ರೈತರ ದೆಹಲಿ ಹೋರಾಟ ಎರಡನೇ ಸ್ವಾತಂತ್ರ್ಯ ಚಳುವಳಿ: ವೈ.ಎಸ್.ವಿ.ದತ್ತ
ಎಪಿಎಂಸಿ ಖಾಸಗೀಕರಣ ಸುದ್ದಿ ಮೊದಲು ಉದಯವಾಣಿ ಪ್ರಕಟವಾಗಿದ್ದರ ನೆನಪು
Team Udayavani, Dec 24, 2020, 4:09 PM IST
ಗಂಗಾವತಿ: ಭೂಸುಧಾರಣಾ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರುದ್ಧ ಕಳೆದ ಒಂದುವರೆ ತಿಂಗಳಿಂದ ರೈತರು ನಡೆಸುತ್ತಿರುವ ಹೋರಾಟ ಎರಡನೇ ಸ್ವಾತಂತ್ರ್ಯ ಚಳುವಳಿಯಾಗಿದೆ ಎಂದು ಜೆಡಿ ಎಸ್ ಪಕ್ಷದ ರಾಜ್ಯ ಮುಖಂಡ, ಪ್ರಗತಿಪರ ಚಿಂತಕ ವೈ.ಎಸ್.ವಿ.ದತ್ತ ಅಭಿಪ್ರಾಯಪಟ್ಟರು.
ಅವರು ಗಂಗಾವತಿಯಲ್ಲಿ ಉದಯವಾಣಿ ಜೊತೆ ಮಾತನಾಡಿ, ರಾಜ್ಯದ ಎಪಿಎಂಸಿ ಗಳನ್ನು ಖಾಸಗೀಕರಣ ಮಾಡುವ ಸುದ್ದಿ ಮೊದಲು ಉದಯವಾಣಿಯಲ್ಲಿ ಪ್ರಕಟವಾಗಿತ್ತು. ರೈತರು ಎಚ್ಚತ್ತುಕೊಳ್ಳದಿದ್ದರೆ ದೇಶದ ಕೃಷಿ ವ್ಯವಸ್ಥೆಗೆ ಭಾರಿಪೆಟ್ಟು ಬೀಳಲಿದ್ದು ಆಹಾರ ಸ್ವಾವಲಂಬನೆ ಆಹಾರ ಭದ್ರತೆ ಇಲ್ಲವಾಗುತ್ತದೆ. ಐಟಿಬಿಟಿಯವರು ಭೂಮಿ ಖರೀದಿಸಲು ಆಂಧ್ರ ಪ್ರದೇಶ, ತಮಿಳುನಾಡಿಗೆ ಹೋಗುವುದನ್ನು ತಪ್ಪಿಸಲು ಭೂಸುಧಾರಣಾ ಕಾಯ್ದೆಯ 79ಎ,ಬಿ,ಸಿ ಮತ್ತು 108ಕಾಯ್ದೆಗೆ ತಿದ್ದುಪಡಿಯನ್ನು ರಾಜ್ಯ ಸರಕಾರ ಮಾಡಿದ್ದು ಅವೈಜ್ಞಾನಿಕವಾಗಿದೆ ಎಂದರು.
ಇದನ್ನೂ ಓದಿ:ದತ್ತು ಶಾಲೆ ಪ್ರಗತಿ ಯೋಜನೆಗೆ ಸಿದ್ಧತೆ
ಇದರಿಂದ ಸಣ್ಣ ಹಿಡುವಳಿದಾರರು ಬೀದಿಗೆ ಬರುವುದು ಖಚಿತ. ಇರುವ ಭೂಮಿ ಎಲ್ಲಾ ಶ್ರೀಮಂತರು ಮತ್ತು ದೊಡ್ಡ ದೊಡ್ಡ ಕಾರ್ಪೋರೆಟ್ ಕಂಪನಿಗಳ ಪಾಲಾಗಲಿದ್ದು ರಾಜ್ಯ ಸರಕಾರ ಭೂಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಖಾಸಗೀಕರಣವನ್ನು ಮಾಡುವ ಕೇಂದ್ರ ಸರಕಾರ ನೀತಿ ವಿರೋಧಿಸಬೇಕು ಎಂದು ಹೇಳಿದರು.
ಬಿಜೆಪಿ ಜೊತೆ ಜೆಡಿಎಸ್ ವಿಲೀನ ಅಥವಾ ಬೆಂಬಲಕ್ಕೆ ಗೌಡ ಬೆಂಬಲವಿಲ್ಲ: ಬಿಜೆಪಿ ಸರಕಾರದ ಕೆಲ ನಿರ್ಧಾರಗಳನ್ನು ಮಾಜಿ ಸಿಎಂ ಕುಮಾರಸ್ವಾಮಿ ಬೆಂಬಲಿಸಿದ್ದು ಖಂಡನೀಯ. ದೇವೇಗೌಡರು ಬಿಜೆಪಿ ಪಕ್ಷವನ್ನು ಬೆಂಬಲಿಸುವ ಅಥವಾ ಪಕ್ಷವನ್ನು ಅದರಲ್ಲಿ ವಿಲೀನ ಮಾಡುವುದಕ್ಕೆ ವಿರೋಧಿಸಿದ್ದಾರೆ. ಗೌಡರ ನಿರ್ಧಾರ ಅವರ ಜೀವನ ಸೆಕ್ಯೂಲರ್ ಎನ್ನುವುದನ್ನು ಹೇಳುತ್ತದೆ. ಗೌಡರ ನಿಲುವು ತಮ್ಮನಿಲುವಾಗಿದೆ ಎಂದು ದತ್ತ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ
Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ
H.D. Revanna ಬಂಧಿಸಿದ ಎಸ್ ಐಟಿ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್
Prajwal R case: ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿಗೆ SIT ಮನವಿ: ಏನಿದು?
Pendrive; ಪ್ರಜ್ವಲ್ ದೌರ್ಜನ್ಯ ಮಾಡುವಾಗ ಅಪ್ಪ,ಅಮ್ಮ ಕತ್ತೆ ಕಾಯುತ್ತಿದ್ದರೆ..: ಶಿವರಾಮೇಗೌಡ
MUST WATCH
ಹೊಸ ಸೇರ್ಪಡೆ
IPL; ಗುಜರಾತ್ ವಿರುದ್ಧ ಭರ್ಜರಿ ಜಯ: ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತ
Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು
H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ
BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್
Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ