Gangavati: ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ; ಮಂಗಳಮುಖಿಯರಿಗೆ ಬಟ್ಟೆ ವಿತರಣೆ
ಅಂಧ ಮಕ್ಕಳಿಗೆ ಉಚಿತ ಕ್ಷೌರ
Team Udayavani, Sep 6, 2023, 8:33 PM IST
ಗಂಗಾವತಿ: ಶ್ರೀ ಕೃಷ್ಣಾಷ್ಠಮಿ ಹಾಗೂ ಶ್ರೀ ಶಿರಡಿ ಸಾಯಿ ಹೇರ್ ಡ್ರೆಸಸ್ನ 26ನೇ ವಾರ್ಷಿಕೋತ್ಸವ ನಿಮಿತ್ತ ಮಂಗಳಮುಖಿಯರಿಗೆ ಬಟ್ಟೆ ವಿತರಣೆ ಹಾಗೂ ಅಂಧ ಮಕ್ಕಳಿಗೆ ಉಚಿತ ಕ್ಷೌರ ಮಾಡುವುದರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಸವಿತಾ ಸಮಾಜದ ಬಳ್ಳಾರಿ ಅಧ್ಯಕ್ಷ ತಿಪ್ಪಣ್ಣ, ಜಿಲ್ಲಾಧ್ಯಕ್ಷ ಈ.ಮಾರೇಶ ಮಾತನಾಡಿ, ಮಂಗಳಮುಖಿಯರು ಸಮಾಜದಲ್ಲಿ ಅತ್ಯಂತ ಕೀಳಿರಿಮೆಯಲ್ಲಿ ಬಾಳುತ್ತಿದ್ದು ಸಮುದಾಯ ಅವರಿಗೆ ಗೌರವ ಕೊಡಬೇಕು. ರಾಜ್ಯ ಕೇಂದ್ರ ಸರಕಾರಗಳು ಅವರಿಗೆ ಪ್ರತಿ ಕ್ಷೇತ್ರದಲ್ಲೂ ಮೀಸಲಾತಿ ಕಲ್ಪಿಸಿದ್ದು ವಿದ್ಯಾಭ್ಯಾಸದ ಮೂಲಕ ಮುಖ್ಯವಾಹಿನಿಗೆ ಬರಬೇಕು. ಶಿರಡಿ ಸಾಯಿ ಹೇರ್ ಡ್ರೆಸಸ್ನ ವಾರ್ಷಿಕೋತ್ಸವದ ನೆಪದಲ್ಲಿ ಸಾಮಾಜಿಕ ಕಾರ್ಯ ಮಾಡಿದ್ದು ಶ್ಲಾಘನೀಯ ಎಂದರು.
ವಾರ್ಷಿಕೋತ್ಸವದ ನಿಮಿತ್ತ ಅಂಧ ಮಕ್ಕಳಿಗೆ ಉಚಿತ ಕ್ಷೌರ ಮಾಡುವುದರ ಜೊತೆಗೆ ಕರ್ಚೀಫ್, ಪೆನ್ನು, ಪುಸ್ತಕ, ಹಣ್ಣ-ಹಂಪಲುಗಳನ್ನು ವಿತರಿಸಿ, ನಿರ್ಗತಿಕರಿಗೆ, ವೃದ್ಧರಿಗೆ, ಬಡವರಿಗೆ ಬಟ್ಟೆ ವಿತರಣೆ, ಅನ್ನಸಂತರ್ಪಣೆ ಮಾಡುವ ಮೂಲಕ ಊರಿನಲ್ಲಿರುವ ಗೋವುಗಳಿಗೆ ಪೂಜೆ ಮಾಡಿ, ಗೋವುಗಳಿಗೆ ಬೆಲ್ಲ ಚಪಾತಿ ನೈವೇದ್ಯ ನೀಡಲಾಯಿತು. ಮಂಗಳಮುಖಿಯರಿಗೆ ಅನ್ನಸಂತರ್ಪಣೆ ಹಾಗೂ ಬಟ್ಟೆ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸವಿತಾ ಸಮಾಜದ ಈ ಮಾರೇಶ, ಮಾಲೀಕ ಪಿ. ಸಂತೋಷ, ತಾಲೂಕು ಅಧ್ಯಕ್ಷ ಗೋಪಾಲ ಸೇರಿ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ