ಸ್ಕೂಲ್ ಬಸ್ ನ ಚಕ್ರದ ಅಡಿಗೆ ಸಿಲುಕಿ ಮೂರು ವರ್ಷದ ಬಾಲಕಿ ಮೃತ್ಯು
ಅಕ್ಕಂದಿರಿಗೆ ಟಾಟಾ ಹೇಳಲು ಬಂದಿದ್ದ ಮಗು...!
Team Udayavani, Jul 8, 2023, 3:22 PM IST
ಕುಷ್ಟಗಿ: ಸ್ಕೂಲ್ ಗೆ ಹೊರಟ ಅಕ್ಕ ನಿಗೆ ಟಾಟಾ ಹೇಳಲು ಬಂದಿದ್ದ ಮೂರು ವರ್ಷದ ಬಾಲಕಿ, ಸ್ಕೂಲ್ ಬಸ್ ನ ಚಕ್ರದ ಅಡಿಗೆ ಸಿಲುಕಿ ದಾರುಣ ಸಾವಿಗೀಡಾದ ಘಟನೆ ಕುಷ್ಟಗಿ ತಾಲೂಕಿನ ಗೋತಗಿ ಗ್ರಾಮದಲ್ಲಿ ನಡೆದಿದೆ.
ಗೋತಗಿ ಗ್ರಾಮದ ಬಸವರಾಜ ಬಾವಿಕಟ್ಟಿ ಮೂವರು ಪುತ್ರಿಯರಲ್ಲಿ ಇಬ್ಬರು ಪುತ್ರಿಯರನ್ನು 5 ಕಿ.ಮೀ. ದೂರದ ಹಿರೇ ಓತಗೇರಿ ಗ್ರಾಮದ ( ಹುನಗುಂದ ತಾಲೂಕು) ಜ್ಞಾನಮಂದಿರ ಶಾಲೆಗೆ ಸೇರಿಸಿದ್ದರು. ಎಂದಿನಂತೆ ಶನಿವಾರ 7 ಗಂಟೆಗೆ ಗೋತಗಿ ಗ್ರಾಮದ ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳಲು ಬಂದಿತ್ತು. ತನ್ನ ಅಕ್ಕಂದಿರುಗಳಿಗೆ ಟಾಟಾ ಹೇಳಲು ಬಾಲಕಿ ಚೈತ್ರಾ ಬಂದಿದ್ದಳು.
ಈ ಬಾಲಕಿಯರಿಗೆ ತಂಗಿ ಚೈತ್ರಾ ಹಿಂಬಾಲಿಸಿರುವುದು ಗೊತ್ತಿರಲಿಲ್ಲ ಹಾಗೆಯೇ ಅವಸರದಿಂದ ಸ್ಕೂಲ್ ಬಸ್ಸನ್ನೇರಿದ್ದರು. ಬಸ್ಸಿನ ಚಾಲಕ ಮಿರರ್ ಗಮನಿಸದೇ ಬಸ್ ಬಿಟ್ಟಿದ್ದರಿಂದ ಕೆಳಗೆ ನಿಂತಿದ್ದ ಬಾಲಕಿಯ ಮೇಲೆ ಹರಿದ ಬಸ್ ಯಮ ಸ್ವರೂಪಿಯಾಗಿ ಕ್ಷಣಾರ್ಧದಲ್ಲಿ ಬಾಲಕಿಯ ಪ್ರಾಣ ಹಾರಿ ಹೋಗಿದೆ.
ಸ್ಥಳೀಯರು ರೊಚ್ಚಿಗೆದ್ದು ಚಾಲಕ ಹಾಗೂ ಕ್ಲೀನರ್ ಗೆ ಧರ್ಮದೇಟು ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕಿ ಚೈತ್ರಾಳ ಶವವನ್ನು ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ. ಸ್ಕೂಲ್ ಬಸ್ ಚಾಲಕ ಪ್ರವೀಣ ಕಂದಕೂರು ಹಾಗೂ ಕ್ಲೀನರ್ ವಿರುದ್ದ ಕುಷ್ಟಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
MUST WATCH
ಹೊಸ ಸೇರ್ಪಡೆ
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ