ಜಮೀನು ವಕ್ಫ್ ಬೋರ್ಡ್ಗೆ ಹಸ್ತಾಂತರ
Team Udayavani, Aug 20, 2022, 3:03 PM IST
ಅಫಜಲಪುರ: ತಾಲೂಕಿನ ಮಾತೋಳಿ ಗ್ರಾಮದಲ್ಲಿ ಅನೇಕ ವರ್ಷಗಳಿಂದ ರೈತರು ಉಳುಮೆ ಮಾಡುತ್ತಿದ್ದ ಜಮೀನನ್ನು ಹೈಕೋರ್ಟ್ ಆದೇಶದ ಮೇರೆಗೆ ವಕ್ಫ್ ಬೋರ್ಡ್ಗೆ ಹಸ್ತಾಂತರ ಮಾಡಿಸಲಾಗಿದೆ ಎಂದು ತಹಶೀಲ್ದಾರ್ ಸಂಜೀವಕುಮಾರ ದಾಸರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾತೋಳಿ ಗ್ರಾಮದಲ್ಲಿ 35 ಎಕರೆ ಜಮೀನನ್ನು ಎಂಟು ರೈತರು ಉಳುಮೆ ಮಾಡಿಕೊಂಡಿದ್ದರು. ಆದರೆ ಈ ಆಸ್ತಿ ವಕ್ಫ್ ಬೋರ್ಡ್ನವರದ್ದಾಗಿದೆ ಎಂದು ವಕ್ಫ್ ಬೋರ್ಡ್ನ ಮೈನುದ್ದಿನ್ ಖಾಜಿ ಮುತವಲಿ ಎನ್ನುವರು ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿ ಗೆದ್ದಿದ್ದಾರೆ. ಹೈಕೋರ್ಟ್ ಖಾಜಿ ಮುತವಲಿ ಅವರಿಗೆ ಜಮೀನು ಬಿಡಿಸಿ ಕೊಡುವಂತೆ ಸೂಚಿಸಿದ್ದರಿಂದ ಪೊಲೀಸ್ ಬಂದೋಬಸ್ತ್ನಲ್ಲಿ ರೈತರಿಂದ ಜಮೀನು ಬಿಡಿಸಿ ವಕ್ಫ್ ಬೋರ್ಡ್ನವರಿಗೆ ಕೊಡಿಸಿದ್ದೇವೆ ಎಂದರು.
ಹೊಲ ಕಳೆದುಕೊಂಡ ರೈತರ ಕಣ್ಣೀರು: ಸುಮಾರು 60 ವರ್ಷಗಳಿಂದ ಜಮೀನಿನಲ್ಲಿ ಬೇಸಾಯ ಮಾಡಿ ಕೊಂಡಿದ್ದ ರೈತರು ಒಮ್ಮೆಲೆ ಜಮೀನು ಕೈತಪ್ಪಿ ಹೋಗುತ್ತಿರುವುದನ್ನು ನೋಡಿ ಕಣ್ಣೀರಿಟ್ಟರು. ಅಫಜಲಪುರ, ದೇವಲ ಗಾಣಗಾಪುರ, ರೇವೂರ(ಬಿ) ಠಾಣೆ ಪೊಲೀಸ್ರು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಈ ಸಂದರ್ಭದಲ್ಲಿ ಮಾತೋಳಿ ಗ್ರಾಮಸ್ಥರು, ರೈತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು