ವೃದ್ಧಾಪ್ಯ ವೇತನ ಅರ್ಜಿ ವಿಲೇವಾರಿ ವಿಳಂಬ

ಗ್ರಾಮ ಲೆಕ್ಕಿಗರ ವಿರುದ್ಧ ಶಾಸಕಿ ರೂಪಕಲಾ ಗರಂ „ ಅರ್ಹ ಫ‌ಲಾನುಭವಿಗಳ ಪಟ್ಟಿ ಸಿದ್ಧಪಡಿಸಲು ಸೂಚನೆ

Team Udayavani, Jan 9, 2020, 3:21 PM IST

9-January-19

ಕೆಜಿಎಫ್: ಗ್ರಾಮಗಳಲ್ಲಿ ಮಾಸಾಶನಕ್ಕೆ ಅರ್ಹರಿರುವ ಪಟ್ಟಿಯನ್ನು ಇನ್ನೂ ತಯಾರು ಮಾಡಿಲ್ಲ. ವಿಲೇಜ್‌ ಮ್ಯಾಪ್‌ ಮಾಡಲಾಗುತ್ತಿದೆ, ಸರ್ವರ್‌ ತೊಂದರೆ ಎಂದು ಸಾಬೂಬು ಹೇಳುತ್ತಿದ್ದೀರಿ. ಇನ್ನೂ ಎಷ್ಟು ದಿನ ಬೇಕು. ಇಡೀ ಕ್ಷೇತ್ರದಲ್ಲಿ ಎಷ್ಟು ಜನರ ಸಮಸ್ಯೆ ಇದೆ. ಎಷ್ಟು ಬಗೆಹರಿದಿದೆ ಎಂಬ ಮಾಹಿತಿ ನೀಡಬೇಕು ಎಂದು ಕಂದಾಯ ಅಧಿಕಾರಿಗಳಿಗೆ ಶಾಸಕಿ ಎಂ.ರೂಪಕಲಾ ಹೇಳಿದರು.

ನಗರದಲ್ಲಿ ಕಂದಾಯ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಗ್ರಾಮ ಲೆಕ್ಕಗ ಅರ್ಥ ಮಾಡಿಕೊಳ್ಳಬೇಕು. ಒಂದು ಸಾವಿರ ರೂ. ಮಾಸಾಶನದಿಂದ ಎಷ್ಟೋ ಉಪಕಾರವಾಗುತ್ತದೆ. ವೃದ್ಧರಿಗೆ ಮಾಸಾಶಾನ ಕೊಡಿಸುವುದು ಮಾನವೀಯತೆಯ ಕೆಲಸ. ಎಷ್ಟು ದಿನಗಳಿಂದ ಹೇಳುತ್ತೀದ್ದೀನಿ, ಮಾಡುತ್ತಿಲ್ಲ. ಗ್ರಾಮ ಲೆಕ್ಕಿಗ ವಿನೂತ್‌ನನ್ನು ಉದ್ದೇಶಿಸಿ ಹೇಳಿದ ಅವರು, ರಾಜಕೀಯ ಚೆನ್ನಾಗಿ ಮಾಡುತ್ತೀಯ. ಚೆನ್ನಾಗಿ ಕೆಲಸ ಮಾಡಬೇಕು. ಇಲ್ಲ ದಿದ್ರೆ ಸಸ್ಪೆಂಡ್‌ ಆಗುತ್ತೀಯ ಎಂದು ಎಚ್ಚರಿಸಿದರು.

ದಾಖಲೆ ಸಿದ್ಧ ಮಾಡಿಟ್ಟುಕೊಳ್ಳಿ: ಪ್ರತಿ ಪಂಚಾಯ್ತಿಗೆ ಎಷ್ಟು ಗ್ರಾಮ ಲೆಕ್ಕಿಗರು ಹೋಗುತ್ತೀರಿ. ಅವರ ವ್ಯಾಪ್ತಿಗೆ ಎಷ್ಟು ಗ್ರಾಮಗಳು ಬರುತ್ತವೆ. ಅವರ ವ್ಯಾಪ್ತಿಯಲ್ಲಿರುವ ಫ‌ಲಾನುಭವಿಗಳ ಪಟ್ಟಿಯನ್ನು ನನಗೆ ಕೊಡಬೇಕು. ಈ ಬಾರಿ ಹಲವು ಮೀಟಿಂಗ್‌ ಮಾಡಿದ್ದೇನೆ. ಆದರೂ ಸಹಕಾರ ನೀಡುತ್ತಿಲ್ಲ. ಈ ತಿಂಗಳ ಕೊನೆಯಲ್ಲಿ ಫ‌ಲಾನುಭವಿಗಳಿಗೆ ಪ್ರಮಾಣ ಪತ್ರ ನೀಡಬೇಕು. ಅಷ್ಟರೊಳಗೆ ಎಲ್ಲಾ ಮಾಹಿತಿ ಮತ್ತು ದಾಖಲೆಗಳನ್ನು ಸಿದ್ಧಮಾಡಿಟ್ಟುಕೊಳ್ಳಬೇಕು ಎಂದು ಶಾಸಕಿ ಹೇಳಿದರು.

ವಿಎಗಳಿಂದ ಮಾಹಿತಿ: ವಿಧವಾ ವೇತನ 65 ವರ್ಷದವರೆಗೂ ಕೊಡಲಾಗುತ್ತದೆ. ಈ ವಯಸ್ಸು ದಾಟಿದ ನಂತರ ವೃದ್ಧಾಪ್ಯ ವೇತನ ನೀಡಲಾಗುತ್ತದೆ. ಆಗ 500 ರೂ.ನಿಂದ 1000 ರೂಪಾಯಿ ಮಾಸಾಶನ ಸಿಗುತ್ತದೆ ಎಂದು ಗ್ರಾಮಲೆಕ್ಕಿಗರು ತಿಳಿಸಿದರು. 800 ಮಂದಿ ಮಾಹಿತಿ ಶೇಖರಣೆ: ಕ್ಯಾಸಂಬಳ್ಳಿ ಮತ್ತು ರಾಮಸಾಗರ ಪಂಚಾಯಿತಿ ವ್ಯಾಪ್ತಿಯಲ್ಲಿ 800 ಮಾಸಾಶನದ ಫ‌ಲಾನುಭವಿಗಳ ಮಾಹಿತಿ ಶೇಖರಿಸ ಲಾಗಿದೆ. ಅದನ್ನುಫೀಡ್‌ ಮಾಡಿಸಲಾಗುತ್ತಿದೆ. ಇನ್ನೂ 200 ಅರ್ಜಿಗಳ ವಿಲೇವಾರಿ ಮಾಡಲಾಗುವುದು. ವಿಧವಾ ವೇತನ ಬಿಟ್ಟು ಎಲ್ಲಾ ಫ‌ಲಾನುಭವಿಗಳಿಗೂ ಹಣ ನೀಡಲಾಗುತ್ತಿದೆ ಎಂದು ತಹಶೀಲ್ದಾರ್‌ ರಮೇಶ್‌ ತಿಳಿಸಿದರು.

ಅಷ್ಟು ಪ್ರಮಾಣದ ಹಿರಿಯರು ಇದ್ದಾರಾ?: ಇಡೀ ಕೆಜಿಎಫ್ ಪಾದಯಾತ್ರೆ ಮಾಡಿ 3000 ರಿಂದ 5000 ಫ‌ಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಒಂದು ಪಂಚಾಯಿತಿಯಲ್ಲಿ 1000 ಫ‌ಲಾನುಭವಿಗಳ ಆಯ್ಕೆ ಮಾಡಲಾಗಿದೆ ಎಂದರೆ ಆಶ್ಚರ್ಯವಾಗುತ್ತದೆ. ಇಪ್ಪತ್ತು ಹಳ್ಳಿಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಹಿರಿಯರು ಇದ್ದಾರಾ ಎಂಬುದು ಕೂಡ ಅನುಮಾನಾಸ್ಪದವಾಗಿದೆ ಎಂದಾಗ, ರೆವಿನ್ಯೂ ಸರ್ಕಲ್‌ನಲ್ಲಿರುವ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪೋಸ್ಟ್‌ ಮಾಸ್ಟರ್‌ ಹಣ ಪಡೆದಿದ್ರೆ ದೂರು ನೀಡಿ: ಪೋಸ್ಟ್‌ ಆಫೀಸ್‌ ಅಕೌಂಟ್‌ ಮಾಡಿಸಿ. ಅದು ಸುಲಭವಾಗುತ್ತದೆ. ಅಕೌಂಟ್‌ ಮಾಡಿಸಲು 50 ರೂಪಾಯಿ ಲಂಚ ತೆಗೆದುಕೊಳ್ಳುತ್ತಾರೆ ಎಂದು ತಹಶೀಲ್ದಾರ್‌ ಹೇಳಿದರು. ಒಂದು ತಿಂಗಳು ಮಾಸಾಶನ ಕೊಟ್ಟು ಮೂರು ತಿಂಗಳು ನೀಡದೆ ಇರುವ ಉದಾಹರಣೆಗಳು ಸಾಕಷ್ಟಿವೆ. ಸತ್ತವರ ಹಣವನ್ನು ಪೋಸ್ಟ್‌ ಮಾಸ್ಟರ್‌ ಪಡೆದುಕೊಂಡರೆ ದೂರು ನೀಡಬೇಕು. ಆಧಾರ್‌ ಮತ್ತು ಬ್ಯಾಂಕ್‌ ಖಾತೆ ಆನ್‌ಲೈನ್‌ನಲ್ಲಿಫೀಡ್‌ ಮಾಡಬೇಕು ಎಂದು ಶಾಸಕಿ ಹೇಳಿದರು.

ಆಧಾರ್‌ ಲಿಂಕ್‌: ಕೆಜಿಎಫ್ ಕ್ಷೇತ್ರದಲ್ಲಿ 38789 ಮಾಸಾಶನ ಪಡೆಯುವವರು ಇದ್ದಾರೆ. 60 ವರ್ಷ ದಾಟಿದವರು ವಯಸ್ಸಿನಲ್ಲಿ 10 ಸಾವಿರ ಇದ್ದಾರೆ. ಎಷ್ಟು ಜನರ ಆಧಾರ್‌ ಲಿಂಕ್‌ ಮಾಡಲಾಗಿದೆ ಎಂಬ ಮಾಹಿತಿಬೇಕು ಎಂದು ಶಾಸಕಿ ತಿಳಿಸಿದರು. ಹಳ್ಳಿಗಳ ಕಡೆ ಓಡಾಡಿದರೆ ಎಲ್ಲಾ ಸಾಧ್ಯವಾಗುತ್ತದೆ. ನೀವು ಮಾಡುವುದಿಲ್ಲ ಎಂದು ತಹಶೀಲ್ದಾರ್‌ ವಿಎಗಳಿಗೆ ಹೇಳಿದರು. ನಾವೇ ತಲಾ ಐದು ರೂಪಾಯಿ ಕೊಟ್ಟು ಫೀಡ್‌ ಮಾಡಿಸುತ್ತಿದ್ದೇವೆ. ಸತತ ಪ್ರಯತ್ನಮಾಡುತ್ತಲೇ ಇದ್ದೇವೆ ಎಂದು ಗ್ರಾಮ ಲೆಕ್ಕಿಗರು ಸಭೆಯಲ್ಲಿ ತಮಗೆ ಆಗುತ್ತಿರುವ ತೊಂದರೆಗಳನ್ನು ವಿವರಿಸಿದರು.

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.