ಜೀವ ಜಲ ಸಂರಕ್ಷಣೆ ಎಲ್ಲರ ಹೊಣೆ
Team Udayavani, Jan 11, 2020, 4:31 PM IST
ಬಂಗಾರಪೇಟೆ: ಜಿಲ್ಲೆ ಮಟ್ಟಿಗೆ ಪ್ರತಿ ಹನಿ ನೀರೂ ಅಮೂಲ್ಯವಾದದ್ದು, ವ್ಯರ್ಥ ಮಾಡದೆ ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಉಳಿಸುವುದು ಎಲ್ಲರ ಹೊಣೆ ಎಂದು ತಾಪಂ ಇಒ ವೆಂಕಟೇಶ್ ಹೇಳಿದರು.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಪಂ ಹಾಗೂ ವೀಲ್ ಸ್ವಯಂ ಸೇವಾ ಸಂಸ್ಥೆಯಿಂದ ಗ್ರಾಪಂ ನೀರುಗಂಟಿಗಳಿಗೆ ಸ್ವತ್ಛತೆ, ನೀರಿನ ಬಗ್ಗೆ ಅರಿವು ಮೂಡಿಸಲು ಹಮ್ಮಿಕೊಂಡಿದ್ದ ಕ್ಷೇತ್ರ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಕಲ ಜೀವ ರಾಶಿಗಳಿಗೂ ನೀರು ಆಧಾರ. ಇಡೀ ಮಾನವ ಕುಲವೇ ನೀರನ್ನು ಜೀವಜಲವೆಂದು ಪರಿಗಣಿಸಿದೆ ಎಂದು ಹೇಳಿದರು.
ವಿಶ್ವದಲ್ಲಿ ಮೂರು ಭಾಗ ನೀರಿದ್ದು, ಒಂದು ಭಾಗ ಭೂಮಿ ಇದೆ. ವಿಶ್ವದಲ್ಲಿ ಶೇ.1ರಷ್ಟು ಮಾತ್ರ ಮನುಕುಲ, ಗಿಡ ಮರ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ಬಳಕೆಯಾಗಿದೆ. ಈ ಒಂದರಷ್ಟು ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ಶೇ. 70.1 ಕೈಗಾರಿಕೆಗಳಿಗೆ 20.1, ಕುಡಿಯುವ ನೀರು ಮತ್ತು ಗೃಹ ಬಳಕೆಗೆ ಕೇವಲ ಶೇ.9.8ರಷ್ಟು ಬಳಕೆಯಾಗುತ್ತಿದೆ. ಆದರೆ, ಇಂದು ಮಾನವನ ಸತತ ಚಟುವಟಿಕೆಗಳಿಂದಾಗಿ ಈ ಅತ್ಯಲ್ಪ ಕುಡಿಯುವ ನೀರು ಮಾಲಿನ್ಯವಾಗುತ್ತಿದೆ, ಇದರಿಂದ ಅಪಾಯಕಾರಿ ಸಾರಜನಕದಂತಹ ಅನಿಲಗಳು, ನೈಟ್ರೇಟ್, ಕ್ಯಾಲ್ಸಿಯಂ, ಸೋಡಿಯಂ ನಂತಹ ಲವಣಗಳು ಸೇರಿ ಕಲುಷಿತಗೊಂಡಿದೆ ಎಂದು ವಿವರಿಸಿದರು.
ಕಲುಷಿತ ನೀರಿನಿಂದ ಹಲವು ರೋಗಗಳನ್ನು ಮನುಷ್ಯ ಎದುರಿಸಬೇಕಾಗಿದೆ. ಎಲ್ಲಾ ಗ್ರಾಮಗಳಲ್ಲಿ ಶುದ್ಧ ನೀರು ಜನರಿಗೆ ಪೂರೈಕೆಯಾಗಬೇಕು ಮತ್ತು ಲಭ್ಯವಿರುವ ನೀರನ್ನು ಹೇಗೆ ಮಿತವಾಗಿ ಬಳಕೆ ಮಾಡಬೇಕು ಹಾಗೂ ಗ್ರಾಮಗಳಲ್ಲಿ ನೈರ್ಮಲ್ಯ
ಹೇಗೆ ರಕ್ಷಣೆ ಮಾಡಬೇಕು, ಇದರಿಂದಾಗುವ ಅನುಕೂಲಗಳನ್ನು ಮೊದಲು ನೀರುಗಂಟಿಗಳಿಗೆ ತಿಳಿಯಬೇಕಾಗಿದೆ. ಆದ್ದರಿಂದ ಅವರಿಗೆ ಒಂದು ದಿನದ ತರಬೇತಿಯನ್ನು ಜಿಲ್ಲೆಯ ಮುಳಬಾಗಿಲು ತಾಲೂಕು ಉತ್ತನೂರಿನಲ್ಲಿ ಹಮ್ಮಿಕೊಂಡಿದ್ದು, ಅಲ್ಲಿ ಹೋಗಿ ತರಬೇತಿ ಪಡೆದು ಅದನ್ನು ತಮ್ಮ ಗ್ರಾಪಂಗಳಲ್ಲಿ ಅಳಡಿಸಬೇಕೆಂದು ಹೇಳಿದರು.
ಬೀದಿ ನಾಟಕಗಳ ಮೂಲಕ ಜನರಿಗೆ ನೈರ್ಮಲ್ಯ ಮತ್ತು ಜಲರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು. ಈ ವೇಳೆ ತಾಪಂ ಎಡಿ ಮಂಜುನಾಥ್, ವ್ಹೀಲ್ಸಂಸ್ಥೆ ಅಧ್ಯಕ್ಷ ಸತ್ಯನಾರಾಯಣ, ಉಪಾಧ್ಯಕ್ಷ ಎಂ.ರತ್ನಪ್ಪ, ದೋಣಿಮಡಗು ಪಿಡಿಒ ಸುರೇಶ್ಬಾಬು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…