![court](https://www.udayavani.com/wp-content/uploads/2024/07/court-7-415x231.jpg)
ಕೆಲಸದ ಅವಧಿ ಹೆಚ್ಚಳಕ್ಕೆ ವಿರೋಧ
Team Udayavani, May 27, 2020, 8:02 AM IST
![kelasada-avadhi](https://www.udayavani.com/wp-content/uploads/2020/05/kelasada-avadhi-620x262.jpg)
ಕೋಲಾರ: ರಾಜ್ಯ ಸರಕಾರ ಕೈಗಾರಿಕೆ ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸಿರುವ ಸುತ್ತೋಲೆಯನ್ನು ಹಿಂಪಡೆ ಯುವಂತೆ ಆಗ್ರಹಿಸಿ, ಇಲ್ಲಿನ ತಾಲೂಕು ಕಚೇರಿ ಮುಂದೆ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯಿಂದ ಸಿಐಟಿಯು ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು.
ಸಿಐಟಿಯು ಜಿಲ್ಲಾ ಮುಖಂಡ ವಿಜಯಕೃಷ್ಣ ಮಾತನಾಡಿ, ರಾಜ್ಯ ಸರಕಾರ ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆಗಳಿಂದ ಹತ್ತು ಗಂಟೆಗಳಿಗೆ ಎಂದರೆ ವಾರದಲ್ಲಿ 60 ಗಂಟೆ ದುಡಿಯಲು ಹೆಚ್ಚಿಸಿರುವ ಆದೇಶವನ್ನು ಕೂಡಲೇ ಕೈ ಬಿಡಬೇಕು ಎಂದು ಒತ್ತಾಯಿಸಿದರು. ಕಾರ್ಮಿಕರ ನೂರಾರು ಹೋರಾಟಗಳಿಂದ ಗಳಿಸಿದ್ದ ಕಾರ್ಮಿಕ ಕಾನೂನುಗಳನ್ನು ಮಾಲೀಕರ ಪರವಾಗಿ ಸಡಿಲಗೊಳಿಸುವ ಪ್ರಯತ್ನ ಇದ್ದಾಗಿದೆ ಎಂದು ದೂರಿದರು.
ಇದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ನಿಯಮಗಳಿಗೆ ವಿರುದಟಛಿವಾಗಿದ್ದು, ಸರಕಾರ ತೀರ್ಮಾನ ಕಾರ್ಮಿಕರ ಹಕ್ಕುಗಳನ್ನು ಮೂಲ ಭೂತ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಆರೋಪಿದರು. ಕೋವಿಡ್ 19 ಕ್ಕೆ ಸಂಬಂಧಿಸಿದ ಲಾಕ್ ಡೌನ್ ಜಾರಿಯಲ್ಲಿರುವಾಗಲೇ ದುರುದ್ದೇಶದ ಕಾರ್ಮಿಕ ಕಾನೂನು ಗಳನ್ನು ಸಡಿಲಗೊಳಿಸಲು ಪ್ರಯತ್ನಿಸುತ್ತಿರುವುದು ಖಂಡನೀಯವಾಗಿದ್ದು, 10 ಗಂಟೆ ಕೆಲಸ ಮಾಡುವುದರಿಂದ ಕಾರ್ಮಿಕರು ಶ್ರಾಂತಿ ಪಡೆಯಲು ಸಮಯ ಕಡಿಮೆಯಾಗಿ ಕಾರ್ಮಿಕರ ದೆ„ಹಿಕ ಮತ್ತು ಮಾನಸಿಕ ಅರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ .
ಹೀಗಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.ಸಿಐಟಿ ಯು ಜಿಲ್ಲಾ ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಬಾಲಕೃಷ್ಣ, ಬೀಮ್ ರಾಜ್, ಆಶಾ, ಚೇತನಾ, ಮಂಜುನಾಥ್, ಗೋಪಾಲ್ ಇದ್ದರು.
ಟಾಪ್ ನ್ಯೂಸ್
![court](https://www.udayavani.com/wp-content/uploads/2024/07/court-7-415x231.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![court](https://www.udayavani.com/wp-content/uploads/2024/07/court-7-150x83.jpg)
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
![robbers](https://www.udayavani.com/wp-content/uploads/2024/07/robbers-1-150x89.jpg)
Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!
![Kohli IPL 2024](https://www.udayavani.com/wp-content/uploads/2024/07/Kohli-IPL-2024-150x103.jpg)
Champions Trophy; ಕೊಹ್ಲಿ ಪಾಕ್ನಲ್ಲಿ ಆಡಲಿ: ಯೂನಿಸ್ ಖಾನ್
![1-tatoo](https://www.udayavani.com/wp-content/uploads/2024/07/1-tatoo-150x84.jpg)
Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!
![1-wewqewq](https://www.udayavani.com/wp-content/uploads/2024/07/1-wewqewq-2-150x98.jpg)
Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.