ನಾಳೆ ಎರಡನೇ ಹಂತದ ಭೀಮಾ ನದಿ ಶುದ್ಧೀಕರಣ
Team Udayavani, Jul 21, 2018, 4:56 PM IST
ಕಲಬುರಗಿ: ನದಿಗೆ ಕಾರ್ಖಾನೆಗಳ ತ್ಯಾಜ್ಯ ಸೇರ್ಪಡೆ ಹಾಗೂ ಇತರ ಅಕ್ರಮಗಳಿಂದ ಮಲೀನಗೊಳ್ಳುತ್ತಿರುವ ನದಿಗಳ ಸ್ವತ್ಛತಾ ಕಾರ್ಯದ ಅಂಗವಾಗಿ ಜುಲೈ 22ರಂದು ಜಿಲ್ಲೆಯ ಜೀವನಾಡಿ ಭೀಮಾನದಿ ಶುದ್ಧೀಕರಣ ಕಾರ್ಯ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ರಾಜ್ಯದ ಏಳು ಜೀವ ನದಿಗಳ ಸ್ವತ್ಛತೆ ಕೈಗೊಂಡಿದ್ದು, ಎರಡನೇ ಹಂತವಾಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಘತ್ತರಗಿಯಲ್ಲಿ ಜು. 22ರಂದು ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಶುದ್ಧೀಕರಣ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಯುವ ಬ್ರಿಗೇಡ್ನ ಸುನೀಲಕುಮಾರ್ ದೇಸಾಯಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಜುಲೈ 8ರಂದು ಸುಮಾರು 120ಕ್ಕೂ ಅಧಿಕ ಕಾರ್ಯಕರ್ತರು ಘತ್ತರಗಿ ನದಿಯಲ್ಲಿ ಸುಮಾರು 60 ಟನ್ಗೂ ಅಧಿ ಕ ತ್ಯಾಜ್ಯವನ್ನು ಹೊರತೆಗೆಯಲಾಗಿದೆ. ಈಗ ಎರಡನೇ ಹಂತದಲ್ಲಿ ಮತ್ತೂಮ್ಮೆ ಕೈಗೊಳ್ಳಲಾಗಿದೆ. ಭೀಮಾ ನದಿಯು ಉತ್ತರ ಕರ್ನಾಟಕದ ಜೀವನಾಡಿ ಹಾಗೂ ಜೀವ ನದಿಯೂ ಹೌದು. ಕರ್ನಾಟಕದಲ್ಲಿ 286 ಕಿ.ಮೀ. ಹರಿದು 18315 ಚ.ಕಿ.ಮೀ.ಗಳಷ್ಟು ಜಲಾನಯನ ಪ್ರದೇಶ ಹೊಂದಿದೆ. ಕುಡಿಯುವ ನೀರು, ಕೃಷಿ, ಕೈಗಾರಿಕೆಗಳಿಗೆ ಮೂಲ ಆಕರ ಭೀಮಾ ನದಿ. ಕೇವಲ ಕರ್ನಾಟಕಕ್ಕೆ ಅಷ್ಟೇ ಅಲ್ಲ, ಮಹಾರಾಷ್ಟ್ರ, ತೆಲಂಗಾಣಗಳಿಗೂ ಅನ್ವಯಿಸಿದೆ.
ನದಿಯ ತಟದಲ್ಲಿ ಪುಣ್ಯಕ್ಷೇತ್ರಗಳಿಗೇನೂ ಕಡಿಮೆ ಇಲ್ಲ. ಅದರಲ್ಲಿಯೂ ಗಾಣಗಾಪುರ, ಘತ್ತರಗಿ ಕ್ಷೇತ್ರಗಳು ಪ್ರಮುಖವಾಗಿವೆ. ಭಕ್ತಾದಿಗಳು ಕೊಳೆಯನ್ನು ತೊಳೆಯುವ ಭರದಲ್ಲಿ ಇಡೀ ಭೀಮೆಯನ್ನು ಕಸದ ತೊಟ್ಟಿಯನ್ನಾಗಿ ಮಾರ್ಪಡಿಸಿದ್ದಾರೆ. ಬದಲಾಯಿಸುವ ಹೊಣೆ ಈಗ ನಮ್ಮದಾಗಿದೆ ಎಂದು ವಿವರಣೆ ನೀಡಿದರು.
ಮನೆಯ ಕಸ,ತ್ಯಾಜ್ಯ, ಕಾರ್ಖಾನೆ ಕೊಳಕನ್ನು ಮತ್ತು ರಾಸಾಯನಿಕಯುಕ್ತ ವಿಷವನ್ನು ನದಿಗೆ ಉಣಿಸುತ್ತಿದ್ದೇವೆ. ಬೆಂಗಳೂರಿನ ಪ್ರಭಾವತಿ ನದಿಯಿಂದು ಚರಂಡಿಯಾಗಿ ಮಾರ್ಪಟ್ಟಿದೆ. ಆ ರೀತಿ ಭೀಮಾ ನದಿ ಆಗಬಾರದು. ಎಲ್ಲರೂ ನಮ್ಮೊಂದಿಗೆ ಕೈ ಜೋಡಿಸಿ. ಭೀಮಾ ನದಿಗೆ ತ್ಯಾಜ್ಯ ಸೇರಿಸುವುದನ್ನು ನಿಲ್ಲಿಸೋಣ. ಒಂದು ರವಿವಾರ ಭೀಮೆಗೆ ಮೀಸಲಿಡೋಣ ಎನ್ನುವ ನಿಟ್ಟಿನಲ್ಲಿ ಜು. 22ರಂದು ಬೆಳಗ್ಗೆ 6 ಗಂಟೆಗೆ ಭಾಗವಹಿಸಬೇಕೆಂದು ಕೋರಿದರು.
ಮುಂದಿನ ದಿನಗಳಲ್ಲಿ ಗಾಣಗಾಪುರ ಸೇರಿದಂತೆ ಇನ್ನಿತರ ಪವಿತ್ರ ಕ್ಷೇತ್ರಗಳನ್ನು ಸ್ವತ್ಛಗೊಳಿಸಲಾಗುತ್ತದೆ ಎಂದರು. ಸುನೀಲ ಶೆಟ್ಟಿ, ಸಂಜುಕುಮಾರ ಭಾವಿಕಟ್ಟಿ, ಸಂತೋಷ ಸಾಮ್ರಾಟ, ಅನೀಲ ದೇಸಾಯಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್
MUST WATCH
ಹೊಸ ಸೇರ್ಪಡೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು