![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
ಸಚ್ಚಾರಿತ್ರ್ಯಾದಿಂದ ಸೌಭಾಗ್ಯ ಪ್ರಾಪ್ತಿ
Team Udayavani, Aug 21, 2018, 12:18 PM IST
![gul-1.jpg](https://www.udayavani.com/wp-content/uploads/2018/08/21/gul-1-620x202.jpg)
ಕಲಬುರಗಿ: ಸೌಭಾಗ್ಯ ಪಡೆಯಬೇಕು ಎಂಬ ಅಪೇಕ್ಷೆಯಿರುವ ಮಾನವರು ಸೌಶೀಲ್ಯ ಪಡೆಯಬೇಕು. ಗುಣವಂತರಾಗಬೇಕು. ಬಹು ಮುಖ್ಯವಾಗಿ ಧರ್ಮಾನುಷ್ಠಾನ ಮಾಡಬೇಕು. ಸಕಲರ ಸಮೃದ್ಧಿ ಬಯಸಬೇಕು. ಧರ್ಮ ಬೇಡ, ಗುಣವಂತಿಕೆ ಬೇಡ, ಸೌಭಾಗ್ಯ, ಸಮೃದ್ಧಿಗಳು ನಮ್ಮಲ್ಲಿ ಇರಲಿ ಎಂದು ಬಯಸಿದರೆ ಅದು ಈಡೇರುವುದಿಲ್ಲ ಎಂದು ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಹೇಳಿದರು.
ಚಾತುರ್ಮಾಸ್ಯ ಅಂಗವಾಗಿ ಎನ್.ವಿ. ಸಂಸ್ಥೆಯ ಶ್ರೀ ಸತ್ಯಪ್ರಮೋದ ಸಭಾಮಂಟಪದಲ್ಲಿ ಪ್ರವಚನ ನೀಡಿದ ಶ್ರೀಗಳು, ಸಂಪತ್ತು ಅಂದರೆ ದುಡ್ಡು ಮಾತ್ರವಲ್ಲ. ಲಕ್ಷ್ಮೀ ಅಂದರೆ ದುಡ್ಡು ಅಂತ ತಪ್ಪು ತಿಳಿದಿದ್ದಾರೆ. ಲಕ್ಷ್ಮೀ ಕೇವಲ ಸಂಪತ್ತಿನ ದೇವತೆಯಲ್ಲ. ಅಧಿಕಾರ, ಸಂಪತ್ತು, ದ್ರವ್ಯ, ಧನ, ಧೈರ್ಯ, ಸೌಂದರ್ಯ, ಕೀರ್ತಿ, ವಿಜಯ, ಕ್ಷಮಾಗುಣ, ಪ್ರೀತಿ, ವಿಶ್ವಾಸ, ಉತ್ತಮ ಚಾರಿತ್ರ್ಯಾ, ಗುಣಗಳು ಮಹಾಲಲಕ್ಷ್ಮೀ ಅನುಗ್ರಹದಿಂದ ಬರುವಂಥವು.
ಅನ್ಯಾಯ, ವಂಚನೆ, ಲಂಚ, ಮೋಸ, ಇನ್ನೊಬ್ಬರ ಕುತ್ತಿಗೆ ಕತ್ತರಿಸಿ ತಂದ ಸಂಪತ್ತು ನೆಮ್ಮದಿ ನೀಡುವುದಿಲ್ಲ. ಭಾರಿ ಸಂಪತ್ತು ಬಂತು ಅಂತ ಮೊದಲು ಅನಿಸುತ್ತದೆ. ಮನುಷ್ಯ ಮೊದಲು ಅಧರ್ಮದಿಂದ ಬೆಳೆಯುತ್ತಾನೆ. ಉಚ್ಚಾಯ ಆಗುತ್ತದೆ. ಇನ್ನು ತನ್ನ ಕೈಹಿಡಿಯೋರೇ ಇಲ್ಲ ಅಂತ ಅಂದುಕೊಳ್ಳುತ್ತಾನೆ. ಆದರೆ ಒಂದು ಸಲ ದೇವರು ಹೊಡೆತ ಕೊಡುತ್ತಾನೆ. ಆಗ ಬೇರು ಸಮೇತ ಕಿತ್ತುಹೋಗುತ್ತಾನೆ. ಹಾಗಾಗಿ ಅಧರ್ಮದಿಂದ ಸಂಪತ್ತು ಗಳಿಸಬಾರದು.
ಗುರುಗಳು, ಹಿರಿಯರು, ಬಂಧುಗಳು, ಅತಿಥಿಗಳನ್ನು ಗೌರವದಿಂದ ನೋಡಿಕೊಳ್ಳಬೇಕು. ಇವುಗಳೇ ಸಂಪತ್ತಿನ ಮೂಲಗಳು. ನಮ್ಮ ಆದರಾತಿಥ್ಯಗಳಿಂದ ಸಂಪ್ರೀತರಾಗುವ ಅವರೆಲ್ಲರ ಆಸೆ, ಶುಭಾಕಾಂಕ್ಷೆಗಳನ್ನು ಭಗವಂತ ನೆರವೇರಿಸಿ ಆಶೀರ್ವದಿಸುತ್ತಾನೆ. ಇಲ್ಲದಿದ್ದಲ್ಲಿ ಅವರ ಶಾಪವನ್ನೂ ಸತ್ಯವಾಗಿಸುತ್ತಾನೆ. ಹಾಗಾಗಿ ಮನುಷ್ಯ ಎಚ್ಚರದಿಂದ ಇರಬೇಕು. ಗುರುಗಳ ಸೇವೆ ಮಾಡಬೇಕು. ಮನೆಯನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು. ಶುದ್ಧ ಚಾರಿತ್ರ್ಯಾ, ಬ್ರಹ್ಮಚರ್ಯದಿಂದ ಜೀವನ ನಡೆಸಬೇಕು ಎಂದು ವಿವರಣೆ ನೀಡಿದರು.
ಟಾಪ್ ನ್ಯೂಸ್
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![13-sedam](https://www.udayavani.com/wp-content/uploads/2024/07/13-sedam-150x90.jpg)
Sedam: ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ, ಆರೋಪಿಗಳ ಬಂಧನಕ್ಕೆ ಆಗ್ರಹ
![1-sci](https://www.udayavani.com/wp-content/uploads/2024/07/1-sci-150x91.jpg)
Agricultural scientist ತಳಿ ಸಂಶೋಧಕ ಡಾ. ಎಸ್.ಎ.ಪಾಟೀಲ್ ನಿಧನ
![ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿದ್ದ ಶೆಡ್ ನೆಲಸಮ ಮಾಡಿದ ಅಧಿಕಾರಿಗಳು](https://www.udayavani.com/wp-content/uploads/2024/07/chikk1-150x83.jpg)
Kaduru; ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿದ್ದ ಶೆಡ್ ನೆಲಸಮ ಮಾಡಿದ ಅಧಿಕಾರಿಗಳು
![Serial Thief: ಚಿತ್ತಾಪುರ ಪಟ್ಟಣದ ಐದು ಮನೆಗಳಲ್ಲಿ ಕಳ್ಳತನ; ಸಿಸಿಟಿವಿಯಲ್ಲಿ ದೃಶ್ಯ ಸೆರೆ](https://www.udayavani.com/wp-content/uploads/2024/07/chittapura-1-150x84.jpg)
Serial Thief: ಚಿತ್ತಾಪುರ ಪಟ್ಟಣದ ಐದು ಮನೆಗಳಲ್ಲಿ ಕಳ್ಳತನ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-150x83.jpg)
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.