ತೊಗರಿ ಖರೀದಿಗೆ ಆ್ಯಪ್ ಗೊಂದಲ
Team Udayavani, Jan 18, 2020, 3:03 PM IST
ಕುಷ್ಟಗಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೆಂಬಲ ಬೆಲೆ ತೊಗರಿ ಕೇಂದ್ರದಲ್ಲಿ ಬೆಳೆಗಾರರ ನೋಂದಣಿಗೆ ಚಾಲನೆ ಸಿಕ್ಕಿದ್ದು, ನೋಂದಣಿ ಪ್ರಕ್ರಿಯೆಯಲ್ಲಿ ಆರಂಭಿಕ ಗೊಂದಲ ಶುರುವಾಗಿದೆ. ಕಳೆದ ಜ. 13ರಂದು ಮೆಣೇಧಾಳ ಗ್ರಾಮಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭೇಟಿ ನೀಡಿದ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಬೆಂಬಲ ಬೆಲೆ ತೊಗರಿ ಕೇಂದ್ರ ಆರಂಭಿಸುವಂತೆ ಮನವಿ ಸಲ್ಲಿಸಿದ್ದರು.
ರೈತರ ಮನವಿಗೆ ಸ್ಪಂದಿಸಿದ ಡಿಸಿಎಂ ಕಾರಜೋಳ ಅವರು, ಕೂಡಲೇ ತೊಗರಿ ಬೆಂಬಲ ಕೇಂದ್ರ ಆರಂಭಿಸುವಂತೆ ಜಿಲ್ಲಾಧಿ ಕಾರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕುಷ್ಟಗಿ ತಾಲೂಕಿನಲ್ಲಿ ಜ. 17ರಿಂದ ಬೆಂಬಲ ಬೆಲೆ ತೊಗರಿ ಕೇಂದ್ರದ ಆನ್ ಲೈನ್ ನೋಂದಣಿ ಪ್ರಕಿಯೆಯನ್ನು ಕುಷ್ಟಗಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಆರಂಭಿಸಿದೆ. ಆದರೆ ಆರಂಭದಲ್ಲೇ ನೋಂದಣಿಗಾಗಿ ದಾಖಲೆಗಳೊಂದಿಗೆ ಆಗಮಿಸಿದ ರೈತರಿಗೆ ಖರೀ ದಿ ಪ್ರಕ್ರಿಯೆ ನಿಯಮಾವಳಿಯಂತೆ ದಾಖಲೆ ಇದ್ದರೂ ನೋಂದಣಿ ತಿರಸ್ಕರಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಆನ್ಲೈನ್ ನೋಂದಣಿಯ ವೇಳೆ ಜಮೀನಿನ ಪಹಣಿ, ಆಧಾರ ಲಿಂಕ್ ಬ್ಯಾಂಕ್ ಪಾಸ್ಬುಕ್, ರೈತರ ಐಡಿ ಸಂಖ್ಯೆ, ಆಧಾರ್ ಕಾರ್ಡ್ ಇತ್ಯಾದಿ ದಾಖಲೆಗಳನ್ನು ಸಲ್ಲಿಸಬೇಕು. ಬೆಳೆಯ ದೃಢೀಕರಣಕ್ಕೆ ಬೆಳೆದರ್ಶಕ ಆ್ಯಪ್ನಲ್ಲಿ ರೈತರು ತೊಗರಿ ಬೆಳೆ ಇದ್ದರು ಪರಿಷ್ಕೃತಗೊಳ್ಳದೇ ಮುಂಗಾರು ಬೆಳೆ ಹಾಗೆಯೇ ಇದೆ. ಹೀಗಾಗಿ ನೋಂದಣಿಯನ್ನು ತಿರಸ್ಕರಿಸುತ್ತಿರುವುದು ರೈತರನ್ನು ಕಂಗಾಲಾಗಿಸಿದೆ. ತೆಗ್ಗಿಹಾಳ ಗ್ರಾಮದ ರೈತ ನಡುಗಡ್ಡೆಪ್ಪ ಅವರ ಸ.ನಂ. 17/ಹಿಸ್ಸಾ 2 ಅ ದಲ್ಲಿ ತೊಗರಿ ಬೆಳೆಯಲಾಗಿದೆ, ಬೆಳೆ ದರ್ಶಕ ಆ್ಯಪ್ನಲ್ಲಿ ಸಜ್ಜೆ ಬೆಳೆ ದಾಖಲಾಗಿದೆ.
ತಳವಗೇರಾ ರೈತ ಮಹೇಶ ಕೊಪ್ಪದ ಅವರು ತೊಗರಿ ಬೆಳೆಯಲಾಗಿದ್ದರೂ. ಹುರಳಿ ಎಂದು ನಮೂದಾಗಿದೆ. ಬಹುತೇಕ ರೈತರ ಪಹಣಿಗೂ ಬೆಳೆದ ಬೆಳೆಗೂ ವ್ಯತ್ಯಾಸ ಕಂಡು ಬಂದಿದ್ದು ಸದರಿ ವ್ಯತ್ಯಾಸ ಸರಿಪಡಿಸದೇ ನೋಂದಣಿ ತಿರಸ್ಕರಿಸುತ್ತಿರುವುದು ಸರ್ಕಾರ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raids: ಕೊಪ್ಪಳ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪಾ ಮನೆ ಮೇಲೆ ಲೋಕಾಯುಕ್ತ ದಾಳಿ
Koppala; ಶಿವರಾಜ ತಂಗಡಗಿ ಹೇಳಿಕೆಯನ್ನು ಬಿಜೆಪಿ ತಿರುಚಿದೆ: ಕೃಷ್ಣಾ ಇಟ್ಟಂಗಿ
Koppal Lok Sabha constituency; ಲಿಂಗಾಯತ, ಅಹಿಂದ ಮತಗಳೇ ಇಲ್ಲಿ ನಿರ್ಣಾಯಕ
Koppala: ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡಿಯಿರಿ ಎಂದ ಸಚಿವ ತಂಗಡಗಿ ವಿರುದ್ಧ ಪ್ರಕರಣ ದಾಖಲು
“Modi ಜಪಿಸುವ ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಿರಿ’: ಶಿವರಾಜ ತಂಗಡಗಿ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ