ಗಂಗಾವತಿ: ಹೊರ ವಲಯದ ಐಟಿಐ ಕಾಲೇಜ್ ಹಿಂಭಾಗದ ಗುಡ್ಡದಲ್ಲಿ ಚಿರತೆಗಳ ಪ್ರತ್ಯಕ್ಷ
Team Udayavani, Dec 15, 2022, 9:44 AM IST
ಗಂಗಾವತಿ: ನಗರದ ಹೊರವಲಯದ ಐಟಿಐ ಕಾಲೇಜು ಹಿಂಭಾಗದ ಗುಡ್ಡಪ್ರದೇಶದಲ್ಲಿ ಗುರುವಾರ ಬೆಳ್ಳಂಬೆಳ್ಳಿಗ್ಗೆ ವಾಕಿಂಗ್ ಗೆ ತೆರಳಿದವರಿಗೆ ಚಿರತೆಗಳು ಪ್ರತ್ಯಕ್ಷವಾಗಿದ್ದು, ಐಟಿಐ ಕಾಲೇಜು ರಸ್ತೆಯಲ್ಲಿ ವಾಕಿಂಗ್ ಗೆ ತೆರಳುವವರು ಆತಂಕಗೊಂಡಿದ್ದಾರೆ.
ಐಟಿಐ ಕಾಲೇಜು ಹಿಂಭಾಗದ ಗುಡ್ಡ, ಸಿದ್ದಿಕೇರಿ, ಸೂರ್ಯನಾಯಕನ ತಾಂಡ, ವಾಣೀಭದ್ರೇಶ್ವರ ಗುಡ್ಡ ಸೇರಿದಂತೆ ಇಲ್ಲಿ ಗುಡ್ಡ ಬೆಟ್ಟಗಳಲ್ಲಿ ಚಿರತೆಗಳು ಕಂಡುಬಂದಿದ್ದು, ಕೆಲ ಗ್ರಾಮಗಳಲ್ಲಿ ಜನಜಾನುವಾರುಗಳ ಮೇಲೆ ದಾಂಧಲೆ ನಡೆಸಿವೆ.
ಅರಣ್ಯ ಇಲಾಖೆ ಚಿರತೆ ಮತ್ತು ಕರಡಿಗಳನ್ನು ಸೆರೆ ಹಿಡಿಯಲು ಬೋನ್ ಗಳನ್ನು ಇರಿಸಿದ್ದು, ಕಳೆದ ವಾರ ಉಡುಮಕಲ್ ಗಡ್ಡಿ ಗ್ರಾಮದ ಹೊರಗೆ ಇರಿಸಿದ್ದ ಬೋನ್ ಗೆ ಚಿರತೆ ಬಿದ್ದಿತ್ತು. ಇದೀಗ ಸಂಗಾಪೂರ ಮತ್ತು ಅಂಜನಾದ್ರಿ, ಪಂಪಾಸರೋವರ ಭಾಗದಲ್ಲಿ ಚಿರತೆಗಳು ಹಗಲಿನಲ್ಲಿಯೇ ಪ್ರತ್ಯಕ್ಷವಾಗಿ ಜನರಿಗೆ ಆತಂಕ ಉಂಟು ಮಾಡಿವೆ.
ಅರಣ್ಯ ಇಲಾಖೆ ವೈಜ್ಞಾನಿಕ ತಂತ್ರಗಳನ್ನು ಬಳಸಿ ಕಾಡು ಪ್ರಾಣಿಗಳಿಂದ ಜನ-ಜಾನುವಾರುಗಳಿಗೆ ರಕ್ಷಣೆ ನೀಡಬೇಕೆಂದು ಗುರುವಾರ ಬೆಳ್ಳಿಗ್ಗೆ ಗುಡ್ಡದ ಬಂಡೆಯ ಮೇಲೆ ಮಲಗಿದ್ದ ಚಿರತೆಯನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ ವಿರೇಶ ಆರತಿ ಎಂಬವರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ
Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು
Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ
Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ
Koppala: ಬೆಂಬಲಿಗರ ಜೊತೆ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಸಂಸದ ಸಂಗಣ್ಣ ಕರಡಿ…