Gangavati: ಗಣೇಶ ವಿಸರ್ಜನೆಗೆ ಅಕ್ರಮವಾಗಿ ಡಿಜೆ ಬಳಕೆ… ಪೋಲಿಸರಿಂದ ಸೀಜ್
Team Udayavani, Sep 22, 2023, 9:43 AM IST
ಗಂಗಾವತಿ: ಗಣೇಶನ ವಿಸರ್ಜನೆಗೆ ಪೊಲೀಸರ ಅನುಮತಿ ಇಲ್ಲದೇ ಡಿಜೆ ಬಳಕೆ ಮಾಡಿದ್ದಕ್ಕೆ ನಗರಠಾಣೆಯ ಪೊಲೀಸರು ಎರಡು ಟ್ರಾಕ್ಟರ್ ಸಮೇತ ಡಿಜೆಗಳನ್ನು ವಶಕ್ಕೆ ಪಡೆದುಕೊಂಡ ಪ್ರಕರಣ ನಗರಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ನೀಲಕಂಠೇಶ್ವರ ಕ್ಯಾಂಪ್ ಕೊರವರ ಓಣಿ ಕೊರವರ ಸಮಾಜದ ಗಣೇಶ ಮತ್ತು ಸರೋಜಮ್ಮ ಕಲ್ಯಾಣ ಮಂಟಪ ಬಳಿ ಆರ್ಯ ಈಡಿಗರ ಸಂಘದ ಗಣೇಶನ ವಿಸರ್ಜನೆ ಗುರುವಾರ ರಾತ್ರಿ ಜರುಗಿದ್ದು ಈ ಸಂದರ್ಭದಲ್ಲಿ ಡಿಜೆ ಬಳಕೆ ನಿಷೇಧವಿದ್ದರೂ ಡಿಜೆ ಬಳಕೆ ಮಾಡಿ ಹೆಚ್ಚಿನ ಧ್ವನಿವರ್ಧಕದಿಂದ ರಾತ್ರಿ ವೇಳೆ ಸಾರ್ವಜನಿಕರಿಗೆ ಹೆಚ್ಚಿನ ಸೌಂಡ್ ನಿಂದ ತೊಂದರೆ ಪರಿಣಾಮವಾಗಿ ಎರಡು ಡಿಜೆಗಳನ್ನು ಟ್ರಾಕ್ಟರ್ ಸಮೇತ ಸೀಜ್ ಮಾಡಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಕೇಸ್ ದಾಖಲಿಸಲಾಗಿದೆ. ಡಿಜೆ ಸಾಗಿಸಲು ಬಳಸಿದ ಟ್ರಾಕ್ಟರ್ ಗಳಿಗೆ ನಂಬರ್ ಪ್ಲೇಟ್ ಅಳವಡಿಸದೇ ಇರುವುದರಿಂದ ಪೊಲೀಸರು ಪ್ರತ್ಯೇಕ ಕೇಸ್ ದಾಖಲಿಸಿದ್ದಾರೆ.
ಪೂರ್ವಭಾವಿ ಸಭೆಯಲ್ಲಿ ಡಿಜೆ ಬಳಕೆ ಹಾಗೂ ನಿಯಮಗಳನ್ನು ಗಣೇಶನ ಪ್ರತಿಷ್ಠಾಪಿಸುವವರಿಗೆ ಮನವರಿಕೆ ಮಾಡಿದರೂ ನಿಯಮ ಉಲ್ಲಂಘಿಸಿ ಪುನಹ ಕೊರವರ ಸಮಾಜ ಹಾಗೂ ಆರ್ಯ ಈಡಿಗರ ಸಮಾಜದವರು ಗಣೇಶನ ವಿಸರ್ಜನೆ ಸಂದರ್ಭದಲ್ಲಿ ಡಿಜೆ ಬಳಸಿದ್ದರಿಂದ ಸೀಜ್ ಮಾಡಿ ಕೇಸ್ ದಾಖಲಿಸಲಾಗಿದೆ ಎಂದು ಪಿಐ ಅಡಿವೇಶ ಉದಯವಾಣಿ ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Clash: ಹಳೆ ದ್ವೇಷ: ಎರಡು ಗುಂಪುಗಳ ಮಧ್ಯೆ ಗಲಾಟೆ… ಐದು ಮಂದಿಗೆ ಚಾಕು ಇರಿತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ