ರೊಟ್ಟಿ ಕೊಟ್ಟಿಲ್ಲವೆಂದು ವೃದ್ಧನ ಹತ್ಯೆ
Team Udayavani, Mar 17, 2022, 3:14 PM IST
ಅಫಜಲಪುರ: ಹೊಲದಲ್ಲಿ ಊಟಕ್ಕೆ ಕುಳಿತಿದ್ದ ವೃದ್ಧನೊಬ್ಬ ಕೇಳಿದ್ರೂ ರೊಟ್ಟಿ ಕೊಡಲಿಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬ ಪಕ್ಕದಲ್ಲೇ ಇದ್ದ ಕಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿದ ಘಟನೆ ತಾಲೂಕಿನ ಗೊಬ್ಬೂರ (ಬಿ) ಗ್ರಾಮದಲ್ಲಿ ಬುಧವಾರ ನಡೆದಿದೆ.
ಗೊಬ್ಬೂರ (ಬಿ) ಗ್ರಾಮದ ನಿವಾಸಿ ಸುಲೇಮಾನ್ ಶಹಾಬುದ್ದಿನ್ ಪಾನವಾಲೆ (70) ಕೊಲೆಯಾದ ವ್ಯಕ್ತಿ. ಕೊಲೆ ಆರೋಪಿ ಹೂವಿನ ಹಳ್ಳಿ ಗ್ರಾಮದ ನಿವಾಸಿ ದಿಲೀಪ್ ದಶರಥಸಿಂಗ್ ಠಾಕೂರನನ್ನು ದೇವಲಗಾಣಗಾಪುರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಸುಲೇಮಾನ್ ತನ್ನ ಹೊಲದಲ್ಲಿ ಹುಣಸೆ ಮರದ ಕೆಳಗೆ ಊಟ ಮಾಡುತ್ತಾ ಕುಳಿತಿದ್ದಾಗ ಅದೇ ಮಾರ್ಗದಲ್ಲಿ ಹೊರಟಿದ್ದ ದಿಲೀಪ್ ತನಗೂ ರೊಟ್ಟಿ ನೀಡುವಂತೆ ಕೇಳಿದ್ದ. ಸುಲೇಮಾನ್ ರೊಟ್ಟಿ ಕೊಡಲು ನಿರಾಕರಿಸಿದ್ದರಿಂದ ಕುಪಿತನಾದ ದಿಲೀಪ್ ಪಕ್ಕದಲ್ಲೇ ಬಿದ್ದಿದ್ದ ಕಟ್ಟಿಗೆ ತೆಗೆದುಕೊಂಡು ಹೊಡೆದಿದ್ದಾನೆ. ಈ ವೇಳೆ ತೀವ್ರ ರಕ್ತಸ್ರಾವ ಆಗಿದ್ದರಿಂದ ಸುಲೇಮಾನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಡಿವೈಎಸ್ಪಿ ರವೀಂದ್ರ ನಾಯ್ಕೋಡಿ, ಸಿಪಿಐ ಜಗದೇವಪ್ಪ ಪಾಳಾ ಮಾರ್ಗದರ್ಶನದಲ್ಲಿ ದೇವಲಗಾಣಗಾಪುರ ಪೊಲೀಸ್ ಸಿಬ್ಬಂದಿ ಆರೋಪಿಯನ್ನು ಒಂದು ಗಂಟೆಯೊಳಗೆ ಬಂಧಿಸಿದ್ದಾರೆ.
ಸ್ಥಳಕ್ಕೆ ದೇವಲ ಗಾಣಗಾಪುರ ಪಿಎಸ್ಐ ರಾಜಶೇಖರ ರಾಠೊಡ, ಸಿಬ್ಬಂದಿಗಳಾದ ಪಂಚಾಕ್ಷರಿ, ಪ್ರದೀಪ, ಪ್ರಭು ಪಾಟೀಲ, ಮಲ್ಲಿಕಾರ್ಜುನ, ಫಯಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ