ಊಟವಿಲ್ಲದೇ ನರಳಿದ ಕಾರ್ಮಿಕರು
Team Udayavani, Apr 2, 2020, 2:36 PM IST
ಕೆಜಿಎಫ್: ಕೂಲಿ ಅರಿಸಿ ಬಿಹಾರದಿಂದ ಬಂದಿದ್ದ ಕಟ್ಟಡ ನಿರ್ಮಾಣ ಎಂಟು ಕಾರ್ಮಿಕರು ಲಾಕ್ಡೌನ್ನಿಂದಾಗಿ ದಾರಿ ಕಾಣದೆ ಅತಂತ್ರರಾಗಿ ಮೂರು ದಿನಗಳಿಂದ ಹಸಿವಿನಿಂದ ನರಳಿದ ಘಟನೆ ನಡೆದಿದೆ.
ನಗರದ ಹೊರವಲಯದ ಕಂಗಾಂಡ್ಲ ಹಳ್ಳಿಯ ಕೋಳಿಫಾರಂನ ಶೆಡ್ನಲ್ಲಿದ್ದಎಲ್ಲಾ ಕಾರ್ಮಿಕರನ್ನು ಕಷ್ಟಪಟ್ಟು ಹುಡುಕಿದ ರೋಟರಿ ಸಂಸ್ಥೆ ಬುಧವಾರ ಅವರಿಗೆ ಊಟು ನೀಡಿ, ಹಸಿವು ಮುಕ್ತರನ್ನಾಗಿ ಮಾಡಿದೆ. 15 ದಿನಗಳ ಹಿಂದೆ ಬಿಹಾರ್ನ ಮೋತಿಹಾರ್ನಿಂದ ಯಶವಂತಪುರಕ್ಕೆ ರೈಲಿನಲ್ಲಿ ಬಂದಿದ್ದ ಎಂಟು ಕಾರ್ಮಿಕರು ಗುತ್ತಿಗೆದಾರನೊಬ್ಬನ ಸಂಪರ್ಕದಿಂದಾಗಿ ಕೋಲಾರಕ್ಕೆ ಬಂದು ಅಲ್ಲಿ ಎರಡು ದಿನ ಕಟ್ಟಡ ಕಾಮಗಾರಿಯಲ್ಲಿ ತೊಡಗಿದ್ದರು.
ಕೋವಿಡ್ 19 ದಿಂದ ಲಾಕ್ಡೌನ್ ಆದ ತಕ್ಷಣ ಕಾಮಗಾರಿ ನಿಲ್ಲಿಸಿದ ಮೇಸ್ತ್ರಿಅವರಿಗೆ ದುಡ್ಡು ಕೊಟ್ಟು ಕಳಿಸಿದ್ದ. ಅಲ್ಲಿಂದ ಬಿಹಾರದ ಮೂಲದ ಇತರ ಕಾರ್ಮಿಕರ ನೆರವು ಪಡೆದು ಕಂಗಾಂಡ್ಲಹಳ್ಳಿಗೆ ಬಂದು ಕೋಳಿಫಾರಂ ಶೆಡ್ನಲ್ಲಿ ಉಳಿದುಕೊಂಡರು. ಕೋವಿಡ್ 19 ಕರ್ಫ್ಯೂ ಇದ್ದುದರಿಂದ ಅವರಿಗೆ ಕೆಲಸ ಸಿಗಲಿಲ್ಲ. ಕೈಯಲ್ಲಿ ದುಡ್ಡು ಖಾಲಿಯಾಗಿದ್ದರಿಂದ, ಆಹಾರ ಪದಾರ್ಥ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ನಂತರ ಅವರಲ್ಲಿದ್ದ ಬಿಜಯ್ ಚೌಧರಿ ಎಂಬಾತ ಕೋವಿಡ್ 19 ಸಹಾಯವಾಣಿಗೆ ಕರೆ ಮಾಡಿ ಪರಿಸ್ಥಿತಿವಿವರಣೆ ಮಾಡಿದ. ಸಹಾಯವಾಣಿ ಮೂಲಕ ಮಾಹಿತಿ ಪಡೆದ ರೋಟರಿ ಡಾ.ಜಯರಾಂ, ಕೆಜಿಎಫ್ನ ರೋಟರಿ ಸಂಸ್ಥೆಗೆ ತಿಳಿಸಿದರು.
ಸಂಸ್ಥೆಯ ಅ.ಮು. ಲಕ್ಷ್ಮೀನಾರಾಯಣ, ಕ್ಯಾಸಂಬಳ್ಳಿಯ ದಿವಾಕರ ಎಂಬಾತನ ಜೊತೆಗೂಡಿ ಎಲ್ಲೆಡೆ ಹುಡುಕಿ, ಕೊನೆಗೆ ಶೆಡ್ನಲ್ಲಿ ಅವರನ್ನು ಪತ್ತೆ ಮಾಡಿ, ಆಹಾರ ಧಾನ್ಯ ವಿತರಣೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ