ಆರ್ ಎಸ್ಎಸ್ ಬಗ್ಗೆ ಮಾತಾಡದಿದ್ದರೆ ಕಾಂಗ್ರೆಸ್ ಗೆ ನಿದ್ದೆ ಬರಲ್ಲ: ಹಾಲಪ್ಪ ಆಚಾರ್
Team Udayavani, May 19, 2022, 1:20 PM IST
ಕೊಪ್ಪಳ: ಆರ್ ಎಸ್ಎಸ್ ಬಗ್ಗೆ ಮಾತನಾಡದೆ ಹೋದರೆ ಕಾಂಗ್ರೆಸ್ ಗೆ ನಿದ್ದೆಯೇ ಬರುವುದಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್ ಮಾತೆತ್ತಿದರೆ ಸಂಘ ಪರಿವಾರದ ಬಗ್ಗೆ ಮಾತಾಡುತ್ತದೆ. ಹೆಡಗೇವಾರ್ ರ ಪಠ್ಯ ಪುಸ್ತಕದಲ್ಲಿ ಸೇರಿಸುವ ವಿಚಾರ, ಅದರಲ್ಲಿ ತಪ್ಪೇನಿದೆ. ಸೇರಿಸಿದರೆ ಏನು ತಪ್ಪು? ಅವರು ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಒಂದು ಪಂಗಡಕ್ಕೆ ಕೆಲಸ ಮಾಡಿಲ್ಲ. ಹಿರಿಯರ ವಿಚಾರ ಪಠ್ಯದಲ್ಲಿ ಸೇರಸಿದರೆ ಏನು ಕಷ್ಟ ಎಂದರು.
ಭಗತ್ ಸಿಂಗ್ ಅವರನ್ನು ಪಠ್ಯದಿಂದ ಕೈ ಬಿಟ್ಟಿಲ್ಲ. ಕಾಂಗ್ರೆಸ್ ನವರಿಗೆ ಆರ್ ಎಸ್ಎಸ್ ಹೆಸರು ತೆಗೆಯದೆ ಹೋದರೆ ನಿದ್ದೆ ಬರಲ್ಲ, ಅದಕ್ಕೆ ನಾವೇನು ಮಾಡೋಕಾಗಲ್ಲ ಎಂದರು.
ಇದನ್ನೂ ಓದಿ:ನಾನು ರಾಜ್ಯ ರಾಜಕಾರಣಕ್ಕೆ ಮರಳುತ್ತಿಲ್ಲ: ಶೋಭಾ ಕರಂದ್ಲಾಜೆ ಸ್ಪಷ್ಟನೆ
ಜ್ಞಾನವ್ಯಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ವಿಚಾರ, ಇದೀಗ ಕೋರ್ಟ್ ಆದೇಶದ ಪ್ರಕಾರ ಸರ್ವೆ ಕೆಲಸ ನಡಿತೀದೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಮಳೆಯಾಗಿದೆ. ಯಾವುದೇ ಜೀವಹಾನಿ ಆಗಿಲ್ಲ. ಕೆಲವು ಗ್ರಾಮದಲ್ಲಿ ನೀರು ನುಗ್ಗಿ ಹಾನಿಯಾಗಿದೆ. ಈಗಾಗಲೇ ಅಧಿಕಾರಿಗಳು ಸ್ಥಳಕ್ಕೆ ಹೋಗಿದ್ದಾರೆ. ಹಾನಿಯ ವರದಿ ಕೊಡಲು ಸೂಚಿಸಿದ್ದೇನೆ. ಏಕಾಏಕಿ ಇಷ್ಟೊಂದು ಪ್ರಮಾಣದ ಮಳೆ ಬರುತ್ತದೆ ಎಂದು ಗೊತ್ತಿರಲಿಲ್ಲ. ನಾನು ಈಗಾಗಲೇ ಹಲವಾರು ಪ್ರದೇಶಕ್ಕೆ ಭೇಟಿ ಕೊಟ್ಟಿದ್ದೇನೆ. ಜಿಲ್ಲಾಡಳಿತ ಹಾಗೂ ತಾಲೂಕ ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೋದಿಗೆ ಹೆದರಿ,ಸೋನಿಯಾ,ಖರ್ಗೆ ಸೇರಿ ಹಲವು ಸಚಿವರು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ: ಸೂಲಿಬೆಲೆ
BJP ಹೈಕಮಾಂಡ್ ವಿರುದ್ದ ಕೆರಳಿದ ಸಂಸದ ಸಂಗಣ್ಣ ಕರಡಿ
Koppal: ತುಂಗಭದ್ರಾ ಕಾಡಾ ಅಧ್ಯಕ್ಷರಾಗಿ ಹಸನ್ಸಾಬ್ ದೋಟಿಹಾಳ ನೇಮಕ
Koppala; ಈಶ್ವರಪ್ಪಗೆ ಲೋಕಸಭಾ ಟಿಕೆಟ್ ನೀಡಲು ಕುರುಬ ಸಮಾಜದ ಒತ್ತಾಯ
ಆನೆಗೊಂದಿ ಉತ್ಸವ:ಉಳಿದ ಆಹಾರ ಪದಾರ್ಥ ತಿಂದು 30 ಕುರಿ-ಮೇಕೆ ಸಾವು; 180ಕ್ಕೂ ಹೆಚ್ಚು ಅಸ್ವಸ್ಥ
MUST WATCH
ಹೊಸ ಸೇರ್ಪಡೆ
Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್ ಸೇದಿದ ಆಟಗಾರನ ವಿಡಿಯೋ ವೈರಲ್
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು