ಕುಸಿಯುವ ಹಂತದಲ್ಲಿ ಜಿಲ್ಲಾಡಳಿತ ಭವನದ ತಡೆಗೋಡೆ: ಮಡಿಕೇರಿ – ಮಂಗಳೂರಿಗೆ ಪರ್ಯಾಯ ಮಾರ್ಗ
Team Udayavani, Jul 18, 2022, 1:13 AM IST
ಮಡಿಕೇರಿ: ಜಿಲ್ಲಾಡಳಿತ ಭವನಕ್ಕೆ ರಕ್ಷಣೆ ಒದಗಿಸಬೇಕಾದ ಭಾರೀ ಗಾತ್ರದ ತಡೆಗೋಡೆ ಕುಸಿಯುವ ಅಪಾಯವನ್ನು ಎದುರಿಸುತ್ತಿದ್ದು, ಮುಂಜಾಗ್ರತ ಕ್ರಮವಾಗಿ ಬರೆಯಂಚಿನಲ್ಲೇ ಸಾಗಿ ಹೋಗುವ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಸ್ವಲ್ಪ ಸಮಯದ ಹಿಂದೆಯಷ್ಟೆ ತಡೆಗೋಡೆಯ ಕೆಳ ಭಾಗದ ಕೆಲವು ಸೀಮೆಂಟ್ ಸ್ಲ್ಯಾಬ್ ಗಳು ಹೊರ ಭಾಗಕ್ಕೆ ಸರಿದಿದ್ದವು. ಶನಿವಾರ ಸಂಜೆಯ ವೇಳೆಗೆ ಮತ್ತಷ್ಟು ಸಿಮೆಂಟ್ ಸ್ಲ್ಯಾಬ್ ಗಳು ಮುಂದಕ್ಕೆ ವಾಲಿಕೊಳ್ಳಲಾರಂಭಿಸಿದ್ದವು. ಲೋಕೋಪಯೋಗಿ ಇಲಾಖೆ ಸ್ಲ್ಯಾಬ್ ಗಳಿಗೆ ರಂಧ್ರಗಳನ್ನು ಕೊರೆದು, ನೀರು ಹರಿದುಹೋಗುವಂತೆ ಮಾಡಿ ಮಣ್ಣಿನ ಒತ್ತಡ ತಡೆಯುವ ವಿಫಲ ಯತ್ನ ನಡೆಸಿತ್ತು. ಅನಂತರ ಮತ್ತಷ್ಟು ಸ್ಲ್ಯಾಬ್ ಗಳು ಹೊರಚಾಚಿಕೊಳ್ಳಲಾ ರಂಭಿಸಿದ್ದವು. ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆಗಳ ಹಿನ್ನೆಲೆ ಶನಿವಾರ ರಾತ್ರಿ ಮಡಿಕೇರಿ-ಮಂಗಳೂರು ರಸ್ತೆ ಸಂಚಾರವನ್ನು ನಿರ್ಬಂಧಿಸಲಾಯಿತು.
ಪ್ರತಿಭಟನೆ
ಜಿಲ್ಲಾಡಳಿತದ ಈ ಏಕಾಏಕಿ ನಿರ್ಧಾರವನ್ನು ವಿರೋಧಿಸಿ ರಾತ್ರಿಯ ಅವಧಿಯಲ್ಲಿ ಮಳೆಯ ನಡುವೆ ವಿವಿಧೆಡೆಗಳಿಂದ ಮಂಗಳೂರಿನತ್ತ ತೆರಳುತ್ತಿದ್ದ ಪ್ರಯಾಣಿಕರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ.
ಮಂಗಳೂರಿಗೆ ಪರ್ಯಾಯ ಮಾರ್ಗ
ಮೇಕೇರಿ-ಕಾಟಕೇರಿ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಸಮಸ್ಯೆಯಿಂದ ಮಂಗಳೂರು ಕಡೆಗೆ ತೆರಳುವವರು ಅಂದಾಜು 10 ಕಿ.ಮೀ. ಬಳಸು ಹಾದಿಯನ್ನು ಬಳಸುವುದು ಅನಿವಾರ್ಯ ವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ