ಗಂಗಾವತಿ: ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಸೀಜ್ ಮಾಡಿ; ನೋಡೆಲ್ ಅಧಿಕಾರಿಗಳಿಗೆ DSP ಆದೇಶ
Team Udayavani, May 27, 2021, 12:48 PM IST
ಗಂಗಾವತಿ: ಅನಗತ್ಯ ಬೈಕ್ ಸವಾರರೇ ಕೊರೊನಾ ಹಬ್ಬಿಸುವ ಸಾಧ್ಯತೆ ಇದ್ದು ಪ್ರತಿ ವಾರ್ಡ್ ಗ್ರಾ.ಪಂ.ನೋಡೆಲ್ ಅಧಿಕಾರಿಗಳು ಬೈಕ್ ಹಾಗೂ ಇತರೆ ವಾಹನಗಳನ್ನು ಸೀಜ್ ಮಾಡುವಂತೆ ಡಿಎಸ್ ಪಿ ರುದ್ರೇಶ ಉಜ್ಜನಕೊಪ್ಪ ಆದೇಶ ನೀಡಿದ್ದಾರೆ.
ನಗರಸಭೆಯ ಕೊರೊನಾ ಮಾರ್ಗಸೂಚಿ ಪಾಲನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿ ಗ್ರಾ.ಪಂ ನಗರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ನೋಡೆಲ್ ಅಧಿಕಾರಿಗಳು, ಕೊರೊನಾ ಹರಡದಂತೆ ತಡೆಯಲು ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಬೇಕು. ಶಾಸಕರು,ನಗರಸಭೆ ಸದಸ್ಯರು, ಎಸ್ಪಿ, ಡಿಸಿ ಅವರು ನೋಡೆಲ್ ಅಧಿಕಾರಿಗಳ ಬೆಂಬಲಕ್ಕಿದ್ದು ಪ್ರತಿ ಓಣಿಗಳಲ್ಲಿ ಜನ ಹೆಚ್ಚು ಸೇರುವುದು ಮಕ್ಕಳು ಆಟವಾಡುವುದನ್ನು ತಡೆಯಬೇಕು. ಸೋಂಕಿತರಿಗೆ ಮನೆಯಲ್ಲಿ ಚಿಕಿತ್ಸೆಗೆ ಅವಕಾಶ ನೀಡದೇ ಕಾಳಜಿ ಕೇಂದ್ರಕ್ಕೆ ಕಳಿಸುವ ಕಾರ್ಯ ಮಾಡಬೇಕೆಂದರು.
ಇದನ್ನೂ ಓದಿ:ಚೋಕ್ಸಿಗೆ ಎಲ್ಲಾ ದಾರಿ ಬಂದ್…ಡೊಮಿನಿಕಾದಿಂದ ಚೋಕ್ಸಿ ಕರೆತರಲು ಭಾರತ ಸಿದ್ಧತೆ
ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ ಮಾತನಾಡಿ ವಾರ್ಡುಗಳಲ್ಲಿ ಸೋಂಕಿತರನ್ನು ಪತ್ತೆ ಮಾಡಿ ಅವರ ಮನವೊಲಿಸಿ ಕಾಳಜಿ ಕೇಂದ್ರಕ್ಕೆ ಕಲಿಸಬೇಕು. ವಾಹನ ಅನಗತ್ಯ ಸಂಚಾರ ನಿಲ್ಲಿಸಬೇಕು. ಕೊರೊನಾ ಸಂಬಂಧಿಸಿದಂತೆ ಇರುವ ಅಗತ್ಯ ಮಾಹಿತಿಯನ್ನು ಮೇಲಿನ ಅಧಿಕಾರಿಗಳಿಗೆ ರವಾನೆ ಮಾಡಬೇಕೆಂದರು.
ತಹಸೀಲ್ದಾರ್ ಯು.ನಾಗರಾಜ ಸೇರಿ ನಗರಸಭೆ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಜಾಬ್ ವಿಷಯದಲ್ಲಿ ಕೋರ್ಟ್ ತೀರ್ಪು ಪಾಲಿಸಲಿ: ಬಿ.ಸಿ. ನಾಗೇಶ್
ಜಾತ್ರೆಗೆ ಹೊರಟ ವಾಹನ ಅಪಘಾತ: 18 ಮಂದಿ ಭಕ್ತಾಧಿಗಳಿಗೆ ಗಾಯ
ಪಂಪಾ ಸರೋವರ: ಜಯಲಕ್ಷ್ಮಿ ಮೂರ್ತಿ ಮತ್ತು ಶ್ರೀ ಚಕ್ರ ಸ್ಥಳಾಂತರಕ್ಕೆ ಸಂಜೀವ ಮರಡಿ ವಿರೋಧ
ಗರ್ಭಗುಡಿಯ ಮೂರ್ತಿ ಶ್ರೀಚಕ್ರ ಸ್ಥಳಾಂತರ: ಸ್ಥಳಕ್ಕೆ ಭೇಟಿ ನೀಡದ ಸಚಿವ ಆನಂದ್ ಸಿಂಗ್; ಆಕ್ರೋಶ
ಕುಷ್ಟಗಿ: ಬೈಕ್ ಗಳ ಮುಖಾಮುಖಿ ; ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ