![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
ಹಾವಿನ ಫೋಟೋಗೆ ಲೈಕ್ ಮಾಡ್ಬೇಡಿ: ಗೌರಿಶಂಕರ್
Team Udayavani, Feb 14, 2017, 3:09 PM IST
![gul3.jpg](https://www.udayavani.com/wp-content/uploads/2017/02/14/gul3.jpg)
ಕಲಬುರಗಿ: ದಯವಿಟ್ಟು ಫೇಸ್ಬುಕ್ನಲ್ಲಿ ಹಾವಿನ ಫೋಟೋ ಹಿಡಕೊಂಡು ಸ್ಟೇಟಸ್ ಹಾಕಿಕೊಳ್ಳುವ ಜನರ, ಸ್ನೇಹಿತರ ಅಕೌಂಟ್ ಗಳಿಗೆ ಲೈಕ್ ಮಾಡಿ ಪ್ರೋತ್ಸಾಹಿಸಬೇಡಿ. ಇದರಿಂದ ಹಾವುಗಳಿಗೆ ಕಂಟಕ ಎದುರಾಗುತ್ತದೆ ಎಂದು ಶಿವಮೊಗ್ಗದ ಆಗುಂಬೆಯ ಕಾಳಿಂಗ ಸರ್ಪ ಮತ್ತು ಪರಿಸರ ವರ್ಷಾರಣ್ಯ ಕೇಂದ್ರದ ಸಂಸ್ಥಾಪಕ ನಿರ್ದೇಶಕ ಪಿ.ಗೌರಿಶಂಕರ ಹೇಳಿದರು.
ಸೋಮವಾರ ಇಲ್ಲಿನ ಗುವಿವಿಪ್ರಾಣಿಶಾಸ್ತ್ರ ವಿಭಾಗದ ಡಾರ್ವಿನ್ ಹಾಲ್ನಲ್ಲಿ ಪರಿಸರ ವಿಜ್ಞಾನ ವಿಭಾಗದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಪ್ರಕೃತಿಯಲ್ಲಿ ಕಳಿಂಗ ಸರ್ಪ ಬೆಳೆದು ಬಂದ ಇತಿಹಾಸ (ಎ ಜರ್ನಿ ಇನೂr ನಾಚುರಲ್ ಹಿಸ್ಟ್ರಿ ಆಫ್ ಕಿಂಗ್ ಕೋಬ್ರಾ) ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಾವುಗಳನ್ನು ಕೊಲ್ಲುವುದು ಹಾಗೂ ಹಿಡಿದು ಫೋಟೋ ತೆಗೆಸಿಕೊಳ್ಳುವುದನ್ನು ಮಾಡಲಾಗುತ್ತಿದೆ. ಇದರಿಂದ ಇಡೀ ಹಾವಿನ ಸಂತತಿಗೆ ಅಪಾಯವಿದೆ. ಸಾಮಾನ್ಯವಾಗಿ ಸುಖಾಸುಮ್ಮನೆ ಹಾವುಗಳು ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ. ಅವುಗಳಿಗೆ ನಮ್ಮಿಂದ ತೊಂದರೆಯಾದರೆ ಮಾತ್ರವೇ ತಮ್ಮ ಉಳಿವಿಕೆಗಾಗಿ ಪ್ರತಿ ದಾಳಿ ಮಾಡುತ್ತವೆ.
ನಾವೇ ಅವುಗಳಿಗೆ ತೊಂದರೆ ಕೊಡುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು. ಫೇಸ್ಬುಕ್ ಮತ್ತು ವ್ಯಾಟ್ಸಪ್ಗ್ಳಲ್ಲಿ ಹಾಕುವ ಫೋಟೋ ಮತ್ತು ಸ್ಟೇಟಸ್ಗಳನ್ನು ಲೈಕ್ ಮಾಡಿ ಪ್ರೋತ್ಸಾಹಿಸಬೇಡಿ. ಸಾಧ್ಯವಾದರೆ ಅದು ತಪ್ಪು ಎನ್ನುವ ಸಂದೇಶ ರವಾನಿಸಿ ಎಂದು ಮನವಿ ಮಾಡಿದರು.
ಹಾವು ಹಾಲು ಕುಡಿಯೋದಿಲ್ಲ: ಹಾವುಗಳು ಹಾಲು ಕುಡಿಯುವುದಿಲ್ಲ, ನೀರು ಕುಡಿಯುತ್ತವೆ. ಇದನ್ನು ತಿಳಿಯದ ನಾವು, ಹಬ್ಬ ಹರಿದಿನಗಳಲ್ಲಿ ಹಾಲನ್ನು ಕುಡಿಸುವ ಮೂಢನಂಬಿಕೆಯಿಂದ ಹೊರಬರಬೇಕಿದೆ. ಇದರಿಂದ ಹಾವುಗಳಿಗೂ ಹಿಂಸೆ ತಪ್ಪುತ್ತದೆ ಎಂದು ಹೇಳಿದರು.
ವಿಜ್ಞಾನ ವಿಭಾಗದ ಡಿನ್ ಪ್ರೊ| ಕೆ.ವೆಂಕಟರಮನ್, ಪ್ರಾಣಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಕೆ. ವಿಜಯಕುಮಾರ, ಪರಿಸರ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಪಕ ಡಾ| ಪ್ರಕಾಶ ಕರಿಯಜ್ಜನವರ್, ಪ್ರೊ| ಮುರುಳಿ ಜಡೇಶ್ ಇದ್ದರು. ವಿದ್ಯಾರ್ಥಿ ಅಮರೇಶ ಯಾಕಾಪುರ ನಿರೂಪಿಸಿದರು. ಡಾ| ಪ್ರಕಾಶ ಕರಿಯಜ್ಜನವರ ವಂದಿಸಿದರು.
ಟಾಪ್ ನ್ಯೂಸ್
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![13-sedam](https://www.udayavani.com/wp-content/uploads/2024/07/13-sedam-150x90.jpg)
Sedam: ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ, ಆರೋಪಿಗಳ ಬಂಧನಕ್ಕೆ ಆಗ್ರಹ
![1-sci](https://www.udayavani.com/wp-content/uploads/2024/07/1-sci-150x91.jpg)
Agricultural scientist ತಳಿ ಸಂಶೋಧಕ ಡಾ. ಎಸ್.ಎ.ಪಾಟೀಲ್ ನಿಧನ
![ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿದ್ದ ಶೆಡ್ ನೆಲಸಮ ಮಾಡಿದ ಅಧಿಕಾರಿಗಳು](https://www.udayavani.com/wp-content/uploads/2024/07/chikk1-150x83.jpg)
Kaduru; ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿದ್ದ ಶೆಡ್ ನೆಲಸಮ ಮಾಡಿದ ಅಧಿಕಾರಿಗಳು
![Serial Thief: ಚಿತ್ತಾಪುರ ಪಟ್ಟಣದ ಐದು ಮನೆಗಳಲ್ಲಿ ಕಳ್ಳತನ; ಸಿಸಿಟಿವಿಯಲ್ಲಿ ದೃಶ್ಯ ಸೆರೆ](https://www.udayavani.com/wp-content/uploads/2024/07/chittapura-1-150x84.jpg)
Serial Thief: ಚಿತ್ತಾಪುರ ಪಟ್ಟಣದ ಐದು ಮನೆಗಳಲ್ಲಿ ಕಳ್ಳತನ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-150x83.jpg)
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.