ಅಶೋಕ ನಗರ ರಸ್ತೆ ಅಗಲೀಕರಣಕ್ಕೆ ಕ್ರಮ
ಮಾಲಿಕರ ಅನುಮತಿ ಪತ್ರ ಪಡೆದು ಕಟ್ಟಡ ತೆರವು ಮಾಡಿ: ಡೀಸಿ ಮಂಜುನಾಥ್
Team Udayavani, Sep 28, 2019, 5:28 PM IST
ಕೆಜಿಎಫ್: ಅಶೋಕ ನಗರ ರಸ್ತೆ ಅಗಲೀಕರಣ ಮಾಡಲು ಸಹಮತ ಇರುವ ಕಟ್ಟಡ ಮಾಲಿಕರ ಅನುಮತಿ ಪತ್ರ ಪಡೆದು ತೆರವು ಮಾಡಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಮಂಜುನಾಥ್ ಸೂಚಿಸಿದರು.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಡನೆ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ರಸ್ತೆಯ ಎರಡೂ ಬದಿಯಲ್ಲಿ 25 ಮೀಟರ್ ಅಗಲೀಕರಣವಾಗಬೇಕು. ಬಹಳಷ್ಟು ಕಡೆ ಅಕ್ರಮ ಕಟ್ಟಡ ನಿರ್ಮಾಣ ಮಾಡಲಾಗಿದೆ. ಎರಡು ಕಿ.ಮೀ. ರಸ್ತೆ ಅಗಲೀಕರಣ ಸಂಪೂರ್ಣವಾಗಲು 230 ಮೀಟರ್ ಬಾಕಿ ಇದೆ ಎಂದರು.
ಆರು ಬಾರಿ ವಿಚಾರಣೆ: ಕೆಲವು ಮಂದಿ ಸ್ವಯಂಪ್ರೇರಿತರಾಗಿ ಕಟ್ಟಡವನ್ನು ಬಿಟ್ಟುಕೊಡಲು ಮುಂದೆ ಬಂದಿದ್ದಾರೆ. ಉಳಿದವರು ಹೈಕೋರ್ಟಿಗೆ ಹೋಗಿದ್ದರು. ಕೋರ್ಟಿನಿಂದ ಕಟ್ಟಡ ಮಾಲಿಕರ ವೈಯಕ್ತಿಕ ವಿವರ ಮತ್ತು ಹೇಳಿಕೆ ಪಡೆದುಕೊಂಡು ನಿರ್ಧಾರ ತೆಗೆದುಕೊಳ್ಳುವಂತೆ ಸೂಚನೆ ಬಂದಿದೆ.
ಅದರಂತೆ 15 ಮಂದಿಯನ್ನು ಆರು ಬಾರಿ ವಿಚಾರಣೆ ನಡೆಸಲಾಗಿದೆ. ಶೀಘ್ರದಲ್ಲಿಯೇ ನಿರ್ಧಾರ ಪ್ರಕಟಿಸಲಾಗುವುದು ಎಂದು ಹೇಳಿದರು. ಮನವೊಲಿಕೆ ಮಾಡಿ: ಈ ಮಧ್ಯೆ ಕಟ್ಟಡ ಬಿಟ್ಟುಕೊಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದಿರುವವರ ಬಳಿ ಒಪ್ಪಿಗೆ ಪತ್ರ ಪಡೆದುಕೊಂಡು ಕಟ್ಟಡ ತೆರವು ಮಾಡಬೇಕು. ಕೋರ್ಟಿಗೆ ಹೋದವರನ್ನೂ ಸ್ವಯಂಪ್ರೇರಿತರಾಗಿ ಬಿಟ್ಟುಕೊಡುವಂತೆ ಮನವೊಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಮ್ಮತಿ ಪತ್ರ: ಬಿ.ಎಂ.ರಸ್ತೆಯಲ್ಲಿ ಎಸ್ಬಿಎಂ ಪಕ್ಕದಲ್ಲಿರುವ ಪ್ರಿಯ ಬಾರ್ ಮುಂಭಾಗದ ರಸ್ತೆ ಒತ್ತುವರಿಯಾಗಿದೆ. ಅಲ್ಲಿ ಸಂಜಯಗಾಂಧಿ ನಗರಕ್ಕೆ ಹೋಗುವ ರಸ್ತೆಯನ್ನೂ ಒತ್ತುವರಿ ಮಾಡಲಾಗಿದೆ. ದಾಖಲೆ ಪರಿಶೀಲಿಸಿ ತೆರವು ಮಾಡುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದರು. ಇಲ್ಲಿರುವ ಬಾರ್ ವರ್ಗಾವಣೆ ಮಾಡಲು ಕೋರಿದ್ದಾರೆ.
ಅವರ ಸಮ್ಮತಿ ಪತ್ರ ಪಡೆದು ಕಾರ್ಯಾಚರಣೆ ನಡೆಸಲಾಗುವುದು. ಸ್ಥಳದಲ್ಲಿದ್ದ ನಗರಸಭೆ ಆಯುಕ್ತ ಸಿ.ರಾಜು ಮಾತನಾಡಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತೆರವು ಮಾಡಿಕೊಟ್ಟರೆ, ನಗರಸಭೆಯಿಂದ ಫುಟ್ ಪಾತ್ ಮಾಡ್ತೇವೆ ಎಂದರು.
ಸ್ಥಳದಲ್ಲಿದ್ದ ಕೆಲವು ಕಾಂಗ್ರೆಸ್ ಮುಖಂಡರು ಮಾತನಾಡಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ. ಹೈಕೋರ್ಟ್ ಆದೇಶ ಮಾಡಿದ್ದರೂ, ಐದು ತಿಂಗಳ ನಂತರ ಆದೇಶದ ಪ್ರತಿ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಇಇ ಬದರಿನಾಥ್, ಎಇಇ
ಅಮರಪ್ಪ, ಜೆಇ ಹನುಮಪ್ಪ, ಪಿಡಿ ರಂಗಸ್ವಾಮಿ, ಡಿವೈಎಸ್ಪಿ ಬಿ.ಎಲ್. ಶ್ರೀನಿವಾಸಮೂರ್ತಿ, ಎಇಇ ಶ್ರೀಧರ್, ಪರಿಸರ ಎಇ ರವೀಂದ್ರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ