ಲಾಕ್ಡೌನ್ ಮಧ್ಯೆ ಕಂಪನಿ ಕಾರ್ಯಾರಂಭ: ಆತಂಕ
Team Udayavani, Mar 31, 2020, 3:58 PM IST
ಕೋಲಾರ: ಕೊವಿಡ್-19 ಹರಡುವಿಕೆ ತಡೆಗಟ್ಟಲು ದೇಶವೇ ಲಾಕ್ಡೌನ್ ಆಗಿದ್ದರೂ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕಂಪನಿಯೊಂದು ನಿಯಮ ಬಾಹಿರಾಗಿ ಕಾರ್ಮಿಕರಿಂದ ದುಡಿಸಿಕೊಳ್ಳುತ್ತಿದ್ದನ್ನು ಕಂಡ ಗ್ರಾಮಸ್ಥರು ಕಂಪನಿಗೆ ನುಗ್ಗಿ ಬಲವಂತವಾಗಿ ಕಾರ್ಖಾನೆ ಬಂದ್ ಮಾಡಿಸಿದ ಘಟನೆ ಸೋಮವಾರ ನಡೆದಿದೆ.
ಕೊವಿಡ್-19 ವೈರಸ್ಗೆ ಹೆದರಿ ದೇಶಾದ್ಯಂತ ಕಾರ್ಖಾನೆ ಬಂದ್ ಆಗಿದ್ದಂತೆ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಸಿಫಾನಿ ಕಾರ್ಖಾನೆಯನ್ನೂ ಸ್ಥಗಿತಗೊಳಿಸಲಾಗಿತ್ತು.ಆದರೆ, ಕೈಗಾರಿಕೆ ಇಲಾಖೆಯಿಂದ ವಿಶೇಷ ಅನುಮತಿ ಪಡೆದುಕೊಂಡ ಮಾಲಿಕರು ಸೋಮವಾರದಿಂದ ಕಾರ್ಖಾನೆಯನ್ನು ಆರಂಭಿಸಿದ್ದರು. ಈ ವಿಷಯ ತಿಳಿದ ಸ್ಥಳೀಯರು, ಕೈಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿ ಕ್ರಮಕ್ಕೂ ಒತ್ತಾಯಿಸಿದ್ದರು.
ತಕ್ಷಣವೇ ಕಚೇರಿಯ ತಂಡದ ಜತೆಗೆ ಸ್ಥಳಕ್ಕೆ ಭೇಟಿಯಿತ್ತ ಕೈಗಾರಿಕಾ ಇಲಾಖೆಯ ಉಪ ನಿರ್ದೇಶಕ ರವಿ ಚಂದ್ರ, ಜಿಪಂ ಸದಸ್ಯೆ ರೂಪಶ್ರೀ ಮಂಜು ಕಾರ್ಖಾನೆ ಯನ್ನು ಪರಿಶೀಲಿಸಿದರು. ಸುರಕ್ಷತಾ ಸಾಧನಗಳಿಲ್ಲದೆ ಕಾರ್ಮಿಕರಿಂದ ಕೆಲಸ ಮಾಡಿಸುತ್ತಿದ್ದುದು ಈ ಸಂದರ್ಭದಲ್ಲಿ ಕಂಡುಬಂದಿತು. ಇದರಿಂದ ಅಸಮಾಧಾನ ವ್ಯಕ್ತ ಪಡಿಸಿದ ಅಧಿಕಾರಿಗಳ ತಂಡವು, ತಕ್ಷಣವೇ ಕಾರ್ಖಾನೆ ಬಂದ್ ಮಾಡುವಂತೆ ಆದೇಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.