ಕಲಬುರಗಿಯಲ್ಲಿ ಮುಂದುವರೆದ ಮಳೆ : ಹತ್ತಕ್ಮೂ ಹೆಚ್ಚು ಮನೆ ಕುಸಿತ : ಮಳೆಗೆ ಮೊದಲ ಬಲಿ
ಜನ ಜೀವನ ಅಸ್ತವ್ಯಸ್ತ
Team Udayavani, Jul 9, 2022, 10:08 PM IST
ಕಲಬುರಗಿ : ತುಂತುರು ಹಾಗೂ ಸ್ವಲ್ಪ ಜೋರಾಗಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಶನಿವಾರವೂ ಮುಂದುವರೆದಿದೆ.
ಸತತ ಮಳೆಯಿಂದ ಹೊಲಗಳಲ್ಲಿ ನೀರು ನಿಲ್ಲಲಾರಂಭಿಸಿದ್ದು, ಮನೆಗಳು ಸಹ ಬಿದ್ದಿರುವುದು ವರದಿಯಾಗಿದೆ. ಚಿತ್ತಾಪುರ ಪಟ್ಟಣದ ಸ್ಟೇಷನ್ ಪ್ರದೇಶದಲ್ಲಿ ಅರೀಪಾಬೇಗಂ ಗಂಡ ಸರ್ದಾರ್ ಅಲಿ (65) ಎನ್ನುವ ಮಹಿಳೆ ಸಾವನ್ನಪ್ಪಿದ್ದು, ಇತರ ಇಬ್ಬರು ಗಾಯಗೊಂಡಿದ್ದಾರೆ.
ಸತತ ಮಳೆಯಿಂದ ಜನಜೀವನ ಅಸ್ತವ್ಯಸ್ತ ಗೊಂಡಿದ್ದು, ನಗರ ಪ್ರದೇಶದಲ್ಲಂತು ನಾಗರೀಕರು ಮಳೆ ಹಿನ್ನೆಲೆಯಲ್ಲಿ ಹೊರಗೆ ಬಾರದೇ ಮನೆಯಲ್ಲೇ ಉಳಿದುಕೊಂಡಿರುವುದು ಕಂಡು ಬಂತು.
ವ್ಯಾಪಕ ಮಳೆ ಮುನ್ಸೂಚನೆ ಹಿನ್ನಡೆಯಲ್ಲಿ ಶನಿವಾರ ಶಾಲಾ ಕಾಲೇಜುಗಳಿಗೆ ಶುಕ್ರವಾರ ಸಂಜೆಯೇ ಜಿಲ್ಲಾಧಿಕಾರಿ ಯಶವಂತ ಗುರುಕರ್ ಆದೇಶ ಹೊರಡಿಸಿದ್ದರು.
ಗ್ರಾಮೀಣ ಭಾಗದಲ್ಲೂ ಸತತ ಮಳೆ ಸುರಿಯುತ್ತಿರುವುದರಿಂದ ರೈತರು ಸಹ ಹೊಲಗಳಿಗೆ ಹೋಗದೇ ಮನೆಯಲ್ಲಿ ಉಳಿದುಕೊಂಡಿರುವುದು ಕಂಡು ಬಂತು. ಒಟ್ಟಾರೆ ಸತತ ಜಿಟಿಪಿಟಿ ಹಾಗೂ ಸ್ವಲ್ಪ ಜೋರಾದ ಮಳೆಗೆ ಜಿಲ್ಲಾಡಳಿತ ನಿಗಾ ವಹಿಸಿದ್ದು, ತನ್ನ ಅಧೀನ ಅಧಿಕಾರಿಗಳಿಗೆ ಕೇಂದ್ರ ಸ್ಥಾನ ಬಿಡದಿರುವಂತೆ ನಿರ್ದೇಶನ ನೀಡಲಾಗಿದೆ.
ಭಾಗಶ ಬಿದ್ದ 10 ಮನೆಗಳು : ಸತತ ಮಳೆಗೆ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ 10ಕ್ಕೂ ಹೆಚ್ಚು ಮನೆಗಳು ಭಾಗಶ: ಬಿದ್ದಿವೆ. ಅದೇ ರೀತಿ ಇನ್ನೂ ಹಲವೆಡೆ ಮನೆಗಳು ಅಲ್ಪಸ್ವಲ್ಪ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ.
ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆ ಯಾದ್ಯಂತ 17.08 ಮೀ.ಮೀ. ಮಳೆಯಾಗಿದೆ. ಅತಿ ಹೆಚ್ಚಿನ ಮಳೆ ಚಿಂಚೋಳಿ ಹಾಗೂ ಶಹಾಬಾದ್ ತಾಲೂಕಿನಲ್ಲಿ 25 ಮೀ. ಮೀ ಮಳೆಯಾಗಿದೆ. ಅತಿ ಕಡಿಮೆ ಅಫಜಲಪುರ ತಾಲೂಕಿನಲ್ಲಿ 16. 7 ಮೀ.ಮೀ ಮಳೆಯಾಗಿದೆ.
ರೇನ್ ಕೊಟ್ ಗೆ ಮುಗಿ ಬಿದ್ದ ಜನತೆ
ಸತತ ಸುರಿಯುತ್ತಿರುವ ಮಳೆಯಿಂದ ಹಾಗೂ ಊಟಿಯಂತೆ ತಣ್ಣಗೆ ವಾತಾವರಣ ನಿರ್ಮಾಣವಾಗಿದ್ದರಿಂದ ಕಲಬುರಗಿ ನಗರದ ಪ್ರದೇಶದಲ್ಲಿ ರೇನ್ ಕೋಟ್ ಖರೀದಿ ಮಾಡಲು ಜನ ಮುಗಿ ಬಿದ್ದಿರುವುದು ಕಂಡುಬಂತು. ಒಟ್ಟಾರೆ ಸತತ ಜಿಟಿಪಿಟಿ ಮಳೆಯಿಂದ ರಸ್ತೆಗಳು ಜನರಿಲ್ಲದೇ ಕೆಲ ಸಮಯ ಭಣಗುಟ್ಟಿರುವುದು ಕಂಡು ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Sandalwood; ‘ಫಾರೆಸ್ಟ್’ನಲ್ಲಿ ಚಿಕ್ಕಣ್ಣ & ಟೀಂ
Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು
New Jersey: ಸ್ಥಳೀಯ ಶಾಪ್ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ