ಶೀಘ್ರ ಟವರ್ ತೆರವು, ಮತದಾನ ಬಹಿಷ್ಕಾರ ವಾಪಸ್
Team Udayavani, Mar 27, 2019, 12:58 PM IST
ಮಾಲೂರು: ಮೊಬೈಲ್ ಟವರ್ಅನ್ನು ಬದಲಿಸಬೇಕು, ಇಲ್ಲ, ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದ ಪಟ್ಟಣದ ಮಾರುತಿ ಬಡಾವಣೆಯ ಆರ್ಪಿ ಲೇಔಟ್ನ ನಿವಾಸಿಗಳನ್ನು ತಾಲೂಕು ಆಡಳಿತ ಹಾಗೂ ಸಹಾಯಕ ಚುನಾವಣೆ ಅಧಿಕಾರಿಗಳು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಟ್ಟಣದ ಪ್ರತಿಷ್ಠಿತ ಬಡಾವಣೆಗಳಲ್ಲಿ ಅರ್.ಪಿ. ಲೇಔಟ್ ಒಂದಾಗಿದೆ. ಈ ಹಿಂದೆ ಬಡಾವಣೆಯ ಖಾಲಿ ನಿವೇಶನದಲ್ಲಿ ಖಾಸಗಿ ಮೊಬೈಲ್ ಕಂಪನಿಯವರು ನೆಲ ಬಾಡಿಗೆ ಆಧಾರದ ಮೇಲೆ ಸ್ಥಳಗುತ್ತಿಗೆ ಪಡೆದು ಟವರ್ ನಿರ್ಮಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಟವರ್ ನಿರ್ಮಿಸಿರುವ ಅಕ್ಕ ಪಕ್ಕದಲ್ಲಿ ವಾಸದ ಮನೆಗಳು ನಿರ್ಮಾಣವಾಗಿದ್ದವು.
ಸ್ಥಳಾಂತರಕ್ಕೆ ಮನವಿ: ಟವರ್ನಿಂದ ಹೊರಬರುತ್ತಿರುವ ರೇಡಿಯೇಷನ್ನಿಂದಾಗಿ ಪಾರ್ಶ್ವವಾಯು, ಬಂಜೆತನ ಮುಂತಾದ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ನಿವಾಸಿಗಳು ಎರಡು ತಿಂಗಳ ಹಿಂದೆ ಟವರ್ ನಿರ್ವಹಣೆ ಮಾಡುತ್ತಿರುವ ಖಾಸಗಿ ಮೊಬೈಲ್ ಕಂಪನಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸ್ಥಳಾಂತರಕ್ಕೆ ಕೋರಿದ್ದರು.
ಬೆದರಿಕೆ: ಮನವಿ ಸ್ವೀಕರಿಸಿದ ಕಂಪನಿಯವರು ಸರಕಾರತ್ಮವಾಗಿ ಸ್ವಂದಿಸಿದ್ದರಾದರೂ ಕಾರ್ಯಗತವಾಗದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಸಂಘಟಿತರಾದ ಬಡಾವಣೆ ನಿವಾಸಿಗಳು ಟವರ್ನ ಬಳಿಯಲ್ಲಿ ಪ್ರತಿಭಟನೆ ನಡೆಸಿ ಏ.14ರ ಒಳಗಾಗಿ ಟವರ್ ಬದಲಿಸದಿದ್ದಲ್ಲಿ ಲೋಕಸಭಾ ಚುನಾವಣೆ ಸಾರ್ವತ್ರಿಕವಾಗಿ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದರು.
ನಿವಾಸಿಗಳ ಜತೆ ಸಭೆ: ಸಾರ್ವಜನಿಕರ ಪ್ರತಿಭಟನೆಗೆ ಮಣಿದ ತಹಶೀಲ್ದಾರ್ ಎಂ.ನಾಗರಾಜು, ಉಪ ಚುನಾವಣಾಧಿಕಾರಿ ಜಯಪ್ರಕಾಶ್, ಪುರಸಭಾ ಮುಖ್ಯಾಧಿಕಾರಿ ಪ್ರಸಾದ್, ಬಿಎಸ್ಎನ್ಎಲ್ನ ಜೆಟಿಒ ದಿವ್ಯಾ, ಪಿಎಸ್ಐ ರಂಗಸ್ವಾಮಿ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ದಾವಿಸಿ ಟವರ್ನ ಉಸ್ತುವಾರಿ ವಹಿಕೊಂಡಿರುವ ಪುಟ್ಟೇಗೌಡ ಮತ್ತು ಬಡಾವಣೆ ಸಾರ್ವಜನಿಕರ ಸಮ್ಮುಖದಲ್ಲಿ ಸಭೆ ನಡೆಸಿದರು.
ಮತದಾನದ ಭರವಸೆ: ಈ ವೇಳೆಯಲ್ಲಿ ಹಾಜರಿದ್ದ ಬಡಾವಣೆಯ ನಿವಾಸಿಗಳು, ಟವರ್ ತೆರವುಗೊಳಿಸದ ಹೊರತು ಮತದಾನ ಮಾಡದಿರಲು ತೀರ್ಮಾನಿಸಿದ್ದು ನಿರ್ಧಾರದಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಹೇಳಿದರು. ಈ ಬಗ್ಗೆ ಪುಟ್ಟೇಗೌಡರೊಂದಿಗೆ ಚರ್ಚಿಸಿದ ಅಧಿಕಾರಿಗಳು, ಶೀಘ್ರ ಸಾರ್ವಜನಿಕರ ಸಭೆಗೆ ಸ್ಪಂದಿಸುವಂತೆ ಅದೇಶಿಸಿದರು.
ವೇಳೆ ಮಾತನಾಡಿದ ಪುಟ್ಟೇಗೌಡ, ದೂರಸಂಪರ್ಕ ಇಲಾಖೆಯ 45 ತಂತ್ರಿಕ ದಿನಗಳಲ್ಲಿ ನಿಯಮಾನುಸಾರ ದೂರ ಸಂಪರ್ಕ ಇಲಾಖೆಯ ಅನುಮತಿ ಪಡೆದು ಟವರ್ ಅನ್ನು ಸ್ಥಳಾಂತರ ಮಾಡುವುದಾಗಿ ತಿಳಿಸಿದರು. ನಂತರ ಸಮ್ಮತಿಸಿದ ಬಡಾವಣೆಯ ನಿವಾಸಿಗಳು ಚುನಾವಣೆಯ ಮತದಾನದಲ್ಲಿ ಭಾಗವಹಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಬಡಾವಣೆ ನಿವಾಸಿಗಳಾದ ವೆಂಕಟರಾಮ್, ವಿಶ್ವನಾಥರಾವು, ಜಾವೀದ್ಖಾನ್, ಕೃಷ್ಣಪ್ಪ, ವೇಣುಗೋಪಾಲ ವಹ್ನಿ, ಅರೋಗ್ಯ ಇಲಾಖೆಯ ಯತೀಶ್, ಇಮ್ತಿಯಾಜ್, ಎಂ.ಪಿ.ಶ್ರೀನಿವಾಸ್, ನಂಜುಂಡಪ್ಪ, ಶಿವಣ್ಣ, ಪ್ರಕಾಶ್ ರಾಮಣ್ಣ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?