ಕೊರೊನಾ ನಿಯಮ ಪಾಲಿಸಿ, ವಹಿವಾಟು ನಡೆಸಿ
Team Udayavani, May 9, 2021, 6:31 PM IST
ಕೋಲಾರ: ಕೋವಿಡ್ ಮಾರ್ಗಸೂಚಿಯಡಿಎಪಿಎಂಸಿ ವಹಿವಾಟು ನಡೆಸುವಂತೆ ತಾಕೀತುಮಾಡಿದ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ,ಮಾರುಕಟ್ಟೆಗೆ ಕೆಲಸಕ್ಕೆ ಬರುವ ಹಮಾಲರಿಗೆ ಪಾಸು ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರ ಹೊರವಲಯದ ಎಪಿಎಂಸಿ ಮಾರುಕಟ್ಟೆಗೆಶನಿವಾರ ಭೇಟಿ ನೀಡಿ ಪರಿಶೀಲಿಸಿದ ನಂತರಅಧಿಕಾರಿಗಳು, ಎಪಿಎಂಸಿ ನಿರ್ದೇಶಕರು, ವ್ಯಾಪಾರಸ್ಥರು, ಹಮಾಲರ ಸಂಘದ ಪದಾಧಿಕಾರಿಗಳೊಂದಿಗೆಸಭೆ ನಡೆಸಿ ಮಾತನಾಡಿದರು.ಕೊರೊನಾ 2ನೇ ಅಲೆಯಿಂದಾಗಿ ಕರ್ಫ್ಯೂಜಾರಿಯಲ್ಲಿದ್ದು, ಬೆಳಗ್ಗೆ 10 ಗಂಟೆಯ ಬಳಿಕ ಓಡಾಟ ನಿಷೇಧಿಸಲಾಗಿದೆ.
ಇದರಿಂದ ಪೊಲೀಸರು ತಪಾಸಣೆನಡೆಸುತ್ತಿದ್ದಾರೆ. ಈ ವೇಳೆ ಮಾರುಕಟ್ಟೆಗೆ ಕೆಲಸಕ್ಕೆಬರುವ ಹಮಾಲರ ಓಡಾಟಕ್ಕೂ ತೊಂದರೆಯಾಗುತ್ತಿದೆ.ಇದು ಮಾರುಕಟ್ಟೆ ವಹಿವಾಟಿನ ಮೇಲೆ ಪರಿಣಾಮಬೀರುವುದರಿಂದ ಹಮಾಲರಿಗೆ ಕೂಡಲೇ ಪಾಸುವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಕೋರಿ ವರ್ತಕರಸಂಘದಿಂದ ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್ಮೂಲಕ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು.
ಕೆಲಸಕ್ಕೆ ಬರಲು ಹಿಂದೇಟು: ಹಮಾಲರಿಗೆ ರಸ್ತೆಗಳಲ್ಲಿತೊಂದರೆ ಆಗುತ್ತಿರುವುದರಿಂದ ಅನೇಕರು ಕೆಲಸಕ್ಕೆಬರುವುದಕ್ಕೆ ಹಿಂಜರಿಯುತ್ತಿದ್ದಾರೆ. ಅವರು ಬಾರದಿದ್ದರೆ ಲೋಡಿಂಗ್, ಅನ್ಲೋಡಿಂಗ್ ನಡೆಯುವುದಿಲ್ಲ. ಈಗಾಗಲೇ ಸಂಚಾರಕ್ಕೆ ಅಡಚಣೆಯಾಗುತ್ತಿರುವಹಿನ್ನೆಲೆಯಲ್ಲಿ ಅನೇಕರು 15-20 ದಿನ ರಜೆ ಪಡೆದುಮನೆಯಲ್ಲಿರುವುದಾಗಿಯೂ ಹೇಳಿದ್ದರು.
ಜಿಲ್ಲಾಧಿಕಾರಿ ಸ್ಪಂದನೆ: ಕೊರೊನಾ ಹಿನ್ನೆಲೆಯಲ್ಲಿಮಂಡಿಗಳಿಗೆ ಬರುವುದಕ್ಕೆ ನಮಗೂ ಸಾಕಷ್ಟು ಭಯಕಾಡುತ್ತಿದೆ. ಆದರೂ, ರೈತರ ಹಿತದೃಷ್ಟಿಯಿಂದಬರುತ್ತಿದ್ದೇವೆ. ಈಗಾಗಲೇ 2500ಕ್ಕೂ ಹೆಚ್ಚು ಮಂದಿಹಮಾಲರು ಎಪಿಎಂಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಟೊಮೆಟೋ ಸುಗ್ಗಿ ಆರಂಭಗೊಂಡಿದ್ದು, ರಂಜಾನ್ ಬಳಿಕ ಮತ್ತಷ್ಟು ಅವಕ ಹೆಚ್ಚಳವಾಗುವಸಾಧ್ಯತೆಯಿರುವುದರಿಂದಾಗಿ ಹಮಾಲರ ಸಂಖ್ಯೆಯೂಹೆಚ್ಚಳವಾಗುತ್ತದೆ. ಆದ್ದರಿಂದ ಹಮಾಲರ ಓಡಾಟಕ್ಕೆತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದುವರ್ತಕರು, ವ್ಯಾಪಾರಸ್ಥರ ಸಂಘದಿಂದ ಮಾಡಿದಮನವಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸಿದರು.
ಹಮಾಲರ ಓಡಾಟಕ್ಕೆ ಪಾಸ್: ಜಿಲ್ಲಾಧಿಕಾರಿಡಾ.ಆರ್.ಸೆಲ್ವಮಣಿ ಪೊಲೀಸ್ ಇಲಾಖೆಯವರಿಗೂಸೂಚಿಸಿ, ಅಲ್ಲಿನ ಸಮಸ್ಯೆ ಬಗೆಹರಿಸುವಂತೆತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ನಗರ ವೃತ್ತ ನಿರೀಕ್ಷಕರಂಗಶಾಮಯ್ಯ, ಪಿಎಸ್ಐ ಅಣ್ಣಯ್ಯ ಕೆಲಕಾಲ ಸಭೆನಡೆಸಿ ಹಲವು ಸಲಹೆ ನೀಡಿದ್ದರು. ಬಳಿಕ ಜಿಲ್ಲಾಧಿಕಾರಿಗಳು ಆಗಮಿಸಿ ಸಭೆ ನಡೆಸಿ, ರೈತರುಉತ್ತಮವಾಗಿ ಬೆಳೆ ಬೆಳೆದಿದ್ದು, ಮಾರುಕಟ್ಟೆ ವ್ಯವಸ್ಥೆಕಲ್ಪಿಸಿಕೊಡುವುದು ನಮ್ಮ ಜವಾಬ್ದಾರಿಯಾಗಿದೆ.
ಸಣ್ಣಪುಟ್ಟ ಸಮಸ್ಯೆಗಳು ಏನೇ ಇದ್ದರೂ ಅದನ್ನುಬಗೆಹರಿಸಿಕೊಳ್ಳೋಣ. ಮೊದಲಿಗೆ ಹಮಾಲರಓಡಾಟಕ್ಕೆ ಪಾಸ್ ನೀಡುವ ಕೆಲಸ ಎಪಿಎಂಸಿಯವರುಮಾಡಬೇಕು ಎಂದು ಹೇಳಿದರು.
ದುರ್ಬಳಕೆ ಮಾಡಿಕೊಳ್ಳಬೇಡಿ: ಆದರೆ, ಪಾಸ್ಗಳುಇದೆ ಎಂದು ಎಪಿಎಂಸಿ-ಮನೆಗೆ ಮಾತ್ರ ಓಡಾಡದೆಬೇರೆ ಕಡೆಗಳಿಗೆ ಓಡಾಟ ಮಾಡಿ ಪೊಲೀಸರಿಗೆ ಸಿಕ್ಕಿತೊಂದರೆಗೆ ಒಳಗಾಗುವುದು ಬೇಡ. ಪಾಸ್ಗಳನ್ನುದುರ್ಬಳಕೆ ಮಾಡಿಕೊಳ್ಳದೆ ಮಾರುಕಟ್ಟೆ ಕೆಲಸಕ್ಕೆ ಮಾತ್ರಬಳಸಿಕೊಳ್ಳಬೇಕೆಂದು ಸೂಚಿಸಿದರು.ಎಪಿಎಂಸಿ ಉಪಾಧ್ಯಕ್ಷ ವೆಂಕಟೇಶಪ್ಪ, ಎಪಿಎಂಸಿವರ್ತಕ ಪ್ರತಿನಿಧಿ ಸದಸ್ಯ ಎಎನ್ಆರ್ ದೇವರಾಜ್,ಎಪಿಎಂಸಿ ಕಾರ್ಯದರ್ಶಿ ಟಿ.ಎಸ್.ರವಿಕುಮಾರ್,ವ್ಯಾಪಾರಸ್ಥರ ಸಂಘದ ಕೆ.ಬಿ.ಮಾಜೀದ್, ಹಮಾಲಿಯೂನಿಯನ್ ಅಧ್ಯಕ್ಷ ಬಾಬು, ಮಂಡಿ ಮಾಲಿಕರಾದಸಿಎಂಆರ್ ಶ್ರೀನಾಥ್, ಕೆಎನ್ಎನ್ ಪ್ರಕಾಶ್ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್