ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿದ್ದ ಟಂ ಟಂ ವಾಹನ: ಬಾಲಕ ದುರ್ಮರಣ
Team Udayavani, Nov 14, 2022, 4:14 PM IST
ಯಡ್ರಾಮಿ: ಪಟ್ಟಣದ ಹೊರವಲಯದಲ್ಲಿರುವ ಚಿಗರಳ್ಳಿಗೆ ಹೋಗುವ ಮುಖ್ಯ ರಸ್ತೆಗೆ ಅಡ್ಡಲಾಗಿ ಹಾದು ಹೋಗಿರುವ ಕ್ಯಾನಲ್ ಗೆ ಕೂಲಿ ಕಾರ್ಮಿಕರ ಹೊತ್ತೊಯ್ಯುತ್ತಿದ್ದ ಟಂ ಟಂ ವಾಹನ ಕಾಲುವೆಗೆ ಬಿದ್ದು ಪಟ್ಟಣದ ಬಾಲಕ ದುರ್ಮರಣಕ್ಕೀಡಾದ ಘಟನೆ ನಡೆದಿದೆ.
ಯಡ್ರಾಮಿ ನಿವಾಸಿ, ಬಿಸಿಲು ನಾಡಿನ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಶಫೀವುಲ್ಲಾ ದಖನಿ ಅವರ ಕಿರಿಯ ಪುತ್ರ ಆದೀಲಷಾಹಿ (14) ದುರ್ಮರಣಕ್ಕೀಡಾದ ಬಾಲಕ.
ರವಿವಾರ ಶಾಲೆಗೆ ರಜೆ ಇದ್ದ ಕಾರಣ ಓಣಿಯಲ್ಲಿನ ಮಹಿಳೆಯರ ಜತೆಗೆ ಹತ್ತಿ ಬಿಡಿಸಲು ಹೋಗಿದ್ದಾನೆ. ಹತ್ತಿ ಬಿಡಿಸಿಕೊಂಡು 8 ಜನ ಕೂಲಿ ಮಹಿಳೆಯರ ಜತೆಗೆ ಬಾಲಕ ಆದಿಲ್ ಷಾಹಿ ಟಂ ಟಂ ವಾಹನದಲ್ಲಿ ಕುಳಿತಿದ್ದಾನೆ. ನಾಲ್ಕೈದು ಹತ್ತಿ ತುಂಬಿದ ಚೀಲಗಳುನ್ನು ಹೊತ್ತು ಮನೆಗೆ ತರುತ್ತಿರುವ ಟಂ ಟಂ ರವಿವಾರ ಸಾಯಂಕಾಲ ಪಲ್ಟಿಯಾಗಿ ಪಕ್ಕದಲ್ಲಿರುವ ಕಾಲುವೆಗೆ ಬಿದ್ದಿದೆ. ಅದೇ ದಾರಿಯಲ್ಲಿ ಹೋಗುತ್ತಿರುವ ಕಬ್ಬಿನ ಟ್ರ್ಯಾಕ್ಟರ್ ಚಾಲಕರ ಸಮಯಪ್ರಜ್ಞೆಯಿಂದ ತಮ್ಮಲ್ಲಿರುವ, ಕಬ್ಬಿಗೆ ಬಿಗಿಯುವ ಹಗ್ಗಗಳನ್ನು ತಕ್ಷಣ ಕಾಲುವೆಗೆ ಎಸೆದು 8ಜನ ಕೂಲಿ ಮಹಿಳೆಯರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಇದನ್ನೂ ಓದಿ: ಗೋವಾ ರಾಜ್ಯದ ಅಭಿವೃದ್ಧಿಯಲ್ಲಿ ಕನ್ನಡಿಗರ ಕೊಡುಗೆ ಹೆಚ್ಚಿದೆ : ಶಾಸಕ ದಾಜಿ ಸಾಲ್ಕರ್
ಆದರೆ ದುರ್ದೈವಿ ಆದಿಲ್ ಷಾಹಿ ನೀರಲ್ಲಿ ಬಿದ್ದ ನಂತರ ಮುಳುಗಿದವ ಮೇಲೆ ಏಳಲೇ ಇಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರವಿವಾರ ಸಂಜೆಯಿಂದಲೇ ಬಾಲಕನ ಪತ್ತೆಗಾಗಿ ಕಾಲುವೆಗೆ ಇಳಿದ ಯುವಕರ ತಂಡ ರಾತ್ರಿಯಿಡೀ ಹುಡುಕಿದರೂ ಬಾಲಕ ಪತ್ತೆಯಾಗಿರಲಿಲ್ಲ.
ಸೋಮವಾರ ಬೆಳಿಗ್ಗೆ 11ರ ಸುಮಾರಿಗೆ ಮೃತ ಬಾಲಕನ ದೇಹ ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
MUST WATCH
ಹೊಸ ಸೇರ್ಪಡೆ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ