ಕೋಲಾರ: ಕೆಲಸಕ್ಕೆ ಹೋಗುವ ಮುನ್ನ ಪಾರ್ಟಿ;ಕೆರೆಯಲ್ಲಿ ತೆಪ್ಪ ಮಗುಚಿ ಮೂವರು ಗೆಳೆಯರು ನೀರುಪಾಲು
Team Udayavani, Mar 9, 2022, 5:26 PM IST
ಕೋಲಾರ: ಕೆರೆಯಲ್ಲಿ ತೆಪ್ಪ ಮಗುಚಿಕೊಂಡ ಪರಿಣಾಮ ಮೂವರು ಸ್ನೇಹಿತರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನೇರಳೆಕೆರೆಯಲ್ಲಿ ಬುಧವಾರ ಜರುಗಿದೆ.
ಮೃತರನ್ನು ಚಿಕ್ಕವಲಗಮಾದಿಯ ನವೀನ್(32), ನೇರಳೆಕೆರೆಯ ರಾಜೇಂದ್ರ (32), ಮೋಹನ್ (28) ಎಂದು ಗುರುತಿಸಲಾಗಿದೆ. ಇವರಿಗೆ ಊಟ ತರಲು ತೆರಳಿದ್ದ ಶಿವರಾಜ್ ಎಂಬ ಯುವಕ ಜೀವಂತವಾಗಿ ಉಳಿದುಕೊಂಡಿದ್ದಾನೆ.
ಬುಧವಾರ ಬೆಳಿಗ್ಗೆ ರೈಲಿನಲ್ಲಿ ಕೆಲಸಕ್ಕೆ ತೆರಳಬೇಕಾಗಿದ್ದ ಈ ಯುವಕರು ರೈಲು ತಡವಾಗಿದ್ದರಿಂದ ವಾಪಸ್ ಆಗಿ ಕೆರೆ ಬಳಿ ಪಾರ್ಟಿ ಮಾಡಲು ಮುಂದಾಗಿದ್ದಾರೆ. ಕೆರೆ ಬಳಿ ಪಾರ್ಟಿ ಮಾಡಿ ತೆಪ್ಪದಲ್ಲಿ ಹೋದಾಗ ಈ ದುರ್ಘಟನೆ ಜರುಗಿದೆ.
ತೆಪ್ಪವು ಕೆರೆ ಮಧ್ಯೆ ಹೋಗಿದ್ದಾಗ ಮುಳಗಲು ಆರಂಭಿಸಿದೆ. ಆಗ ಯುವಕರ ಕೂಗಾಟ ಕೇಳಿಸಿಕೊಂಡ ಸ್ಥಳೀಯರು ಮೂವರನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ, ತೆಪ್ಪವು ಕೆರೆ ಮಧ್ಯಕ್ಕೆ ಹೋಗಿದ್ದರಿಂದ ಮೂವರನ್ನು ರಕ್ಷಿಸಲು ತಕ್ಷಣಕ್ಕೆ ಸಾಧ್ಯವಾಗಿಲ್ಲ.
ಸದ್ಯ ಮೂವರು ಶವಗಳಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಹುಡುಕಾಟ ನಡೆದಿದೆ.
ನೂರಾರು ಮಂದಿ ಸ್ಥಳೀಯರು ಕೆರೆ ಸುತ್ತಲೂ ಜಮಾಯಿಸಿದ್ದಾರೆ.
ಸ್ಥಳಕ್ಕೆ ಕೆಜಿಎ- ಪೊಲೀಸ್ ರಕ್ಷಣಾಧಿಕಾರಿ ಡಿ.ಕೆ.ಧರಣಿದೇವಿ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಬಂಗಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ