ಡಾ| ರಾಜಕುಮಾರ ಭಾರತೀಯ ಚಿತ್ರರಂಗ ಕಂಡ ಅದ್ಬುತ ನಟ
ನೆಲ, ಜಲ, ಭಾಷೆಗಾಗಿ ಅವಿರತವಾಗಿ ಶ್ರಮಿಸಿದ ಮಹಾನ್ ಕನ್ನಡ ಪ್ರೇಮಿ
Team Udayavani, Apr 25, 2022, 11:37 AM IST
ಕಾರಟಗಿ: ಡಾ| ರಾಜಕುಮಾರ ಅಭಿಮಾನಿಗಳ ಸಂಘದಿಂದ ಕರ್ನಾಟಕ ರತ್ನ, ಪದ್ಮಭೂಷಣ ಡಾ| ರಾಜಕುಮಾರ ಜನ್ಮದಿನವನ್ನು ರವಿವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ಡಾ| ರಾಜಕುಮಾರ ಕಲಾ ಮಂದಿರದಲ್ಲಿ ಡಾ| ರಾಜ್ ಅಭಿಮಾನಿ ಸಂಘದಿಂದ ಆಯೋಜಿಸಲಾದ ಈ ಸಮಾರಂಭದಲ್ಲಿ ವರನಟ ಡಾ| ರಾಜಕುಮಾರ ಹಾಗೂ ಪವರ್ ಸ್ಟಾರ್ ಪುನೀತರಾಜಕುಮಾರ್ ಭಾವಚಿತ್ರಕ್ಕೆ ಅರ್ಚಕ ಮುತ್ತುಸ್ವಾಮಿ ಅವರ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು.
ನಂತರ ನೆರೆದಿದ್ದ ಅಭಿಮಾನಿಗಳು ಇಬ್ಬರು ಮಹನೀಯರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಅಭಿಮಾನಿಗಳಿಗೆ ಸಿಹಿ ಹಂಚಿದ್ದಲ್ಲದೇ ಸ್ಥಳೀಯ ಕಡು ಬಡವರಾದ ದಂಪತಿಗೆ ಬಟ್ಟೆ ವಿತರಿಸಿದರು.
ಡಾ| ರಾಜ್ ಅಭಿಮಾನಿ ಸಂಘದ ಗೌರವಾಧ್ಯಕ್ಷ ಮಹಾರುದ್ರಯ್ಯ ಸ್ವಾಮಿ ಮಾತನಾಡಿ, ಡಾ| ರಾಜಕುಮಾರ ಕನ್ನಡ ಚಲನಚಿತ್ರರಂಗ ಕಂಡ ಅದ್ಭುತ ನಟ. ಅವರು ಬರೀ ನಟರಷ್ಟೇ ಅಲ್ಲ ರಾಜ್ಯದ ನೆಲ, ಜಲ, ಭಾಷೆಗಾಗಿ ಅವಿರತವಾಗಿ ಶ್ರಮಿಸಿದ ಮಹಾನ್ ಕನ್ನಡ ಪ್ರೇಮಿ ಮತ್ತು ಹೋರಾಟಗಾರರು ಹೌದು. ಸುಮಾರು ಐವತ್ತು ವರ್ಷಗಳ ಕಾಲ ಸುಮಾರು 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ಕೋಟ್ಯಂತರ ಕಲಾಪ್ರೇಮಿಗಳ ಹೃದಯ ಗೆದ್ದಿದ್ದರು. ತಮ್ಮ ಚಿತ್ರಗಳ ಮೂಲಕ ಬರೀ ಮನರಂಜನೆ ನೀಡದೇ ಸಾಮಾಜಿಕ ಮೌಲ್ಯಗಳನ್ನು ಸಾರಿದ್ದು, ಅವರ ಚಿತ್ರ ಜೀವನದ ವಿಶೇಷವಾಗಿತ್ತು. ಇಷ್ಟಲ್ಲದೇ ಇತ್ತೀಚಿಗೆ ತಾನೇ ತೀರಿಕೊಂಡ ಅವರ ಕೊನೆಯ ಪುತ್ರ ಕೂಡ ಅಭಿಜಾತ ಕಲಾವಿದರಾಗಿದ್ದರು. ಜೊತೆಗೆ ಅಂಧ, ಅನಾಥ ಮಕ್ಕಳ ಶಿಕ್ಷಣಕ್ಕೆ, ಗೋಶಾಲೆಗಳಿಗೆ ಕೋಟ್ಯಂತರ ರೂಪಾಯಿ ದಾನ ನೀಡಿದ್ದರು. ಇದಕ್ಕೆಲ್ಲ ಸ್ಫೂರ್ತಿ ವರನಟ ಡಾ| ರಾಜಕುಮಾರ ಆಗಿದ್ದರು ಎಂದರು.
ನಂತರ ಶಿಕ್ಷಕ ಸೂಗುರೇಶ ಬಪ್ಪೂರು ಮಾತನಾಡಿ, ಆರು ಕೋಟಿ ಕನ್ನಡಿಗರ ಆರಾಧ್ಯ ದೈವ ಡಾ| ರಾಜಕುಮಾರ ಅವರು ಈ ನಾಡಿಗೆ ನೀಡಿದ ಕೊಡುಗೆ ಅನುಪಮವಾದುದು. ಅವರು ಬರೀ ಚಿತ್ರರಂಗಕ್ಕೆ ಮಾತ್ರ ಸೇವೆ ಸಲ್ಲಿಸಲಿಲ್ಲ. ನಾಡು-ನುಡಿಗೆ ಧಕ್ಕೆ ಬಂದಾಗ ಬೀದಿಗೆ ಇಳಿದು ಹೋರಾಡಿದರು. ಅವರ ಆದರ್ಶ, ತತ್ವಗಳನ್ನು ಇಂದಿನ ಯುವ ಪೀಳಿಗೆ ಅನುಸರಿಸಬೇಕು. ಆ ಮೂಲಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದರು.
ಡಾ| ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ಮಹಾರುದ್ರಯ್ಯಸ್ವಾಮಿ, ಅಧ್ಯಕ್ಷ ಯಮನೂರಪ್ಪ ಬೇವಿನಾಳ, ನಾಗರಾಜ್ ಬಾಂಢೆ ಅಂಗಡಿ, ವೆಂಕಟೇಶ ಮೂಲಿಮನಿ, ವೆಂಕಟೇಶ ಭೋವಿ, ಅರ್ಜುನ ಸಿಂಗ್, ಖಾಜಾಸಾಬ್ ಪೇಂಟರ್, ವೆಂಕಟೇಶ ಚಿತ್ರಬರಹಗಾರರು, ತಿಪ್ಪಣ್ಣ ಮೂಲಿಮನಿ, ರಾಘವೇಂದ್ರ ಹಡಪದ್, ಕೃಷ್ಣಯ್ಯಶ್ರೇಷ್ಠಿ ಇನ್ನಿತರರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ