ದೇವಸ್ಥಾನದಲ್ಲಿ ರಾಜಕೀಯ ಮಾತನಾಡುವುದಿಲ್ಲ: ಗಾಣಗಾಪುರ ದತ್ತನ ದರ್ಶನ ಪಡೆದ ಡಿಕೆಶಿ
Team Udayavani, Jan 30, 2020, 11:34 AM IST
ಕಲಬುರಗಿ: ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಗುರುವಾರ ಕಲಬುರಗಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗಾಣಗಾಪುರಕ್ಕೆ ಭೇಟಿ ನೀಡಿದರು.
ಗಾಣಗಾಪುರದ ದತ್ತಾತ್ರೇಯನ ದೇವಸ್ಥಾನಕ್ಕೆ ತೆರಳಿದ ಡಿ.ಕೆ.ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಗಾಣಗಾಪುರದ ದತ್ತನ ಪಾದ ಪವಿತ್ರವಾದಂತಹ ಪಾದ. ಇದು ನಮ್ಮ ರಾಜ್ಯದಲ್ಲಿ ಬಹಳ ಪವಿತ್ರವಾದ ಸ್ಥಳ ಎಂದರು.
ಮಹಾರಾಷ್ಟ್ರ ಆಂಧ್ರಪ್ರದೇಶ, ಕರ್ನಾಟಕದಿಂದ ಅನೇಕರು ಬಂದು ತಮ್ಮ ಮನೋಕಾಮನೆಗಳು ತೋಡಿಕೊಳ್ಳುತ್ತಾರೆ. ನಾನೂ ಹಿಂದೆ ಕೂಡ ಬಂದಿದ್ದೆ. ಇವತ್ತು ಕೂಡ ಬಂದು ಪೂಜೆ ಸಲ್ಲಿಸಿದ್ದೇನೆ. ಒಂದೇ ಸ್ಥಳದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ದರ್ಶನ ಮಾಡಿದ್ದು, ದತ್ತನ ನಿರ್ಗುಣ ಪಾದದ ದರ್ಶನ ನನಗೆ ದೊರೆತಿದೆ ಎಂದರು.
ಅನುದಾನ ರದ್ದಾಗಿದೆ: ಈ ಹಿಂದೆ ಗಾಣಗಾಪುರದ ಸಂಗಮದಲ್ಲಿ ಒಂದು ಕೆಲಸ ಆಗಬೇಕು ಅಂತಾ ನಮ್ಮ ಶಾಸಕರು ಹೇಳಿದ್ದರು. ಈಗ ಅದರ ಕೆಲಸ ನಡೆಯುತ್ತಿದೆ. ಇದರಿಂದ ನನಗೆ ಸಂತೋಷವಾಗಿದೆ ಎಂದು ಡಿಕೆಶಿ ತಿಳಿಸಿದರು.
ಆದರೆ, ಅಧಿಕಾರ ಇರೋದು ಜನರಿಗೆ ಸಹಾಯ ಮಾಡೋದಕ್ಕೆ. ಯಾರೋ ಕೊಟ್ಟಂತಹ ಕಾರ್ಯಕ್ರಮ ರದ್ದು ಮಾಡುವುದಕ್ಕಲ್ಲ. ನಾನು ಕೊಟ್ಟ ಅನುದಾನ ರದ್ದಾಗಿದೆ. ದತ್ತಾತ್ರೇಯ ನೋಡಿಕೊಳ್ಳುತ್ತಾನೆ. ನಾನು ಕೊಟ್ಟ ಅನುದಾನ 5 ಕೋಟಿ ರೂ. ಕಡಿತಗೊಳಿಸಿರುವ ಬಗ್ಗೆ ನಾನು ಈಗ ಮಾತಾಡಲ್ಲ. ದೇವಸ್ಥಾನದಲ್ಲಿ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ