![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಇಬ್ಬರ ಬಂಧನ, 17 ವಾಹನ ವಶ
Team Udayavani, Sep 11, 2020, 2:32 PM IST
![KOLAR-TDY-2](https://www.udayavani.com/wp-content/uploads/2020/09/KOLAR-TDY-2-1-620x372.jpg)
ಕೆಜಿಎಫ್: ಉರಿಗಾಂ ವೃತ್ತದ ಪೊಲೀಸರು ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ, ಅವರಿಂದ 17 ದ್ವಿಚಕ್ರ ವಾಹನ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಬೆಂಗಳೂರು ಟಿ.ಸಿ.ಪಾಳ್ಯ ನಿವಾಸಿ ಸತೀಶ್ ಕೊಂಡಾ (19), ಕೆಜಿಎಫ್ ಸಮೀಪದ ದಾಸರ ಹೊಸಹಳ್ಳಿಯ ನಿವಾಸಿ ವಿನೋದ್ ಕುಮಾರ್ ಬಿನ್ ಬಾಲಾಜಿರಾವ್ (19) ಎಂಬುವವರನ್ನು ಬಂಧಿಸಿ, ಅವರಿಂದ17 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ. ದಾಸರಹೊಸಹಳ್ಳಿ ಲ್ಯಾಂಡ್ ಮಾರ್ಕ್ ಸಮೀಪದ ನಿವಾಸಿ ಸೂರ್ಯ ಬಿನ್ ನಾಗಪ್ಪ (18) ಎಂಬಾತನು ತಲೆಮರೆಸಿಕೊಂಡಿರುತ್ತಾರೆ.
ಹೋಂಡಾ ಡಿಯೋ 09, ಬಜಾಜ್ ಪಲ್ಸರ್ 01, ಬಜಾಜ್ ಸಿಟಿ-100: 02 ವಾಹನ, ಹಿರೋ ಸ್ಪೈಂಡ್ಲರ್ 01, ಹೋಂಡಾ ಆಕ್ಟೀವಾ 01, ಟಿವಿಎಸ್ ಫಿಯರೋ 01, ಹೋಂಡಾ ಶೈನ್ 01, ಯಮಹಾ ಆರ್.ಎಕ್ಸ್ 01 ವಾಹನ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ದ್ವಿಚಕ್ರ ವಾಹನಗಳನ್ನು ಬೆಂಗಳೂರು ನಗರದ ಕಾಡುಗೋಡಿ, ಮಹದೇವಪುರ, ಆವಲಹಳ್ಳಿ, ಮೇಡಹಳ್ಳಿ, ಜೀವನ್ ಭೀಮಾನಗರ ಮುಂತಾದ ಸ್ಥಳಗಳಲ್ಲಿ ಕಳವು ಮಾಡಿರುತ್ತಾರೆ.
ಆರೋಪಿಗಳನ್ನು ಮತ್ತು ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡುವಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರ ಮಾರ್ಗದರ್ಶನ, ಡಿವೈಎಸ್ಪಿ ಬಿ.ಕೆ. ಉಮೇಶ ನೇತೃತ್ವದಲ್ಲಿಉರಿಗಾಂ ಸಿಪಿಐ ಮುಸ್ತಾಕ್ಪಾಷ,ಪಿಎಸ್ಐ ಆರ್.ವಿಜಯ್, ಸಿಬ್ಬಂದಿ ಗಳಾದ ಸುನೀಲ್ಕುಮಾರ್, ಸಿದ್ದುಸುಂ ಟ್ಯಾನ್, ಶಂಕರ್, ಮಹೇಂದ್ರಪ್ರಸಾದ್, ಆನಂದಕುಮಾರ್, ಮಂಜುಳಾ ರವರು ಯಶಸ್ವಿಯಾಗಿರುತ್ತಾರೆಂದು ಕೇಂದ್ರವಲಯ ಐಜಿಪಿ ಸೀಮಾಂತ ಕುಮಾರ್ ಸಿಂಗ್ ಪ್ರಶಂಶಿಸಿದ್ದಾರೆ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.