ಆಮೆಗತಿಯಲ್ಲಿ ರೈಲು ನಿಲ್ದಾಣ ಕಾಮಗಾರಿ


Team Udayavani, Jun 4, 2023, 4:23 PM IST

ಆಮೆಗತಿಯಲ್ಲಿ ರೈಲು ನಿಲ್ದಾಣ ಕಾಮಗಾರಿ

ಬಂಗಾರಪೇಟೆ: ಉದ್ಯೋಗಕ್ಕಾಗಿ ನಿತ್ಯ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಶಂಕುಸ್ಥಾನೆಯಾದ ಹುದುಕುಳ ರೈಲ್ವೆ ನಿಲ್ದಾಣ ಕಾಮಗಾರಿ 9 ವರ್ಷ ಗಳಿಂದ ಆಮೆ ನಡಿಗೆಯಲ್ಲಿ ಸಾಗುತ್ತಿದ್ದರೂ, ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿಗೆ ಹಿಡಿದ ಕೈಕನ್ನಡಿಯಾಗಿದೆ.

ಯಾವುದೇ ಕಾರ್ಖಾನೆಗಳಿಲ್ಲದ ಬಂಗಾರಪೇಟೆ ಕ್ಷೇತ್ರದಲ್ಲಿ ಜೀವನ ಸಾಗಿಸಲು ನಿತ್ಯ 15ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ರೈಲುಗಳ ಮೂಲಕ ಬೆಂಗಳೂರಿಗೆ ಕೆಲಸಕ್ಕಾಗಿ ತೆರಳಿ ಸಂಜೆ ಮರಳುತ್ತಾರೆ. ಅಂತೆಯೇ ಕಸಬಾ ಹೋಬಳಿಯ ಜನರೂ ಸಹ ಅಧಿಕ ಸಂಖ್ಯೆಯಲ್ಲಿ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡುವುದರಿಂದ ಈ ಹೋಬಳಿಯ ಜನರು ಮುಂಜಾನೆ 4 ಗಂಟೆಯಿಂದಲೇ ದ್ವಿಚಕ್ರ ವಾಹನಗಳಲ್ಲಿ ಪಟ್ಟಣಕ್ಕೆ ಬಂದು ರೈಲು ಹತ್ತಬೇಕಿತ್ತು. ಚಿಕ್ಕಬಳ್ಳಾಪುದಿಂದ ಕೋಲಾರ ಮೂಲಕ ಪಟ್ಟಣಕ್ಕೆ ಸಂಪರ್ಕಕಲ್ಪಿಸುವ ಈ ಮಾರ್ಗದ ಹುದುಕುಳ ಗ್ರಾಮದಲ್ಲಿ ಈ ಹಿಂದೆ ಬ್ರಿಟಿಷರ ಕಾಲದಲ್ಲಿ ರೈಲ್ವೆ ನಿಲ್ದಾಣವಿತ್ತು. ನಂತರ ದಿನಗಳಲ್ಲಿ ಆ ನಿಲ್ದಾಣ ಮುಚ್ಚಲಾಗಿತ್ತು.

ಚಿನ್ನಕೋಟೆ ಗ್ರಾಮದಲ್ಲಿ ಹಾಲ್ಟ್ ಸ್ಟೇಷನ್‌: ಈ ಹಿನ್ನೆಲೆಯಲ್ಲಿ ಹುದುಕುಳ ಗ್ರಾಮದಲ್ಲಿ ಮುಚ್ಚಿರುವ ರೈಲ್ವೆ ನಿಲ್ದಾಣ ಪುನರಾಂಭಿಸುವ ಮೂಲಕ ಈ ವ್ಯಾಪ್ತಿಯಲ್ಲಿನ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವಂತೆ ಅಂದಿನ ಸಂಸದರಾಗಿದ್ದ ಕೆ.ಹೆಚ್‌.ಮುನಿಯಪ್ಪ ರೈಲ್ವೆ ಸಚಿವರಾಗಿದ್ದಾಗ ಪ್ರಯಾಣಿಕರು ಮನವಿ ಸಲ್ಲಿಸಿದರು. ಅಂತೆಯೇ ಚಿನ್ನಕೋಟೆ ಗ್ರಾಮದಲ್ಲಿಯೂ ಸಹ ಹಾಲ್ಟ್ ಸ್ಟೇಷನ್‌ ಆರಂಭಿಸುವಂತೆ ಒತ್ತಾಯಕ್ಕೆ ಮಣಿದು ಎರಡೂ ಕಡೆ ಹೊಸ ನಿಲ್ದಾಣಕ್ಕೆ ಕೇಂದ್ರ ರೈಲ್ವೆ ಇಲಾಖೆ ಹಸಿರು ನಿಶಾನೆ ನೀಡಿತು.

ಪ್ರಯಾಣಿಕರಲ್ಲಿ ನಿರಾಸೆ: ಅಂದುಕೊಂಡ ಸಮಯದಲ್ಲಿ ಚಿನ್ನಕೋಟೆ ಗ್ರಾಮದಲ್ಲಿ ಮಾತ್ರ ಹಾಲ್ಟ್ ಸ್ಟೇಷನ್‌ ನಿರ್ಮಾಣವಾಗಿ ಉದ್ಘಾಟನೆ ಸಹವಾಯಿತು. ಆದರೆ ಹುದುಕುಳ ಗ್ರಾಮದಲ್ಲಿನ ಹೊಸ ನಿಲ್ದಾಣ ಕಾಮಗಾರಿಗೆ ಗ್ರಹಣ ಹಿಡಿಯಿತು. 9ವರ್ಷಗಳೇ ಕಳೆದರೂ ಕಟ್ಟಡವೇನೋ ತಲೆಎತ್ತಿದೆ, ಮುಂದಿನ ಚಟುವಟಿಕೆಗಳು ಮಾತ್ರ ಸಾಗಲೇ ಇಲ್ಲ. ಈ ಗ್ರಾಮದ ಸುತ್ತಮುತ್ತಲಿನ ಪ್ರಯಾಣಿಕರು ಇಂದೋ ನಾಳೆನೋ ರೈಲು ಗ್ರಾಮದಲ್ಲಿ ಬಂದು ನಿಲ್ಲಲಿದೆ ಎಂದು ಭಾವಿಸಿದ್ದ ವರಿಗೆ ನಿರಾಶೆ ಮೂಡಿಸಿದೆ. 9ವರ್ಷಗಳಿಂದ ಕಟ್ಟಡ ಬಳಕೆಗೆ ಬಾರದೆ ಕಡೆಗಣಿಸಿದ್ದರಿಂದ ಉದ್ಘಾ ಟನೆಗೂ ಮೊದಲೆ ಕಟ್ಟಡ ಶಿಥಿಲಾವಸ್ಥೆಗೆ ತಲು ಪಿತು. ಅಲ್ಲದೆ ರಾತ್ರಿಯ ವೇಳೆ ಈ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಅನೈತಿಕ ಚಟುವಟಿಕೆಗಳ ತಾಣವಾದ ಕಟ್ಟಡ: ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನು ಇಲಾಖೆ ಮತ್ತೆ ದುರಸ್ತಿಗೊಳಿಸಿ ಹೆಸರು ಸಹ ಬರೆದು ಬಣ್ಣ ಬಡಿಯಲಾಗಿದೆ. ಪ್ರಯಾಣಿಕರು ನಿಲ್ಲಲು ಪ್ಲಾಟ್‌ ಫಾರಂ ನಿರ್ಮಾಣಕ್ಕೆ ಮಣ್ಣು ಹಾಕಿ ಬಿಟ್ಟಿರುವುದ ರಿಂದ ಮಳೆ ಬಂದರೆ ಅದು ಕೆಸರುಗದ್ದೆಯಾಗುವುದು. ಕಟ್ಟಡಕ್ಕೆ ಸಮರ್ಪಕ ರೀತಿ ಬಾಗಿಲು, ಕಿಟಕಿ ಅಳವಡಿಸದೆ ಹಾಗೆ ಬಿಟ್ಟಿರುವುದರಿಂದ ಮತ್ತೆ ರಾತ್ರಿಯ ವೇಳೆ ಕಾನೂನು ಬಾಹಿರ ಅಡ್ಡವಾಗಿ ಪರಿವರ್ತನೆಯಾಗಿದೆ. ಸಂಸದರು ನೆನೆಗುದಿಗೆ ಬಿದ್ದಿರುವ ಹುದುಕುಳ ನಿಲ್ದಾಣದ ಕಾಮಗಾರಿಗೆ ಮೋಕ್ಷ ಕಲ್ಪಿಸಿಕೊಟ್ಟು ಶೀಘ್ರ ಉದ್ಘಾಟನೆ ಯಾಗುವಂತೆ ಮಾಡಿ ಪ್ರಯಾಣಿಕರಿಗೆ ನೆರವಾಗುವಂತೆ ಕ್ರಮಕೈಗೊಳ್ಳಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಲೂಕಿ ಹುದುಕುಳ ಗ್ರಾಮದ ಬಳಿ ಬ್ರಿಟೀಷರ ಕಾಲದಲ್ಲಿ ರೈಲ್ವೆ ನಿಲ್ದಾಣ ಹಳೆ ಕಟ್ಟಡವನ್ನು ಸಂಸದರಾಗಿದ್ದ ಕೆ.ಹೆಚ್‌.ಮುನಿಯಪ್ಪ ಹಾಗೂ ಶಾಸಕ ಎಸ್‌. ಎನ್‌.ನಾರಾಯಣಸ್ವಾಮಿ ಹೊಸದಾಗಿ ಕಟ್ಟಡವನ್ನು ನಿರ್ಮಾಣಕ್ಕೆ ಶ್ರಮಿಸಿದ್ದರು. ಗುತ್ತಿಗೆದಾರರ ಸಮರ್ಪಕವಾಗಿ ನಿರ್ಮಾಣ ಮಾಡದೇ ಇದ್ದುರಿಂದ ಮಳೆ ಬಂದರೆ ಸೋರುತ್ತಿತ್ತು. ಉದ್ಘಾಟನೆಗೂ ಮುಂಚೆ ಮತ್ತೆ ಎರಡನೇ ಬಾರಿ ಸುಣ್ಣ-ಬಣ್ಣ ಬಳಿದು ಮತ್ತೆ ರಿಪೇರಿ ಕೆಲಸ ಮಾಡಿದ್ದಾರೆ. ರೈಲ್ವೆ ಇಲಾಖೆಯವರು ಕಾಟಾಚಾರಕ್ಕೆ ಕೆಲಸ ಮಾಡುವಂತಿದೆ. ಪ್ರಯಾಣಿಕರಿಗೆ ಯಾವುದೇ ಅನುಕೂಲವಾಗುತ್ತಿಲ್ಲ. -ಹೆಚ್‌.ಎಂ.ರವಿ, ಅಧ್ಯಕ್ಷರು, ಚಿಕ್ಕಅಂಕಂಡಹಳ್ಳಿ ಗ್ರಾಪಂ, ಹುದುಕುಳ

-ಎಂ.ಸಿ.ಮಂಜುನಾಥ್‌

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

raLok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ 

Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ 

11

Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ

Lok Sabha Election ಬಳಿಕ‌ವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ

Lok Sabha Election ಬಳಿಕ‌ವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ

LS polls 2024: ಕೋಲಾರ ಮೈತ್ರಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಜೆಡಿಎಸ್‌ ಮುಖಂಡರು ಗೈರು

LS polls 2024: ಕೋಲಾರ ಮೈತ್ರಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ; ಜೆಡಿಎಸ್‌ ಮುಖಂಡರು ಗೈರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.