![Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ](https://www.udayavani.com/wp-content/uploads/2024/07/shiruru-415x249.jpg)
ಜೀವ ಜಲ ಸಂರಕ್ಷಣೆ ಎಲ್ಲರ ಹೊಣೆ
Team Udayavani, Jan 11, 2020, 4:31 PM IST
![kolar-tdy-2](https://www.udayavani.com/wp-content/uploads/2020/01/kolar-tdy-2-1-620x306.jpg)
ಬಂಗಾರಪೇಟೆ: ಜಿಲ್ಲೆ ಮಟ್ಟಿಗೆ ಪ್ರತಿ ಹನಿ ನೀರೂ ಅಮೂಲ್ಯವಾದದ್ದು, ವ್ಯರ್ಥ ಮಾಡದೆ ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಉಳಿಸುವುದು ಎಲ್ಲರ ಹೊಣೆ ಎಂದು ತಾಪಂ ಇಒ ವೆಂಕಟೇಶ್ ಹೇಳಿದರು.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಪಂ ಹಾಗೂ ವೀಲ್ ಸ್ವಯಂ ಸೇವಾ ಸಂಸ್ಥೆಯಿಂದ ಗ್ರಾಪಂ ನೀರುಗಂಟಿಗಳಿಗೆ ಸ್ವತ್ಛತೆ, ನೀರಿನ ಬಗ್ಗೆ ಅರಿವು ಮೂಡಿಸಲು ಹಮ್ಮಿಕೊಂಡಿದ್ದ ಕ್ಷೇತ್ರ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಕಲ ಜೀವ ರಾಶಿಗಳಿಗೂ ನೀರು ಆಧಾರ. ಇಡೀ ಮಾನವ ಕುಲವೇ ನೀರನ್ನು ಜೀವಜಲವೆಂದು ಪರಿಗಣಿಸಿದೆ ಎಂದು ಹೇಳಿದರು.
ವಿಶ್ವದಲ್ಲಿ ಮೂರು ಭಾಗ ನೀರಿದ್ದು, ಒಂದು ಭಾಗ ಭೂಮಿ ಇದೆ. ವಿಶ್ವದಲ್ಲಿ ಶೇ.1ರಷ್ಟು ಮಾತ್ರ ಮನುಕುಲ, ಗಿಡ ಮರ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ಬಳಕೆಯಾಗಿದೆ. ಈ ಒಂದರಷ್ಟು ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ಶೇ. 70.1 ಕೈಗಾರಿಕೆಗಳಿಗೆ 20.1, ಕುಡಿಯುವ ನೀರು ಮತ್ತು ಗೃಹ ಬಳಕೆಗೆ ಕೇವಲ ಶೇ.9.8ರಷ್ಟು ಬಳಕೆಯಾಗುತ್ತಿದೆ. ಆದರೆ, ಇಂದು ಮಾನವನ ಸತತ ಚಟುವಟಿಕೆಗಳಿಂದಾಗಿ ಈ ಅತ್ಯಲ್ಪ ಕುಡಿಯುವ ನೀರು ಮಾಲಿನ್ಯವಾಗುತ್ತಿದೆ, ಇದರಿಂದ ಅಪಾಯಕಾರಿ ಸಾರಜನಕದಂತಹ ಅನಿಲಗಳು, ನೈಟ್ರೇಟ್, ಕ್ಯಾಲ್ಸಿಯಂ, ಸೋಡಿಯಂ ನಂತಹ ಲವಣಗಳು ಸೇರಿ ಕಲುಷಿತಗೊಂಡಿದೆ ಎಂದು ವಿವರಿಸಿದರು.
ಕಲುಷಿತ ನೀರಿನಿಂದ ಹಲವು ರೋಗಗಳನ್ನು ಮನುಷ್ಯ ಎದುರಿಸಬೇಕಾಗಿದೆ. ಎಲ್ಲಾ ಗ್ರಾಮಗಳಲ್ಲಿ ಶುದ್ಧ ನೀರು ಜನರಿಗೆ ಪೂರೈಕೆಯಾಗಬೇಕು ಮತ್ತು ಲಭ್ಯವಿರುವ ನೀರನ್ನು ಹೇಗೆ ಮಿತವಾಗಿ ಬಳಕೆ ಮಾಡಬೇಕು ಹಾಗೂ ಗ್ರಾಮಗಳಲ್ಲಿ ನೈರ್ಮಲ್ಯ
ಹೇಗೆ ರಕ್ಷಣೆ ಮಾಡಬೇಕು, ಇದರಿಂದಾಗುವ ಅನುಕೂಲಗಳನ್ನು ಮೊದಲು ನೀರುಗಂಟಿಗಳಿಗೆ ತಿಳಿಯಬೇಕಾಗಿದೆ. ಆದ್ದರಿಂದ ಅವರಿಗೆ ಒಂದು ದಿನದ ತರಬೇತಿಯನ್ನು ಜಿಲ್ಲೆಯ ಮುಳಬಾಗಿಲು ತಾಲೂಕು ಉತ್ತನೂರಿನಲ್ಲಿ ಹಮ್ಮಿಕೊಂಡಿದ್ದು, ಅಲ್ಲಿ ಹೋಗಿ ತರಬೇತಿ ಪಡೆದು ಅದನ್ನು ತಮ್ಮ ಗ್ರಾಪಂಗಳಲ್ಲಿ ಅಳಡಿಸಬೇಕೆಂದು ಹೇಳಿದರು.
ಬೀದಿ ನಾಟಕಗಳ ಮೂಲಕ ಜನರಿಗೆ ನೈರ್ಮಲ್ಯ ಮತ್ತು ಜಲರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು. ಈ ವೇಳೆ ತಾಪಂ ಎಡಿ ಮಂಜುನಾಥ್, ವ್ಹೀಲ್ಸಂಸ್ಥೆ ಅಧ್ಯಕ್ಷ ಸತ್ಯನಾರಾಯಣ, ಉಪಾಧ್ಯಕ್ಷ ಎಂ.ರತ್ನಪ್ಪ, ದೋಣಿಮಡಗು ಪಿಡಿಒ ಸುರೇಶ್ಬಾಬು ಇದ್ದರು.
ಟಾಪ್ ನ್ಯೂಸ್
![Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ](https://www.udayavani.com/wp-content/uploads/2024/07/shiruru-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ](https://www.udayavani.com/wp-content/uploads/2024/07/shiruru-150x90.jpg)
Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-150x83.jpg)
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.