ಶಿಕ್ಷಕನಿಗೆ ಏಷ್ಯಾಬುಕ್‌ ಆಫ್ ರೆಕಾರ್ಡ್ಸ್‌ ಪುರಸ್ಕಾರ


Team Udayavani, Feb 6, 2023, 3:12 PM IST

tdy-17

ಕೋಲಾರ: ವಿಜ್ಞಾನಿ ಆಗುವ ಕನಸು ಕಂಡು, ಕೊನೆಗೆ ಶಿಕ್ಷಕರಾಗಿ ಸರ್ಕಾರಿ ಶಾಲೆಯ ಪ್ರತಿ ವಿದ್ಯಾರ್ಥಿಯನ್ನು ವಿಜ್ಞಾನಿ ಆಗಿಸುವ ಕನಸು ಹೊತ್ತು ಶ್ರಮಿಸುತ್ತಿರು ವವರು ಕೋಲಾರದ ಸಂಪನ್ಮೂಲ ಶಿಕ್ಷಕ ಸಿ. ಮುನಿರಾಜುಗೆ ಏಷ್ಯಾಬುಕ್‌ ಆಫ್ ರೆಕಾರ್ಡ್‌ ಪುರಸ್ಕಾರ ದೊರೆತಿದೆ.

ಅಂತರಗಂಗೆ ಬೆಟ್ಟದ ಪಾಪರಾಜನಹಳ್ಳಿ ತಂದೆ ಚಿನ್ನಾರಪ್ಪ ತಾಯಿ ರತ್ನಮ್ಮರ ಮೂರನೇ ಪುತ್ರ ಸಿ.ಮುನಿರಾಜುಗೆ ಬಾಲ್ಯದಿಂದಲೂ ವಿಜ್ಞಾನಿ, ಯೋಧ ಇಲ್ಲವೇ ಶಿಕ್ಷಕನಾಗಬೇಕು ಎಂಬ ಮೂರು ಕನಸಿತ್ತು. ಬಿಎಸ್‌ಸಿ, ಬಿಇಡಿ ಪೂರ್ಣಗೊಳಿಸಿ ಎಂಜಿನಿಯರಿಂಗ್‌ ಕಾಲೇಜಿಗೆ ಸೇರಿದ್ದ ಮುನಿರಾಜು, ಬಡತನ ಕಾರಣಕ್ಕೆ ಅರ್ಧಕ್ಕೆ ಮೊಟಕುಗೊಳಿಸಿ ಡಿಇಡಿ ವಿದ್ಯಾರ್ಥಿಯಾದರು. 2006ರಲ್ಲಿ ಪೊಲೀಸ್‌ ಕೆಲಸಕ್ಕೆ ಆಯ್ಕೆಯಾಗಿ ತರಬೇತಿಯಲ್ಲಿದ್ದರು. ಅಷ್ಟರಲ್ಲಿ 2007ರಲ್ಲಿ ವಿಜ್ಞಾನ ಶಿಕ್ಷಕರಾದರು. ಈಗ ಕೋಲಾರ ತಾಲೂಕಿನ ಐತರಾಸಹಳ್ಳಿ ಸರ್ಕಾರಿ ಶಾಲೆಯಲ್ಲಿದ್ದು, ರಾಜ್ಯದ ಅತ್ಯುತ್ತಮ ವಿಜ್ಞಾನ ಶಿಕ್ಷಕರಾಗಿ ಗಮನ ಸೆಳೆಯುತ್ತಿದ್ದಾರೆ.

ರಾಜ್ಯ ಸಂಪ ನ್ಮೂಲ ವ್ಯಕ್ತಿಯಾಗಿ ರೂಪುಗೊಂಡಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ಕಬ್ಬಿಣದ ಕಡಲೆ ಆಗಿರುವ ವಿಜ್ಞಾನ, ಗಣಿತ ವಿಷಯವನ್ನು ತಾವೇ ತಯಾರಿಸಿದ ಕಲಿಕೋ ಪಕರಣಗಳ ಮೂಲಕ ಮಕ್ಕಳಿಗೆ ಕಲಿಸುವುದರಲ್ಲಿ ಸಿದ್ಧಹಸ್ತರು.

ಶಿಕ್ಷಕರಿಗೆ ಮಾದರಿ: ಕೊರೊನಾ ಕಾಲದಲ್ಲಿ ಸಮಯ ವ್ಯರ್ಥ ಮಾಡದೆ ಚಂದನ ವಾಹಿನಿಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ವಿಜ್ಞಾನ ಬೋಧಿಸಿದ್ದಾರೆ. ಗುರು ಚೇತನ ಕಾರ್ಯಕ್ರಮದಲ್ಲಿ 5 ವರ್ಷ ಕೆಲಸ ಮಾಡಿ ರಾಜ್ಯದ ಎಲ್ಲಾ ಶಿಕ್ಷಕರಿಗೆ ಬೋಧನಾ ತರಬೇತಿ ನೀಡಿದ್ದಾರೆ. ಸಂಚಲನ, ಸಮ್ಮಿಲನ, ವಿದ್ಯುತ್ಛಕ್ತಿ, ಗಾಳಿ ಒಂದು ಸಮನ್ವಯ ವಿಧಾನ ಹಾಗೂ ಮೌಲ್ಯ ಎಂಬ ಐದು ಮಾಡ್ನೂಲ್‌ಗ‌ಳನ್ನು ರಚಿಸಿ ಶಿಕ್ಷಕ ವರ್ಗಕ್ಕೆ ಮಾದರಿಯಾಗಿದ್ದಾರೆ.

ಸಂಪನ್ಮೂಲ ವ್ಯಕ್ತಿ: ಮಕ್ಕಳ ವಿಜ್ಞಾನ ಹಬ್ಬ ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕ್ಲಸ್ಟರ್‌, ಹೋಬಳಿ, ಜಿಲ್ಲಾ, ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ ಯಾಗಿ ಗಮನಸೆಳೆದಿದ್ದಾರೆ. ಎನ್‌ಸಿಇ ಆರ್‌ಟಿ, ಡಿಎಸ್‌ಇಆರ್‌ಟಿ ಪ್ರಾಯೋಜಿತ ಶಿಕ್ಷಕರಿಗೆ ತರಬೇತಿ ನೀಡುವ ನಿಷ್ಠಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ಯೂಟ್ಯೂಬ್‌ನಲ್ಲಿ ವಿಜ್ಞಾನ ಸೂತ್ರ: ಒಂದು ಸಾವಿರಕ್ಕೂ ಅಧಿಕ ಕಲಿಕೋಪಕರಣ ರೂಪಿಸಿರುವುದು ಇವರ ಹೆಗ್ಗಳಿಕೆ. ಮುನಿರಾಜು ಲ್ಯಾಬೋರೇಟರಿ ಹೆಸರಿನ ಯೂಟ್ಯೂಬ್‌ ಚಾನೆಲ್‌ ತೆರೆದು 500ಕ್ಕೂ ಹೆಚ್ಚು ವಿಜ್ಞಾನ ಪ್ರಯೋಗ ತಯಾರಿಸಿ, ಕನ್ನಡ ದಲ್ಲಿಯೇ ಅಪ್‌ಲೋಡ್‌ ಮಾಡಿದ್ದಾರೆ. ಈ ರೀತಿಯ ಇನ್ನೂ 1500 ಪ್ರಯೋಗ ಇವರ ಬತ್ತಳಿಕೆಯಲ್ಲಿದ್ದು, ಹಂತವಾಗಿ ಪೋಸ್ಟ್‌ ಮಾಡುವ ಮನಸಿದೆ ಎನ್ನುತಾರೆ ಮುನಿರಾಜು. ಅತ್ಯುತ್ತಮ ಪ್ರಯೋಗಾಲಯ: ಅಗಸ್ತ್ಯ ವಿಜ್ಞಾನ ಬಂಧು ಮತ್ತು ಟೀಚರ್‌ ಮಾಸ ಪತ್ರಿಕೆಗಳಲ್ಲಿ ಇವರ ಸಾಧನೆ ಕುರಿತ ಲೇಖನಗಳು ಪ್ರಕಟಗೊಂಡು ಇನ್ನಿತರ ವಿಜ್ಞಾನ ಶಿಕ್ಷಕರಿಗೆ ಸ್ಫೂರ್ತಿಯಾಗಿವೆ. ತಾನು ಪಾಠ ಮಾಡುತ್ತಿರುವ ಐತರಾಸನಹಳ್ಳಿ ಶಾಲೆಯಲ್ಲಿ ಮಾದರಿ ಯನ್ನಾಗಿಸಿ ಪ್ರೊಜೆಕ್ಟರ್‌ ಮೂಲಕ ಪಾಠ ಮಾಡುವು ದನ್ನು ನಿತ್ಯ ಅಭ್ಯಾಸವಾಗಿಸಿದ್ದಾರೆ. ಶಾಲೆಗೆ ತನ್ನದೇ ಹಾಗೂ ದಾನಿಗಳ ಸಹಕಾರದಿಂದ ಪೀಠೊಪಕರಣ ಒದಗಿಸಿದ್ದಾರೆ.

ಈಗ ಶಾಲೆಯಲ್ಲಿ ಅತ್ಯುತ್ತಮ ವಿಜ್ಞಾನ, ಗಣಿತ ಪ್ರಯೋಗಾಲಯ ರೂಪಿಸುತ್ತಿದ್ದಾರೆ. ಶಾಲಾ ಆವರಣದಲ್ಲಿ ಆಕರ್ಷಕ ಪುಷ್ಪ ಸಸ್ಯೋದ್ಯಾನ ನಿರ್ಮಿಸಿ, ಒಂದೆರೆಡು ತಿಂಗಳಲ್ಲಿ ಲೋಕಾರ್ಪಣೆ ಮಾಡುವ ಗುರಿ ಹೊಂದಿದ್ದಾರೆ.

ಉಪನ್ಯಾಸದ ಮೂಲಕ ಸಾಧನೆ : ಜೆಸಿಐ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ 253 ಶಾಲೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಏಕ ಕಾಲದಲ್ಲಿ ನಡೆಸಿದ ಕೌಶಲ್ಯ ಅಭಿವೃದ್ಧಿ, ವ್ಯಕ್ತಿತ್ವ ವಿಕಸನದಡಿ ಡಿಸಿಷನ್‌ ಮೇಕಿಂಗ್‌ ಬದುಕಿನಲ್ಲಿ ನಿರ್ಧಾರ ತೆಗೆದುಕೊಳ್ಳುವಿಕೆ ವಿಷಯ ಕುರಿತು ಉಪನ್ಯಾಸ ನೀಡಿ, ಏಷ್ಯನ್‌ ಬುಕ್‌ ಆಫ್ ರೆಕಾರ್ಡ್ಸ್‌ ನ ಭಾಗವಾಗಿ ಪ್ರಶಸ್ತಿ ಸ್ಪೀಕರಿಸಿದ್ದಾರೆ. ಈ ಯೋಜನೆ ಯಲ್ಲಿ ಭಾಗವಹಿಸಿದ ಕೋಲಾರ ಜಿಲ್ಲೆಯ ಏಕೈಕ ವಿಜ್ಞಾನ ಶಿಕ್ಷಕ ಮುನಿರಾಜು ಆಗಿದ್ದಾರೆ.

ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಶಕ್ತಿ: ಸಹಪಠ್ಯ ಚಟುವಟಿಕೆಗಳ ಟಿಎಲ್‌ಎಂ ತಯಾ ರಿಕಾ ಸ್ಪರ್ಧೆಯಲ್ಲಿ ಭಾಗವಹಿಸಿ, ಅನೇಕ ಬಾರಿ ಪ್ರಶಸ್ತಿ ಗಳಿಸಿರುವ ಇವರು, 8 ಬಾರಿ ತಮ್ಮ ವಿದ್ಯಾರ್ಥಿಗಳಿಂದ ಇನ್ಸ್‌ಫೈರ್‌ ಅವಾರ್ಡ್‌ ಗೆಲ್ಲುವಂತೆ ಮಾಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ದರ್ಶನ್‌ಗೌಡ ಎಂಬ ವಿದ್ಯಾರ್ಥಿ ಮೂಲಕ ತಯಾರಿಸಿದ್ದ ಸೈಕಲ್‌ ವೀಡರ್‌-ಸೈಕಲ್‌ ಬಳಸಿ ಕೊಂಡು ಉಳುಮೆ, ಬಿತ್ತನೆ, ಕಳೆ ತೆಗೆಯುವ, ಮಣ್ಣು ಹದ ಮಾಡುವ, ಕೂರಿಗೆ ಮಾಡುವ ಸಾಧನದ ಮಾದರಿ ರಾಷ್ಟ್ರ ಮಟ್ಟದ ವಿಜ್ಞಾನ ಜಿಜ್ಞಾಸ ವಸ್ತು ಪ್ರದರ್ಶನದಲ್ಲಿ ದ್ವಿತೀಯ ಸ್ಥಾನ ಪಡೆದಿದೆ.

ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…

ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…

ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು

ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು

1-manipal-station

ಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಆರೋಪ; ಐವರು ವಿದ್ಯಾರ್ಥಿಗಳು ವಶಕ್ಕೆ

tdy-2

ಕನಸಿನಲ್ಲಿ ʼಶ್ರೀಕೃಷ್ಣʼ ದೇವರನ್ನು ಕಂಡು ನಿದ್ದೆಯಿಂದ ಎಚ್ಚೆದ್ದ ಸಚಿವ.!

Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್

Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್

TDY-22

ಸ್ಟಾರ್ಟ್‌ಅಪ್‌ ಕನಸು ಹೊತ್ತವರ ಚಿತ್ರ: ಮೇಡ್ ಇನ್ ಬೆಂಗಳೂರು

TDY-1

ಆನ್ಲೈನ್‌ ನಲ್ಲಿ ವಿದ್ಯುತ್‌ ಬಿಲ್‌ ಕಟ್ಟಲು ಹೋಗಿ 7 ಲಕ್ಷ ರೂ. ಕಳೆದುಕೊಂಡ ಮಹಿಳೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-14

ಆಲಿಕಲ್ಲು ಮಳೆಗೆ ಸಾವಿರಾರು ಎಕರೆ ಬೆಳೆ ಹಾನಿ

tdy-19

ಶಾಸಕ ಆಗದಿದ್ದರೂ ಪರವಾಗಿಲ್ಲ, ಬೇರೆ ಕಡೆ ಹೋಗಲ್ಲ

ಕೈ ಬಣ ರಾಜಕೀಯಕ್ಕೆ ಸಿದ್ದು ಬಲಿ? ಸ್ಥಳೀಯ ಮುಖಂಡರ ಸ್ವಪ್ರತಿಷ್ಠೆ

ಕೈ ಬಣ ರಾಜಕೀಯಕ್ಕೆ ಸಿದ್ದರಾಮಯ್ಯ ಅತಂತ್ರ?

tdy-16

40% ಬಿಜೆಪಿ ಸರ್ಕಾರದವರು ನಮ್ಮ ಮೇಲೆ ಲಂಚದ ಆರೋಪ ಮಾಡ್ತಾರೆ

tdy-19

ನೈರ್ಮಲೀಕರಣಕ್ಕಾಗಿ 5.35 ಕೋಟಿ ರೂ.ಮೀಸಲು

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…

ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ…

ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು

ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೆ ಗೂಟ ಹೊಡೆದುಕೊಂಡು ಕೂತಿಲ್ಲ: ಆಯನೂರು

1-manipal-station

ಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಆರೋಪ; ಐವರು ವಿದ್ಯಾರ್ಥಿಗಳು ವಶಕ್ಕೆ

tdy-2

ಕನಸಿನಲ್ಲಿ ʼಶ್ರೀಕೃಷ್ಣʼ ದೇವರನ್ನು ಕಂಡು ನಿದ್ದೆಯಿಂದ ಎಚ್ಚೆದ್ದ ಸಚಿವ.!

Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್

Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.