![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ಐದು ಗ್ರಾಮಗಳಿಗೆ ವಕ್ಕರಿಸಿದ ಸೋಂಕು
Team Udayavani, Jun 1, 2020, 10:36 AM IST
![01-June-01](https://www.udayavani.com/wp-content/uploads/2020/06/01-June-01-620x377.gif)
ಆಳಂದ: ಮುಂಬೈನಿಂದ ಬಂದವರು ಇನ್ನೇನು ಕ್ವಾರಂಟೈನ್ ಅವಧಿ ಮುಗಿಯತು ಎಂದು ತಪಾಸಣೆ ವರದಿ ಬರುವ ಮೊದಲೆ ಮನೆಗಳಿಗೆ ತೆರೆಳಿ 7 ದಿನ ಅವಧಿಗಾಗಿ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದ ಸುಮಾರು 10 ಜನರಿಗೆ ಕೋವಿಡ್ ಸೋಂಕು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ತಾಲೂಕಿನ ಭೂಸನೂರ ಗ್ರಾಮದಲ್ಲಿ ಇಬ್ಬರು ಬಾಲಕಿಯರು ಮತ್ತು ಓರ್ವ ಬಾಲಕ ಹಾಗೂ ಓರ್ವ ಪುರುಷನಿಗೆ ಸೋಂಕು ಕಂಡು ಬಂದಿದೆ ಎಂದು ಆರೋಗ್ಯ ಇಲಾಖೆ ಹೇಳಿಕೊಂಡಿದೆ. ಮತ್ತೊಂದೆಡೆ ನರೋಣಾ ಕೆ. ತಾಂಡಾದಲ್ಲಿ ಓರ್ವ ಮಹಿಳೆ, ಕಿಣ್ಣಿಸುಲ್ತಾನ ತಾಂಡಾದಲ್ಲಿ 18 ವರ್ಷದ ಯುವತಿ, ಕೊರಳ್ಳಿಯ ಗ್ರಾಮದಲ್ಲಿ ಓರ್ವ ಯುವತಿ ಹಾಗೂ ಓರ್ವ ಮಹಿಳೆಗೆ ಸೋಂಕು ದೃಢಪಟಿದೆ. ಇವರೆಲ್ಲರು ಮುಂಬೈನಿಂದ ಆಗಮಿಸಿ ಗ್ರಾಮಗಳಲ್ಲಿನ ಕ್ವಾರಂಟೈನ್ಲ್ಲಿದ್ದರು. ಅಲ್ಲದೆ, ಧುತ್ತರಗಾಂವ ಗ್ರಾಮಕ್ಕೆ ಪುಣೆಯಿಂದ ಆಗಮಿಸಿದ್ದ ಓರ್ವ ಯುವತಿಗೂ ಕೋವಿಡ್-19 ಸೋಂಕು ತಗುಲಿದೆ.
ಇವರೆಲ್ಲರು ವಲಸೆ ಹೋಗಿ ಬಂದಿದ್ದರಿಂದ ಆಯಾ ಗ್ರಾಮಗಳ ಕ್ವಾರಂಟೈನ್ನಲ್ಲಿ ಸುಮಾರು 14 ದಿನಗಳವರೆಗೆ ಇರಿಸಲಾಗಿತ್ತು. ಅವಧಿ ಮುಗಿಯುತ್ತ ಬರುತ್ತಿದ್ದಂತೆ ಮನೆಗಳಿಗೆ ತೆರಳಿದ್ದಾರೆ. ಮನೆಗೆ ತೆರಳುವ ಮೊದಲು ಆರೋಗ್ಯ ಇಲಾಖೆಯಿಂದ ಇವರ ಗಂಟಲು ದ್ರವ ಮಾದರಿಯ ಪಡೆದು ತಪಾಸಣೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ವರದಿ ಬರುವ ತನಕ ಕ್ವಾರಂಟೈನ್ನಲ್ಲಿರಬೇಕಾದವರು ಮನೆಗಳಿಗೆ ಕಳುಹಿಸಲಾಗಿದೆ. ಮನೆಗೆ ಬಿಟ್ಟ ಎರಡ್ಮೂರು ದಿನಗಳಾದ ಬಳಿಕ ಈ 10 ಜನರಲ್ಲಿ ಸಕಾರಾತ್ಮಕವಾಗಿ ಸೋಂಕು ಪತ್ತೆಯಾದ ಮೇಲೆ ಮತ್ತೆ ಇವರೆಲ್ಲರನ್ನು ಹುಡುಕಿ ಆಸ್ಪತ್ರೆಗೆ ಸೇರಿಸಲಾಗಿದೆ. ಸುಮಾರು 14ನೇ ದಿನಗಳ ಕಾಲ ಇವರೆಲ್ಲರಿಗೂ ಸರ್ಕಾರಿ ಕ್ವಾರಂಟೈನ್ ಲ್ಲಿದ್ದಾಗ ಕೋವಿಡ್ ಸೋಂಕಿನ ಕುರಿತು ಯಾವುದೇ ಲಕ್ಷಣಗಳಿರಲಿಲ್ಲ. ತಪಾಸಣೆ ಬಳಿಕ ಸೋಂಕು ದೃಢಪಟ್ಟಿದ್ದು,ಇದರಿಂದ ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.
ಆಡಳಿತ ಹೈ ಅಲರ್ಟ್: ಕ್ವಾರಂಟೈನಲ್ಲಿದ್ದ ನೂರಾರು ಜನರ ಪೈಕಿ ಪ್ರಾಥಮಿಕ ವರದಿಯಲ್ಲಿ 10 ಜನರಿಗೆ ಯಾವುದೇ ಲಕ್ಷಣ ಇಲ್ಲವೆಂದು ವರದಿ ಬರುವ ಮೊದಲೆ ಮನೆಗೆ ಕಳುಹಿಸಿಲಾಗಿದೆ. ಆದರೆ ವರದಿಯಲ್ಲಿ ಸೋಂಕು ಪತ್ತೆಯಾಗಿದ್ದರಿದ ಈಗ ತಾಲೂಕು ಆಡಳಿತ ಹೈ ಅಲರ್ಟ್ ಆಗುವ ಮೂಲಕ ಕ್ವಾರಂಟೈನ್ ಮುಗಿದ ಮನೆಗೆ ತೆರಳಿದವರ ಮೇಲೂ ಹದ್ದಿನ ಕಣ್ಣಿಟ್ಟು, ಎಲ್ಲಾ ಕ್ವಾರಂಟೈನ್ಗಳ ಆರೋಗ್ಯದ ಮಾಹಿತಿ ಕಲೆಹಾಕಲು ಚುರುಕಿನ ಕಾರ್ಯಾಚರಣೆ ಆರಂಭಿಸಿದೆ.
ಸಭೆ ಕರೆದು ತಾಕೀತು: ಹೋಂ ಕ್ವಾರಂಟೈನ್ಗಳ ಮೇಲೆ ನಿಗಾವಹಿಸಲು ಸರ್ಕಾರ ಕ್ವಾರಂಟೈನ್ ವಾಚ್ ಆ್ಯಪ್ ಮೂಲಕ ಗ್ರಾಪಂ ಸಿಬ್ಬಂದಿ ಮನೆ, ಮನೆಗೆ ತೆರಳಿ ಅವರ ಆರೋಗ್ಯದ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸುವಂತೆ ತಹಶೀಲ್ದಾರ್ ದಯಾನಂದ ಪಾಟೀಲ ಗ್ರಾಪಂ ಸಿಬ್ಬಂದಿಗೆ ಭಾನುವಾರ ಸಭೆ ಕರೆದು ತಾಕೀತು ಮಾಡಿದ್ದಾರೆ.
ಕಟ್ಟುನಿಟ್ಟಿನ ಕ್ರಮ: ಕ್ವಾರಂಟೈನ್ನಲ್ಲಿದ್ದು 14 ದಿನಗಳ ಮುಗಿದವರಿಗೆ ಗಂಟಲು ದ್ರವದ ಮಾದರಿ ಪಡೆದು, ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಕೈಗೊಂಡು ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೆ ಇನ್ನೂ 7 ದಿನಗಳ ಕಾಲ ತಮ್ಮ ಮನೆಯಲ್ಲೂ ಸ್ವಯಂ ಕ್ವಾರಂಟೈನ್ ಕೈಗೊಳ್ಳುವಂತೆ ಸೂಚಿಸುತ್ತೇವೆ. ಹೋ ಕ್ವಾರಂಟೈನ್ಗೆ ಒಳಗಾದ ಈ 10 ಜನರಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂಳಿದ ಹೋಂ ಕ್ವಾರಂಟೈನ್ಗಳ ಮೇಲೆ ನಿಗಾವಹಿಸಲು ಆಶಾ ಕಾರ್ಯಕರ್ತೆಯರ ಮೂಲಕವೂ ವರದಿ ಪಡೆಯಲಾಗುತ್ತದೆ ಎಂದು ಆರೋಗ್ಯಾಧಿಕಾರಿ ಡಾ| ಶ್ರೀನಿವಾಸ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![13-sedam](https://www.udayavani.com/wp-content/uploads/2024/07/13-sedam-150x90.jpg)
Sedam: ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ, ಆರೋಪಿಗಳ ಬಂಧನಕ್ಕೆ ಆಗ್ರಹ
![1-sci](https://www.udayavani.com/wp-content/uploads/2024/07/1-sci-150x91.jpg)
Agricultural scientist ತಳಿ ಸಂಶೋಧಕ ಡಾ. ಎಸ್.ಎ.ಪಾಟೀಲ್ ನಿಧನ
![ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿದ್ದ ಶೆಡ್ ನೆಲಸಮ ಮಾಡಿದ ಅಧಿಕಾರಿಗಳು](https://www.udayavani.com/wp-content/uploads/2024/07/chikk1-150x83.jpg)
Kaduru; ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿದ್ದ ಶೆಡ್ ನೆಲಸಮ ಮಾಡಿದ ಅಧಿಕಾರಿಗಳು
![Serial Thief: ಚಿತ್ತಾಪುರ ಪಟ್ಟಣದ ಐದು ಮನೆಗಳಲ್ಲಿ ಕಳ್ಳತನ; ಸಿಸಿಟಿವಿಯಲ್ಲಿ ದೃಶ್ಯ ಸೆರೆ](https://www.udayavani.com/wp-content/uploads/2024/07/chittapura-1-150x84.jpg)
Serial Thief: ಚಿತ್ತಾಪುರ ಪಟ್ಟಣದ ಐದು ಮನೆಗಳಲ್ಲಿ ಕಳ್ಳತನ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
![Chittapura; ಹಾಡಹಗಲೇ ಕಳ್ಳತನ ಮಾಡಿದ ಆರೋಪಿಯ ಸೆರೆ, ಸೊತ್ತು ವಶ](https://www.udayavani.com/wp-content/uploads/2024/07/chittapura-150x94.jpg)
Chittapura; ಹಾಡಹಗಲೇ ಕಳ್ಳತನ ಮಾಡಿದ ಆರೋಪಿಯ ಸೆರೆ, ಸೊತ್ತು ವಶ
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.