ಗಳ ಗಳನೆ ಅತ್ತ ನಮೋಶಿ
Team Udayavani, Apr 17, 2018, 6:50 AM IST
ಕಲಬುರಗಿ: ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ, ವಿಧಾನ ಪರಿಷತ್ ಮಾಜಿ ಸದಸ್ಯ ಶಶೀಲ್
ನಮೋಶಿಗೆ ಟಿಕೆಟ್ ಸಿಗದಿದ್ದಕ್ಕೆ ನಮೋಶಿ ಗಳಗಳನೇ ಅತ್ತು ಅಸಮಾಧಾನ ಹೊರ ಹಾಕಿದರು. ಬಳಿಕ ಸುದ್ದಿಗಾರರ ಜೊತೆ
ಮಾತನಾಡಿ, ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ ಇಡುವುದಾಗಿ ತಿಳಿಸಿದರು. ಇದೇ ವೇಳೆ, ಅವರ ಬೆಂಬಲಿಗರು ನಗರದ ಆನಂದ ಹೋಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಬೇಳೂರು ಅಭಿಮಾನಿಗಳ ದಾಂಧಲೆ: ಬಿಜೆಪಿಯಿಂದ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಮಾನಿಗಳು ಬಿಜೆಪಿ ಪ್ರಚಾರ ವಾಹನಕ್ಕೆ ಕಲ್ಲು ತೂರಿ ಹಾನಿ ಮಾಡಿದ ಘಟನೆ ಸೋಮವಾರ ಸಂಜೆ ನಡೆದಿದೆ. ಪ್ರತಿಭಟನೆ ನಡೆಯುತ್ತಿದ್ದ ಸಮಯದಲ್ಲಿಯೇ ಬಿಜೆಪಿ ಎಲ್ಇಡಿ ಪ್ರಚಾರ ಬರುತ್ತಿತ್ತು. ಏಕಾಏಕಿ ಕಲ್ಲುಗಳನ್ನು ತೂರಿ ವಾಹನ ಜಖಂ ಗೊಳಿಸಿದರು.
ಇದೇ ವೇಳೆ, ಕಾರಿನಲ್ಲಿ ತೆರಳುತ್ತಿದ್ದ ಹಾಲಪ್ಪ ಅವರ ಆಪ್ತ, ವಿನಾಯಕ ರಾವ್ ಎಂಬುವರ ಮೇಲೆ ಬೇಳೂರು ಅಭಿಮಾನಿಗಳು ಹಲ್ಲೆ ನಡೆಸಿದ್ದು, ಗಾಯಗೊಂಡಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.
ಜೆಡಿಎಸ್ಗೆ ಪ್ರಕಾಶ ಖಂಡ್ರೆ?
ಬೀದರ: ಟಿಕೆಟ್ ಕೈ ತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಪ್ರಕಾಶ ಖಂಡ್ರೆ, ಮಂಗಳವಾರ ಬೆಂಬಲಿಗರ ಸಭೆ ನಡೆಸಿ ತಮ್ಮ ಮುಂದಿನ ರಾಜಕೀಯ ನಡೆ ಕುರಿತು ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಮೂಲಗಳ ಪ್ರಕಾರ ಅವರು ಜೆಡಿಎಸ್ ಸೇರುವ ಸಾಧ್ಯತೆ ಇದೆ.