ಗಾಲಿ ಜನಾರ್ದನ ರೆಡ್ಡಿ ಜನ್ಮದಿನ: ಬೈಕ್ ರ್ಯಾಲಿ; ಎರಡು ತಾಸು ಟ್ರಾಫಿಕ್ ಜಾಮ್
ಹತ್ತಕ್ಕೂ ಹೆಚ್ಚು ಜೆಸಿಬಿಗಳ ಮೂಲಕ ಹೂವುಗಳ ಸುರಿಮಳೆ
Team Udayavani, Jan 11, 2023, 1:03 PM IST
ಗಂಗಾವತಿ: ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಸಂಸ್ಥಾಪಕ ಗಾಲಿ ಜನಾರ್ದನರೆಡ್ಡಿ ಜನ್ಮದಿನದ ನಿಮಿತ್ತ ನಗರದ ಹಿರೇಜಂತಗಲ್ ಪ್ರಸನ್ನ ಪಂಪಾವಿರೂಪಾಕ್ಷೇಶ್ವರ ದೇವಾಲಯದಿಂದ ತೆರೆದ ಜಿಪಿನಲ್ಲಿ ಗಾಲಿ ಜನಾರ್ದನರೆಡ್ಡಿ ಸಾವಿರಾರು ಅಭಿಮಾನಿಗಳ ಬೈಕ್ ರ್ಯಾಲಿ ಜರುಗಿತು.
ಇದರಿಂದಾಗಿ ಕೇಂದ್ರ ಬಸ್ ನಿಲ್ದಾಣ ಹಾಗೂ ನಗರದ ಗಾಂಧಿವೃತ್ತ,ಮಹಾವೀರವೃತ್ತ,ಶ್ರೀ ಚನ್ನಬಸವಸ್ವಾಮಿ ವೃತ್ತದಲ್ಲಿ ಜನಾರ್ದನರೆಡ್ಡಿ ಅಭಿಮಾನಿಗಳು ಸುಮಾರು ಹತ್ತಕ್ಕೂ ಹೆಚ್ಚು ಜೆಸಿಬಿಗಳ ಮೂಲಕ ಹೂವುಗಳನ್ನು ಚೆಲ್ಲಿದರು. ಇದರಿಂದ ಎರಡು ತಾಸಿಗೂ ಹೆಚ್ಚು ಟ್ರಾಫಿಕ್ ಜಾಮ್ ಆಗಿ ಕೆಎಸ್ ಆರ್ಟಿಸಿ ಹಾಗೂ ಖಾಸಗಿ ವಾಹನಗಳು ಮತ್ತು ಆಟೋಗಳಲ್ಲಿ ನಗರದ ವಿವಿಧೆಡೆ ಹಾಗೂ ಕೊಪ್ಪಳ, ರಾಯಚೂರು, ಹೊಸಪೇಟೆ ಮತ್ತು ಕಂಪ್ಲಿಗೆ ತೆರಳುವವರಿಗೆ ಬಹಳ ತೊಂದರೆ ಆಯಿತು.
ರ್ಯಾಲಿಯಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಬೈಕ್ ಗಳಲ್ಲಿ ಯುವಕರು ಮೆರವಣಿಗೆ ನಡೆಸಿದರು.ದಾರಿಯಿದ್ದಕ್ಕೂ ಹೂವಿನ ಮಳೆಗರಿಯುವ ಮೂಲಕ ಜನಾರ್ದನರೆಡ್ಡಿಯವನ್ನು ಮೆರವಣಿಗೆ ಯಲ್ಲಿ ಕನಕಗಿರಿ ರಸ್ತೆಯಲ್ಲಿರುವ ಅವರ ಮನೆ ಕರೆ ತಂದು 56 ಕೆಜಿ ತೂಕದ ಕೇಕ್ ಕತ್ತರಿಸಿದರು.