ಕೊಂಚೂರ-ವಾಡಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ


Team Udayavani, Feb 18, 2017, 3:38 PM IST

gul6.jpg

ವಾಡಿ: ವಿಪರೀತ ಹದಗೆಟ್ಟು ಸಂಕಟದ ಸಂಚಾರಕ್ಕೆ ಕಾರಣವಾಗಿದ್ದ ಕೊಂಚೂರ-ವಾಡಿ ಮಧ್ಯದ ರಸ್ತೆಯ ಅಭಿವೃದ್ಧಿಗೆ ಕೊನೆಗೂ ಚಾಲನೆ ದೊರೆತಿದ್ದು, ಪ್ರಯಾಣಿಕರು ಹಾಗೂ ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ನನೆಗುದಿಗೆ ಬಿದ್ದಿದ್ದ ಪಟ್ಟಣದಿಂದ ಕೊಂಚೂರ ಮತ್ತು ಬಳವಡಗಿ ಗ್ರಾಮಕ್ಕೆ ಕೂಡುವ ಆರು  ಕಿ.ಮೀ. ರಸ್ತೆ ಈ ಭಾಗದ ಜನರ ಗೋಳಾಟಕ್ಕೆ ಕಾರಣವಾಗಿತ್ತು.

ರಸ್ತೆಯುದ್ದಕ್ಕೂ ಜಲ್ಲಿಕಲ್ಲುಗಳ ರಾಶಿ ಹರಡಿಕೊಂಡು ರಸ್ತೆ ಅಧೋಗತಿಗೆ ತಲುಪಿತ್ತು.  ಬೈಕ್‌ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾಗಿತ್ತು. ಜೋಲಿ ಹೊಡೆಯುತ್ತಾ ಸಾಗಿಬರುತ್ತಿದ್ದ ಅನೇಕರು ಬೈಕ್‌ ಸ್ಕಿಡ್‌ ಆಗಿ ಬಿದ್ದು ಗಾಯಗೊಂಡ ಘಟನೆಗಳಿಗೂ ರಸ್ತೆ ಸಾಕ್ಷಿಯಾಗಿತ್ತು. ಸಂಬಂಧಿಸಿದ ಇಲಾಖೆಗಳ ಅಧಿಧಿಕಾರಿಗಳ ಬೇಜವಾಬ್ದಾರಿ, ಚುನಾಯಿತ ಜನಪ್ರತಿನಿಧಿಧಿಗಳ ನಿರ್ಲಕ್ಷéಕ್ಕೆ ಜನರು ಶಾಪ ಹಾಕುವಂತಾಗಿತ್ತು.

ಕೊಂಚೂರಿನಲ್ಲಿರುವ ಸುಪ್ರಸಿದ್ಧ ಶ್ರೀ ಹನುಮಾನ ದೇವಸ್ಥಾನ, ಪಕ್ಕದ ಬಳವಡಗಿ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀ ಏಲಾಂಬಿಕ ದೇವಸ್ಥಾನಕ್ಕೆ ಭೇಟಿ ನೀಡಲು ನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಜಿಲ್ಲೆಯ ವಿವಿಧೆಡೆಯ ಭಕ್ತರು, ಪಡಬಾರದ ಕಷ್ಟ ಪಡು ವಂತಾ ಗಿತ್ತು. ಹಾರಿ ಬರುತ್ತಿದ್ದ ದಟ್ಟವಾದ ಧೂಳು, ಜೀವ ಹಿಂಡುತ್ತಿದ್ದ ಜಲ್ಲಿಕಲ್ಲುಗಳ ಹಾಸಿಗೆ, ಯಮ ಲೋಕಕ್ಕೆ ಮಾರ್ಗ ತೋರುವಂತಿದ್ದ ತಗ್ಗುಗಳು ಆಡಳಿತಕ್ಕೆ ಕನ್ನಡಿ ಹಿಡಿದ್ದವು.

ಕೊನೆಗೂ ಎಚ್ಚೆತ್ತುಕೊಂಡಿರುವ ಲ್ಯಾಂಡ್‌ ಆರ್ಮಿ ಅಧಿಕಾರಿಗಳು, ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿದ್ದಾರೆ.  2.58 ಕೋಟಿ ರೂ. ವೆಚ್ಚದಡಿ 4 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಜಲ್ಲಿಕಲ್ಲಿನ ರಸ್ತೆಯೀಗ ಡಾಂಬರ್‌ ರಸ್ತೆಯಾಗಿ  ಬದಲಾಗುತ್ತಿದ್ದು, ಜನರಲ್ಲಿ ಹರ್ಷ ಮೂಡಿಸಿದೆ. ಈ ರಸ್ತೆಯ ದುಸ್ಥಿತಿ ಕುರಿತು ಡಿ.19 ರಂದು “ಊರು ಮುಟ್ಟೋತನ ಬೆನ್ನಟ್ಟೋ ಧೂಳು’ ಶಿರ್ಷಿಕೆಯಡಿ “ಉದಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. 

* ಮಡಿವಾಳಪ್ಪ ಹೇರೂರ

Ad

ಟಾಪ್ ನ್ಯೂಸ್

Dubai: 2024ರಲ್ಲಿ ಸೌದಿ ಅರೇಬಿಯಾದಲ್ಲಿ 345 ಮಂದಿಗೆ ಗಲ್ಲು ಶಿಕ್ಷೆ: ದಾಖಲೆ

Dubai: 2024ರಲ್ಲಿ ಸೌದಿ ಅರೇಬಿಯಾದಲ್ಲಿ 345 ಮಂದಿಗೆ ಗಲ್ಲು ಶಿಕ್ಷೆ: ದಾಖಲೆ

R.Ashok

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಪ್ರಶ್ನೆಯೇ ಇಲ್ಲ: ಆರ್‌.ಅಶೋಕ್‌

Lorry-Straike

ಸರಕಾರದಿಂದ 250 ಕೋಟಿ ರೂ. ಬಾಕಿ: ರಾಜ್ಯವ್ಯಾಪಿ ಅಕ್ಕಿ ಲಾರಿ ಮುಷ್ಕರ

52

Horoscope: ಈ ರಾಶಿಯವರಿಗಿಂದು ಅಕಸ್ಮಾತ್‌ ಧನಾಗಮವಾಗಲಿದೆ

SMg–women

ದೆವ್ವ ಬಿಡಿಸುವ ನೆಪದಲ್ಲಿ ಪೂಜೆ, ಅಸ್ವಸ್ಥಗೊಂಡ ಮಹಿಳೆ ಸಾ*ವು

Basavaraj-Rayareddy

ಸರಕಾರದ ಆರ್ಥಿಕ ಸ್ಥಿತಿ ಸುಧಾರಿಸಿದರೆ ಪುರುಷರಿಗೂ ಉಚಿತ ಬಸ್‌: ಬಸವರಾಜ ರಾಯರಡ್ಡಿ

Nelamangala–women

ನೆಲಮಂಗಲ: 45 ದಿನದ ಶಿಶುವನ್ನು ಹಂಡೆಯಲ್ಲಿ ಮುಳುಗಿಸಿ ಕೊಂದ ತಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Recruitment process for 540 posts in the Forest Department has begun: Minister Eshwar Khandre

Recruitments: ಅರಣ್ಯ ಇಲಾಖೆಯಲ್ಲಿ 540 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭ: ಸಚಿವ ಖಂಡ್ರೆ

Kalaburagi: Tell people about the 100-year history of RSS: Minister Priyank Kharge

Kalaburagi: ಆರ್‌ಎಸ್‌ಎಸ್ ನ ನೂರು ವರ್ಷದ ಇತಿಹಾಸ ಜನರಿಗೆ ತಿಳಿಸಿ: ಸಚಿವ ಪ್ರಿಯಾಂಕ್ ಖರ್ಗೆ

Kalaburagi: 150 sand mafia in Chittapur, Sedam, government silent: Nikhil Kumaraswamy

Kalaburagi: ಚಿತ್ತಾಪುರ, ಸೇಡಂನಲ್ಲಿ 150 ಮರಳು ಮಾಫಿಯಾ; ಸರ್ಕಾರ ಮೌನ: ನಿಖಿಲ್ ತರಾಟೆ

ಸ್ವಚ್ಛ, ಸುಂದರ, ಪರಿಸರ ಸ್ನೇಹಿ ಕಲಬುರಗಿ ನಿರ್ಮಾಣಕ್ಕೆ 5 ಹಂತಗಳ ಯೋಜನೆ: ಪ್ರಿಯಾಂಕ್ ಖರ್ಗೆ

ಸ್ವಚ್ಛ, ಸುಂದರ, ಪರಿಸರ ಸ್ನೇಹಿ ಕಲಬುರಗಿ ನಿರ್ಮಾಣಕ್ಕೆ 5 ಹಂತಗಳ ಯೋಜನೆ: ಪ್ರಿಯಾಂಕ್ ಖರ್ಗೆ

BRPATIL

ಇನ್ಮುಂದೆ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಲ್ಲ: ಬಿ.ಆರ್‌.ಪಾಟೀಲ್‌

MUST WATCH

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

udayavani youtube

ಸಾವಯವ ಅಕ್ಕಿ ಹಾಗೂ ಸಾವಯವ ಧಾನ್ಯಗಳ ಬಗ್ಗೆ ಮಾಹಿತಿ

ಹೊಸ ಸೇರ್ಪಡೆ

Dubai: 2024ರಲ್ಲಿ ಸೌದಿ ಅರೇಬಿಯಾದಲ್ಲಿ 345 ಮಂದಿಗೆ ಗಲ್ಲು ಶಿಕ್ಷೆ: ದಾಖಲೆ

Dubai: 2024ರಲ್ಲಿ ಸೌದಿ ಅರೇಬಿಯಾದಲ್ಲಿ 345 ಮಂದಿಗೆ ಗಲ್ಲು ಶಿಕ್ಷೆ: ದಾಖಲೆ

R.Ashok

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಪ್ರಶ್ನೆಯೇ ಇಲ್ಲ: ಆರ್‌.ಅಶೋಕ್‌

Lorry-Straike

ಸರಕಾರದಿಂದ 250 ಕೋಟಿ ರೂ. ಬಾಕಿ: ರಾಜ್ಯವ್ಯಾಪಿ ಅಕ್ಕಿ ಲಾರಿ ಮುಷ್ಕರ

52

Horoscope: ಈ ರಾಶಿಯವರಿಗಿಂದು ಅಕಸ್ಮಾತ್‌ ಧನಾಗಮವಾಗಲಿದೆ

SMg–women

ದೆವ್ವ ಬಿಡಿಸುವ ನೆಪದಲ್ಲಿ ಪೂಜೆ, ಅಸ್ವಸ್ಥಗೊಂಡ ಮಹಿಳೆ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.