80ರಷ್ಟು ಸಸಿಗಳು ಬೆಳೆದಿವೆ. ಸಸಿಗಳಿಗಾಗಿ ಗುಂಡಿ ತೋಡುವುದು ಮತ್ತು ಸಸಿಗಳನ್ನು ನೆಡುವುದು,ಬೀಜ ಬಿತ್ತುವುದರಿಂದ ಹಿಡಿದು ಪ್ರತಿಕೆಲಸವನ್ನು ಮನರೇಗಾ ಕೂಲಿ ಕಾರ್ಮಿಕರು ಮಾಡಿದ್ದಾರೆ. 2016ರಿಂದ ಇದುವರೆಗೆ ವರ್ಷದ ನಾಲ್ಕು ತಿಂಗಳು ಹಸಿರೀಕರಣದಲ್ಲೇಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಇಂಗು ಗುಂಡಿ ನಿರ್ಮಾಣ: ಹಸಿರೀಕರಣ ಕಾರ್ಯ ಆರಂಭವಾದ ವರ್ಷದಲ್ಲೇ ಮಳೆರಾಯ ಕೈಕೊಟ್ಟಿದ್ದ. ಸತತ ಮೂರು ವರ್ಷ ಬರ ಬಿದ್ದು,ಅಷ್ಟಾಗಿ ಸೌಂದರ್ಯ ಮೈದಳೆದಿರಲಿಲ್ಲ.

ಆದರೆ, ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಈಗ ಮರಗಳಲ್ಲಿ ಜೀವ ಕಳೆ ತುಂಬಿದೆ. ಇವುಗಳನ್ನು ನಿರಂತರವಾಗಿ ಪೋಷಿಸಬೇಕೆಂದು ಉದ್ದೇಶಿಸಿದ್ದ ಈಗ ಇಂಗು ಗುಂಡಿಗಳು ಮತ್ತು ಬದುಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. 21 ಕಿ.ಮೀ ವ್ಯಾಪ್ತಿಯಲ್ಲಿರುವ ಮರಗಳ ಮೂರು ಸಾಲಿನ ಮಧ್ಯೆ ಇಂಗು ಗುಂಡಿ ಮತ್ತುಬದು ನಿರ್ಮಿಸಲಾಗುತ್ತಿದೆ. ನಿತ್ಯ 700ಕ್ಕೂಹೆಚ್ಚು ಕೂಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಇಂಗು ಗುಂಡಿ, ಬದುಗಳಿಂದ ನೀರು

ಸಂಗ್ರಹವಾಗಲಿದೆ. ಇದರಿಂದ ಬೆಳೆದುನಿಂತಿರುವ ಮರಗಳು ಪೋಷಣೆ ಕಾರ್ಯಮಾಡಲಾಗುತ್ತಿದೆ. ಹಸಿರೀಕರಣ,ಅಂತರ್ಜಲ ವೃದ್ಧಿ, ಮರ-ಗಿಡಗಳ ಬೆಳಸುವಕೆಲಸಕ್ಕೂ ಮನರೇಗಾವನ್ನು ಸಮರ್ಪಕವಾಗಿಬಳಸಿಕೊಳ್ಳಬಹುದು ಎನ್ನುವುದುನ್ನು ಇದು ನಿರೂಪಿಸಿವಂತಿದೆ.

ವಿದ್ಯಾವಂತರಿಗೂ “ಮನರೇಗಾ’ ಸೈ :

“ಮನರೇಗಾ’ ಯೋಜನೆ ವಿದ್ಯಾವಂತರ ಕೈಯನ್ನು ಹಿಡಿದಿದೆ. ಹೊನ್ನ ಕಿರಣಗಿಯಲ್ಲಿ ನಡೆಯುತ್ತಿರುವ ಇಂಗುಗುಂಡಿ ಮತ್ತು ಬದುಗಳ ನಿರ್ಮಾಣಕಾರ್ಯದ ಕೂಲಿ ಕಾರ್ಮಿಕರಲ್ಲಿ 35 ವಿದ್ಯಾವಂತರು ಸೇರಿದ್ದಾರೆ. ಬಿಎ, ಪಿಯುಸಿ, ಐಟಿಐ, ಎಸ್ಸೆಸ್ಸೆಲ್ಸಿ ಓದಿರುವಯುವಕ-ಯುವತಿಯರು ಗುದ್ದಲಿ, ಬುಟ್ಟಿಹಿಡಿದು ಬೆವರು ಸುರಿಸುತ್ತಿದ್ದಾರೆ.ಓದು ಮುಗಿದ ಬಳಿಕ ದೊಡ್ಡ ಪಟ್ಟಣಗಳಿಗೆಹೋಗುವ ಮನಸ್ಸು ಆಗಲಿಲ್ಲ. ಊರಲ್ಲೇಏನಾದರೂ ಮಾಡಿದರೆ ಆಯ್ತು ಎಂದುಉಳಿದುಕೊಂಡಿದ್ದೆವು. ಕಳೆದ ಐದುವರ್ಷಗಳಿಂದ ಮನರೇಗಾ ಕೂಲಿಯೇ ಕೈಹಿಡಿದಿದೆ ಎನ್ನುತ್ತಾರೆ ಬಿಎ ಪದವೀಧರ ಸಂತೋಷ ಕುಮಾರ ಮತ್ತು ಪಿಯುಸಿ ಓದಿರುವ ಶರಬುಲಿಂಗ.

ನಾನು ಪಿಯುಸಿ ವಿಜ್ಞಾನ ವಿಷಯದಲ್ಲಿ ಶೇ.61ರಷ್ಟು ಅಂಕದೊಂದಿಗೆ ತೇರ್ಗಡೆ ಹೊಂದಿದ್ದೇನೆ. ನನ್ನ ಪತಿ ಸಂತೋಷಕುಮಾರ ಪಿಯುಸಿ ಮತ್ತು ಐಟಿಐ ಮುಗಿಸಿದ್ದಾರೆ. ಇಬ್ಬರೂ “ಮನರೇಗಾ’ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿದ್ದೇವೆ. ಬೆವರು ಸುರಿಸಿ ದುಡಿದು ತಿನ್ನಲು ನಮಗೆ ಯಾವುದೇ ಹಿಂಜರಿಕೆ ಇಲ್ಲ.ಗೊರಮ್ಮ, ಹೊನ್ನ ಕಿರಣಗಿ

ಬೆಳೆದು ನಿಂತ ಮರಗಳನ್ನು ಪೋಷಿಸುವ ನಿಟ್ಟಿನಲ್ಲಿ ಇಂಗು ಗುಂಡಿ ಮತ್ತು ಬದು ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 700ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಪ್ರತಿ 20 ಕೂಲಿ ಕಾರ್ಮಿಕರಿಗೆ ಒಬ್ಬ ಕಾಯಕ ಬಂಧು ನೇಮಿಸಲಾಗಿದೆ. ಕಾಯಕ ಬಂಧುಗಳು ಇಂಗು ಗುಂಡಿ, ಬದು ಗುರುತಿಸಿ ನಂತರ ಎಲ್ಲರಂತೆ ಅವರು ದುಡಿಯಲಿದ್ದಾರೆ. –ಸದಾನಂದ, ಕ್ಷೇತ್ರ ಸಹಾಯಕ, ಮನರೇಗಾ

 ಮನರೇಗಾ ಯೋಜನೆ ಗ್ರಾಮೀಣ ಭಾಗದ ಕೃಷಿ ಕೂಲಿ ಕಾರ್ಮಿಕರ ವಲಸೆ ತಡೆಯಲು ಸಹಕಾರಿಯಾಗಿದೆ. ಹೊನ್ನ ಕಿರಣಗಿ ಗ್ರಾ.ಪಂನಡಿ ಅತಿ ಹೆಚ್ಚು ಜನರು ಇದರ ಪ್ರಯೋಜನ ಪಡೆದಿದ್ದಾರೆ. ಹಸಿರೀಕರಣ ಕಾರ್ಯವೊಂದಕ್ಕೆ ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಮಾನವ ದಿನಗಳ ಸೃಜನೆಯಾಗಿದೆ. – ಚಂದ್ರಕಾಂತ ಜೀವಣಗಿ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ

 

ರಂಗಪ್ಪ ಗಧಾರ

ಟಾಪ್ ನ್ಯೂಸ್

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

10-uv-fusion

Theater: ಅಳಿವು ಉಳಿವಿನ ದವಡೆಯಲ್ಲಿ ರಂಗಭೂಮಿ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

9-fusion

Friendship: ಕೈಜಾರದಿರಲಿ ಗೆಳೆತನವೆಂಬ ಆಪ್ತ ನಿಧಿ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

8-uv-fusion

Smell of First Rain: ಹೊಸಮಳೆಯ ಮೃಣ್ಮಯ ಗಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.