ಗಂಗಾವತಿ: ಡಾ. ಅಂಬೇಡ್ಕರ್ ಪರಿನಿರ್ವಹಣಾ ದಿನ; ಯುವಕರಿಂದ ಮ್ಯಾರಥಾನ್ ಓಟ
Team Udayavani, Dec 6, 2022, 10:45 AM IST
ಗಂಗಾವತಿ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಸಮ ಸಮಾಜದ ಕನಸು ಕಂಡು ಸಂವಿಧಾನದ ಮೂಲಕ ಅನುಷ್ಠಾನ ಮಾಡಿದ ಮಹಾ ಮಾನವತಾವಾದಿಯಾಗಿದ್ದಾರೆಂದು ಡಿ.ವೈ.ಎಸ್. ಪಿ.ರುದ್ರೇಶ್ ಉಜ್ಜನಕೊಪ್ಪ ಹೇಳಿದರು.
ಅವರು ಮಂಗಳವಾರ ನಗರದ ಡಾ. ಬಿ.ಆರ್ .ಅಂಬೇಡ್ಕರ್ ವೃತ್ತದಲ್ಲಿ ಕಂಪ್ಲಿ-ಗಂಗಾವತಿ ಅಂಬೇಡ್ಕರ್ ಸಂದೇಶಗಳ ಜಾಗೃತಿಗಾಗಿ ಯುವಕರ ಮ್ಯಾರಥಾನ್ ಓಟ ಮುಕ್ತಾಯಗೊಳಿಸಿ ಮಾತನಾಡಿದರು.
ಅಂಬೇಡ್ಕರ್ ಶೋಷಿತ ಸಮುದಾಯದ ಪ್ರತಿನಿಧಿಯಾಗಿ ಭಾರತ ನವ ನಿರ್ಮಾಣ ಭಾರತದ ಶಿಲ್ಪಿಯಾಗಿದ್ದಾರೆ. ಅವರ ತತ್ವ ಆದರ್ಶಗಳನ್ನು ಯುವಕರು ಅಳವಡಿಸಿಕೊಂಡು ಸದೃಢ ಆರೋಗ್ಯದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆಗೈದು ಉನ್ನತ ಹುದ್ದೆಗಳನ್ನು ಪಡೆದು ಜನಸಾಮಾನ್ಯ ಸೇವೆ ಮಾಡುವಂತೆ ಆಗಬೇಕು. ಹಾಗೆಯೇ ಆದರೆ ಅಂಬೇಡ್ಕರ್ ಅವರು ಯುವಕರ ಬಗ್ಗೆ ಕಂಡ ಕನಸು ನನಸಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದ ಕುಮಾರ್, ಸುನಿಲ್ ಕುಮಾರ್, ಅನಿಲ್ ಕುಮಾರ್, ಸುದೀಪ್, ಸಿದ್ದು ಹರೀಶ್, ಮೆಹಬೂಬ್ ಮುಖಂಡರಾದ ಕೆ. ಅಂಬಣ್ಣ ದೇವರಾಜ್. ಸೇರಿದಂತೆ ಅನೇಕ ಮುಖಂಡರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavati: ಜೈ ಶ್ರೀರಾಮ್ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್