ಗಂಗಾವತಿಯಲ್ಲಿ ಜನಾರ್ಧನ ರೆಡ್ಡಿ ಟೆಂಪಲ್ ರನ್
Team Udayavani, Dec 6, 2022, 1:23 PM IST
ಗಂಗಾವತಿ: ಗಂಗಾವತಿಯಲ್ಲಿ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಮನೆ ಮಾಡಿರುವ ಬಳ್ಳಾರಿ ಗಣಿಧಣಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಮಂಗಳವಾರವೂ ನಗರದ ಪುರಾತನ ದೇಗುಲಗಳು ಹಾಗೂ ವಿವಿಧ ಪಕ್ಷಗಳ ಮನೆಗಳಿಗೆ ಭೇಟಿ ನೀಡಿ ಗೌಪ್ಯವಾಗಿ ಮಾತುಕತೆ ನಡೆಸಿ ಕುತೂಹಲಕ್ಕೆ ಕಾರಣರಾಗಿದ್ದಾರೆ.
ತಾಲೂಕಿನ ಪಂಪಾ ಸರೋವರದಲ್ಲಿ ಸೋಮವಾರ ರಾತ್ರಿ ತಂಗಿದ್ದ ಜನಾರ್ಧನ ರೆಡ್ಡಿ ಮಂಗಳವಾರ ಗಂಗಾವತಿ ಹೊರ ವಲಯದಲ್ಲಿರುವ ಸಾಯಿ ಮಂದಿರ, ಹಿರೇಜಂತಗಲ್ ಪ್ರಸನ್ನ, ಪಂಪಾ ವಿರೂಪಾಕ್ಷೇಶ್ವರ ದೇಗುಲ ಮತ್ತು ಪಂಪಾ ನಗರದಲ್ಲಿರುವ ಪುರಾತನ ಪಂಪಾಪತಿ ಗುಡಿಗೆ ತೆರಳಿ ದೇವರ ದರ್ಶನ ಪಡೆದು ಗಂಗಾವತಿಯಲ್ಲಿ ಜನರ ಸೇವೆ ಮಾಡುವ ಸಂಕಲ್ಪ ಮಾಡಿದರು.
ನಂತರ ವಾಲ್ಮೀಕಿ ಸಮಾಜದ ಹಾಗೂ ಬಿಜೆಪಿ ಮುಖಂಡ ಹೊಸಮಲಿ ಮಲ್ಲೇಶಪ್ಪ, ಆರ್ಯವೈಶ್ಯ ಸಮಾಜದ ಮಹಿಳಾ ಮುಖಂಡರಾದ ಸುಚೇತಾ ಶಿರಿಗೇರಿ ಮತ್ತು ಲಾಳಗೊಂಡ ಸಮಾಜದ ಹಿರಿಯ ಮುಖಂಡರಾದ ಹೊಸಳ್ಳಿ ಶಂಕ್ರಗೌಡ ಸೇರಿ ಇತರೆ ಸಮಾಜದ ಮುಖಂಡರ ಮನೆಗೆ ತೆರಳಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆನ್ನಲಾಗಿದೆ.
ಈ ಸಂದರ್ಭದಲ್ಲಿ ಪತ್ರಕರ್ತರು ಮಾತನಾಡಲು ಯತ್ನಿಸಿದಾಗ ಡಿ.18 ರ ವರೆಗೆ ರಾಜಕೀಯ ಸುದ್ದಿ ಏನನ್ನೂ ಮಾತನಾಡುವುದಿಲ್ಲ. ರಾಜಕೀಯ ಮತ್ತು ಜನರ ಸಾಮಾಜಿಕ ಸೇವೆ ಮಾಡಲು ಮನೆ ಮಾಡಿದ್ದು, ಮುಂದೆ ಗಂಗಾವತಿ ಜನರೊಂದಿಗೆ ಸದಾ ಸ್ಪಂದಿಸಲಿದ್ದು, ಕೆಲ ಹಿತೈಷಿಗಳು ಡಿ.18 ರ ವರೆಗೆ ಯಾವುದೇ ರಾಜಕೀಯ ಹೇಳಿಕೆ ನೀಡದಂತೆ ತಿಳಿಸಿದ್ದರಿಂದ ಸುಮ್ಮನಿದ್ದೇನೆ. ಕಲ್ಯಾಣ ಕರ್ನಾಟಕದ ಜನರು ತೋರಿಸುವ ಪ್ರೀತಿ-ಗೌರವಗಳಿಗೆ ಅಭಿನಂದನೆಗಳು ಎಂದರು.
ಬಿಜೆಪಿ ಮುಖಂಡರಾದ ಸಿಂಗನಾಳ ವಿರೂಪಾಕ್ಷಪ್ಪ, ತಿಪ್ಪೇರುದ್ರಸ್ವಾಮಿ, ಕಾಂಗ್ರೆಸ್ ಮುಖಂಡ ವಡ್ರಟ್ಟಿ ವೀರಭದ್ರಪ್ಪ ನಾಯಕ ಸೇರಿ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raids: ಕೊಪ್ಪಳ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪಾ ಮನೆ ಮೇಲೆ ಲೋಕಾಯುಕ್ತ ದಾಳಿ
Koppala; ಶಿವರಾಜ ತಂಗಡಗಿ ಹೇಳಿಕೆಯನ್ನು ಬಿಜೆಪಿ ತಿರುಚಿದೆ: ಕೃಷ್ಣಾ ಇಟ್ಟಂಗಿ
Koppal Lok Sabha constituency; ಲಿಂಗಾಯತ, ಅಹಿಂದ ಮತಗಳೇ ಇಲ್ಲಿ ನಿರ್ಣಾಯಕ
Koppala: ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡಿಯಿರಿ ಎಂದ ಸಚಿವ ತಂಗಡಗಿ ವಿರುದ್ಧ ಪ್ರಕರಣ ದಾಖಲು
“Modi ಜಪಿಸುವ ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಿರಿ’: ಶಿವರಾಜ ತಂಗಡಗಿ
MUST WATCH
ಹೊಸ ಸೇರ್ಪಡೆ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ
Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ