

Team Udayavani, Jun 15, 2024, 12:31 PM IST
ಕಲಬುರಗಿ: ಕುವೈತ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿರುವ ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ ಗ್ರಾಮದ ವಿಜಯಕುಮಾರ ಪಾರ್ಥೀವ ಶರೀರ ಸ್ವಗ್ರಾಮ ಸರಸಂಬಾಕ್ಕೆ ತಡರಾತ್ರಿ ಆಗಮಿಸಿತು.
ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಸರಸಂಬಾ ಗ್ರಾಮಕ್ಕೆ ತಡರಾತ್ರಿ ಆಗಮನವಾಗಿದ್ದು, ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನೆರವೇರಿತು.
ಕುವೈತ್ ಅಗ್ನಿ ದುರಂತದಲ್ಲಿ ಸರಸಂಬಾ ಗ್ರಾಮದ ಟ್ರಕ್ ಡ್ರೈವರ್ ವಿಜಯಕುಮಾರ್ (40) ಸಹ ಸಾವಿಗೀಡಾಗಿದ್ದರು. ಮನೆ ಮಗನ ಸಾವಿನಿಂದ ವಿಜಯಕುಮಾರ ಕುಟುಂಬದಲ್ಲಿ ದು:ಖ ಮುಗಿಲು ಮುಟ್ಟಿದೆ.
ಮಗನನ್ನು ಕಳೆದುಕೊಂಡ ಹೆತ್ತವರ ರೋಧನ, ಪತಿಯನ್ನು ಕಳೆದುಕೊಂಡ ಪತ್ನಿಯ ಆಕ್ರಂದನ, ಅಪ್ಪನನ್ನು ಕಳೆದುಕೊಂಡ ಮಕ್ಕಳ ಕಣ್ಣೀರಧಾರೆ ಕಂಡು ಬಂತು. ಕುವೈತ್ ನಲ್ಲಿ ದುಡಿದು ಇತ್ತ ಊರಲ್ಲಿನ ಕುಟುಂಬಕ್ಕೆ ಹಣ ವಿಜಯಕುಮಾರ ಕಳುಹಿಸುತ್ತಿದ್ದರು.
ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿಯ ಸಾವಿನಿಂದ ಕಂಗಾಲಾಗಿರುವ ಮನೆಯವರ ಕಂಬನಿ ಕಟ್ಟೆಯೊಡೆದಿದೆ. ಇಡೀ ಗ್ರಾಮದಲ್ಲಿಯೇ ಸ್ಮಶಾನ ಮೌನವಾಗಿದೆಯಲ್ಲದೇ ಗ್ರಾಮಸ್ಥರು ಕಂಬನಿ ಮಿಡಿಯುತ್ತಿದ್ದಾರೆ.
Ad
ಅಕ್ಟೋಬರ್ದಲ್ಲಿ ಸಂಪುಟ ಪುನಾರಚನೆ… ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ: ಡಾ.ಅಜಯಸಿಂಗ್
Kalaburagi: ಹಾಡಹಗಲೇ ಜ್ಯವೆಲರಿ ಶಾಪ್ ಗೆ ನುಗ್ಗಿ ಗನ್ ತೋರಿಸಿ ದರೋಡೆ
Kalaburagi: ಹೃದಯಾಘಾತದಿಂದ ಕಾಲೇಜು ಉಪ ಪ್ರಾಂಶುಪಾಲ ಸಾವು
Kalaburagi: ರಸ್ತೆ ಕಾಮಗಾರಿ ಬಿಲ್ ಮಾಡಲು ಕಮಿಷನ್ ಕೇಳಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್
ಜನೌಷಧಿ ಕೇಂದ್ರ ಮುಚ್ಚುವ ರಾಜ್ಯ ಸರಕಾರ ಆದೇಶಕ್ಕೆ ಹೈಕೋರ್ಟ್ ತಡೆ
Udupi: ಖಾಸಗಿ ಬಸ್ಸುಗಳ ನಡುವೆ ಮುಖಾಮುಖಿ ಢಿಕ್ಕಿ – ಪ್ರಯಾಣಿಕರಿಗೆ ಗಾಯ
Vijayapura: ಕೊ*ಲೆ ಪ್ರಕರಣದ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು… ನಾಲ್ವರಿಗಾಗಿ ಶೋಧ
ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಸಿನಿಮಾ: ʼರಾಮಾಯಣʼದ ಬಜೆಟ್ ಎಷ್ಟು ಗೊತ್ತಾ?
Hubballi: ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆ ದಾಖಲಾಗಿದ್ದ ಯುವಕ ಚಿಕೆತ್ಸೆ ಫಲಿಸದೆ ಮೃ*ತ್ಯು
ಮಂಗಳೂರೂ: ನೂಯಿ-ಪೊಳಲಿ ದ್ವಾರ ರಸ್ತೆಯೇ ಸವಾಲು; ಇಲ್ಲಿ ರಸ್ತೆ ರಚನೆ ಹೇಗೆ?
You seem to have an Ad Blocker on.
To continue reading, please turn it off or whitelist Udayavani.