ರೈತ ಸಂಘದ ಹೋರಾಟಕ್ಕೆ ಜಿಲ್ಲಾಡಳಿತ ಸ್ಪಂದನೆ
ಎಂಎಸ್ಪಿಎಲ್ ಕಂಪನಿ ಯೂನಿಟ್ ವಿಸ್ತರಣೆಗೆ ವಿರೋಧ ; ರೈತರ ಹೋರಾಟಕ್ಕೆ ತಾತ್ಕಾಲಿಕ ತಡೆ
Team Udayavani, Jun 6, 2022, 2:47 PM IST
ಕೊಪ್ಪಳ: ಕರ್ನಾಟಕ ರೈತ ಸಂಘ ಹಾಗೂ ಭೂ ಸಂತ್ರಸ್ತ ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ಮೂರು ದಿನಗಳ ಹೋರಾಟಕ್ಕೆ ಕೈಗಾರಿಕೆ ಇಲಾಖೆ, ಜಿಲ್ಲಾಡಳಿತ ಸ್ಪಂದಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಕ್ಕೆ ರೈತ ಸಂಘವು ಸಂತಸ ವ್ಯಕ್ತಪಡಿಸಿ, ಹೋರಾಟವನ್ನು ತಾತ್ಕಾಲಿಕ ಹಿಂಪಡೆದಿದೆ.
ಎಂಎಸ್ಪಿಎಲ್ ಕಂಪನಿಯು ಯೂನಿಟ್ನ್ನು ವಿಸ್ತರಣೆ ವಿರೋಧಿಸಿ, ಹೆಚ್ಚುವರಿ ರೈತರ ಭೂಮಿ ರೈತರಿಗೆ ವಾಪಾಸ್ ಕೊಡುವಂತೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಗಿತ್ತು. ಜಿಲ್ಲಾಡಳಿತವು ಇದಕ್ಕೆ ಸ್ಪಂದಿಸಿದ್ದು, ಕಂಪನಿ ಪ್ರತಿನಿಧಿಗಳ ಜೊತೆ ಸಭೆ ನಡೆಸಿ, ರಾಜ್ಯ ಕೈಗಾರಿಕೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕೆಲವೊಂದು ಅಂಶಗಳನ್ನು ಆ ಪತ್ರದಲ್ಲಿ ವಿವರಿಸಿದ್ದಾರೆ.
ಜಿಲ್ಲಾಧಿಕಾರಿ ಅವರು ಬರೆದ ಪತ್ರದಲ್ಲಿ ಕೈಗಾರಿಕೆಗಾಗಿ ಖರೀದಿಸಿದ ಭೂಮಿಯನ್ನು ರೈತರಿಗೆ ವಾಪಸ್ ಕೊಡಲು ಕೋರಿದ್ದಾರೆ. ಕಂಪನಿಯು ಕೈಗಾರಿಕೆ ವಿಸ್ತರಣೆ ಮಾಡುವ ತೀರ್ಮಾನ ಕೈ ಬಿಟ್ಟಿರುವ ಕುರಿತು ಸಭೆಯಲ್ಲಿ ತಿಳಿಸಿದ್ದಾರೆ. ಖರೀದಿ ವ್ಯವಹಾರದಲ್ಲಿ ನಡೆದ ವಂಚನೆ ಕುರಿತು ನ್ಯಾಯಾಂಗ ತನಿಖೆಗೊಪ್ಪಿಸಲು ತಿಳಿಸಿದ್ದಾರೆ. ಕೆಐಎಡಿಬಿ ಮೂಲಕ ಎಕ್ಸಾಂ ಡಿಯರ್ ಕಂಪೆನಿಗೆ 350 ಎಕರೆ ಭೂಮಿ ಕಳೆದುಕೊಂಡ 71 ಕುಟುಂಬಗಳ ಪೈಕಿ 41 ಕುಟುಂಬಗಳಿಗೆ ಈವರೆಗೂ ಉದ್ಯೋಗ ದೊರೆತಿಲ್ಲ. ಈ 41 ಕುಟುಂಬಗಳಿಗೆ ತಕ್ಷಣ ಕೆಲಸ ಕೊಡಬೇಕು ಮತ್ತು ಅವರು ಅರ್ಜಿ ಸಲ್ಲಿಸಿದ ದಿನಗಳಿಂದ ವೇತನ ಲೆಕ್ಕ ಹಾಕಿ ಕೊಡಬೇಕು. ಕೆಲವರಿಗೆ 4 ವರ್ಷ ಇನ್ನು ಕೆಲವರಿಗೆ 6, 8 ವರ್ಷದ ವೇತನ ಕೊಡಲು ಕಂಪನಿಗೆ ಸೂಚನೆ ಕೊಟ್ಟಿದ್ದು, ಸಂತಸ ತರಿಸಿದೆ ಎಂದು ಅವರು ತಿಳಿಸಿದ್ದಾರೆ.
ಕುಣೆಕೇರಿ, ಲಾಚನಕೇರಿ, ಚಿಕ್ಕಬಗನಾಳ, ಕುಣಿಕೇರಿ ತಾಂಡಾದ ರೈತರು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿ ಸಂತಸ ವ್ಯಕ್ತಪಡಿಸಿದರು. ಹೋರಾಟಕ್ಕೆ ಸಿಕ್ಕ ಜಯದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ, ರೈತ ಸಂಘದ ಶರಣಪ್ಪ ದೊಡ್ಡಮನಿ, ಖಾದಲ ಹುಸೇನ್ ಕಾರಟಗಿ, ಅಲ್ಲಮಪ್ರಭು ಬೆಟ್ಟದೂರು, ಬಿ.ಎನ್. ಯರದಿಹಾಳ, ಬಸವರಾಜ ಶೀಲವಂತರ, ಈಶಪ್ಪ ಕುಣಿಕೇರಿ, ಬಸವರಾಜ ಕುಂಬಾರ, ಮಂಜುನಾಥ ಗಡಗಿ, ಮಂಜುನಾಥ ಕುಂಬಾರ, ಬಸವರಾಜ ನರೆಗಲ್, ಲಿಂಗಯ್ಯ ಶಶಿಮಠ, ಪಂಪಯ್ಯ ಹಿರೇಮಠ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ