ಸರಳವಾಗಿ ನಡೆದ ಹೂವಿನ ಕರಗ ಮಹೋತ್ಸವ
Team Udayavani, Apr 20, 2021, 8:02 PM IST
ಮಾಸ್ತಿ: ಗ್ರಾಮದಲ್ಲಿ ಸಂಭ್ರಮದಿಂದ ನಡೆಯಬೇಕಾಗಿದ್ದ ಪ್ರಸಿದ್ಧ ಶ್ರೀಧರ್ಮರಾಯಸ್ವಾಮಿ ಶ್ರೀದ್ರೌಪತಾಂಭ ದೇವಿ ಹೂವಿನ ಕರಗಕೋವಿಡ್ ಹಿನ್ನೆಲೆಯಲ್ಲಿ ದೇವಾಲಯದ ಆವರಣದಲ್ಲೇ ಸರಳವಾಗಿ ನೆರವೇರಿತು.
ಮಾಸ್ತಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ವಹ್ನಿ ಕುಲ ಕ್ಷತ್ರಿಯ ಜನಾಂಗದವರು ಕರಗ ಮಹೋತ್ಸವವನ್ನು ಸಂಪ್ರದಾಯ, ಅತ್ಯಂತ ಶಿಸ್ತು ಬದ್ಧ ಹಾಗೂ ಶ್ರದ್ಧಾ ಭಕ್ತಿಯಿಂದವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದ್ದರು. ಆದರೆ, ಕೊರೊನಾ 2ನೇ ಅಲೆಹಿನ್ನೆಲೆಯಲ್ಲಿ ಸರ್ಕಾರ ಸಭೆ-ಸಮಾರಂಭ, ಕರಗ, ಜಾತ್ರೆಗಳು ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿದೆ.ಹೀಗಾಗಿ ಈ ಬಾರಿ ಮಾಸ್ತಿ ಗ್ರಾಮದಲ್ಲಿ ಶ್ರೀ ದ್ರೌಪತಾಂಭ ಧರ್ಮರಾಯಸ್ವಾಮಿದೇವಾಲಯ ಜೀರ್ಣೋದ್ಧಾರ ಸಂಘ ಹಾಗೂ ವಹ್ನಿ ಕುಲ ಕ್ಷತ್ರಿಯ ಜನಾಂಗದವರು ಕರಗ ಮಹೋತ್ಸವವನ್ನು ಭಾನುವಾರ ರಾತ್ರಿ ದೇವಾಲಯದ ಆವರಣದಲ್ಲೇ ಸರಳ, ಸಾಂಪ್ರದಾಯಿಕ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸುವ ಮೂಲಕ ಕರಗವನ್ನು ದೇವಾಲಯಕ್ಕೆ ಸೀಮಿತಗೊಳಿಸಿದರು.
ಭಾನುವಾರ ರಾತ್ರಿಯೇ ದೇವಾಲಯದ ಆವರಣದಲ್ಲಿ ಹಸಿ ಕರಗ, ಹಲಗು ಸೇವೆ,ಹೂವಿನ ಕರಗ ಉತ್ಸವಕ್ಕೆ ಸಂಬಂಧಿಸಿದ ವಿದಿವಿಧಾನಗಳೊಂದಿಗೆ ಸರಳವಾಗಿ ಕರಗ ಉತ್ಸವಆಚರಿಸಿ ದೇವಾಲಯಕ್ಕೆ ಸೀಮಿತಗೊಳಿಸಿದರು.
ಶ್ರದ್ಧಾ ಭಕ್ತಿಯಿಂದ ವಿಶೇಷ ಪೂಜೆ: ಶ್ರೀದ್ರೌಪತಾಂಭ ಧರ್ಮರಾಯಸ್ವಾಮಿದೇವಾಲಯದ ಮೂಲ ದೇವರಿಗೆ ವಿಶೇಷ ಅಭಿಷೇಕ, ಅಲಂಕಾರ ಹಾಗೂ ಶ್ರೀದ್ರೌಪತಾಂಭದೇವಿ ವಿಗ್ರಹಕ್ಕೆ ಮಲ್ಲಿಗೆ ಹೂಗಳಿಂದ ವಿಶೇಷ ಕರಗ ಅಲಂಕಾರ ಮಾಡಲಾಗಿತ್ತು. ವಹ್ನಿ ಕುಲದ ಜನಾಂಗದವರು ದೇವಾಲಯಕ್ಕೆ ಒಬ್ಬೊಬ್ಬರಂತೆ ಮಾಸ್ಕ್ ಧರಿಸಿಕೊಂಡು ಆಗಮಿಸಿ, ಸಾಮಾಜಿಕಅಂತರವನ್ನು ಕಾಪಾಡಿಕೊಂಡು ಸರ್ಕಾರದಮಾರ್ಗಸೂಚಿ ಪಾಲಿಸುವ ಮೂಲಕ ದೇವರಿಗೆ ಶ್ರದ್ಧಾ ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು.ಅದರಲ್ಲೂ ಕೊರೊನಾ ನಿರ್ಮೂಲನೆಗಾಗಿ ಹಾಗೂ ಕೋವಿಡ್ ಸಂಕಷ್ಟದಿಂದ ಪಾರು ಮಾಡುವಂತೆ ಪ್ರಾರ್ಥಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ