ಗಂಗಾವತಿ: ವೀರರಾಣಿ ಕಿತ್ತೂರು ಚನ್ನಮ್ಮ ಜಯಂತ್ಯುತ್ಸವ; ಪಂಚಮಸಾಲಿ ಶ್ರೀಗಳ ಮೆರವಣಿಗೆ
Team Udayavani, Nov 6, 2022, 4:06 PM IST
ಗಂಗಾವತಿ: ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ ನಿಮಿತ್ತ ನಗರದ ವೀರರಾಣಿ ಚನ್ನಮ್ಮ ವೃತ್ತದಿಂದ ಪಂಚಮಸಾಲಿ ಶ್ರೀಗಳ ಮೆರವಣಿಗೆ ಜರುಗಿತು.
ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿ, ಪಂಚಮಸಾಲಿ ಸಮಾಜವು ಅತ್ಯಂತ ಹಿಂದುಳಿದ ಸಮಾಜವಾಗಿದೆ. ಇವರಿಗೆ ಪ್ರವರ್ಗ 2ಎ ಮೀಸಲಾತಿ ಸಿಗಬೇಕಾಗಿದೆ. ಸರ್ಕಾರ ಮೀಸಲಾತಿ ಕಲ್ಪಿಸುವ ಕುರಿತು ಚಿಂತನೆ ನಡೆಸಿದ್ದು, ಶೀಘ್ರವೇ ಸಿಗಲಿದೆ. ನಾನು ಸಹ ಮುಖ್ಯಮಂತ್ರಿಗಳ ಮನವೊಲಿಸುತ್ತೇನೆ. ವೀರರಾಣಿ ಕಿತ್ತೂರು ಚನ್ನಮ್ಮ ವಿದೇಶದ ಪ್ರತಿಷ್ಠೆಯ ಸ್ವಾಭಿಮಾನದ ಸಂಕೇತವಾಗಿದ್ದಾರೆ. ಇಂಗ್ಲಿಷರನ್ನು ಹೊಡೆದೋಡಿಸಲು ಪ್ರಪ್ರಥಮ ಬಾರಿಗೆ ಅವರ ವಿರುದ್ಧ ಯುದ್ಧ ಸಾರಿದ ವೀರನಾರಿ ಆಗಿದ್ದಾರೆ ಎಂದರು .
ಈ ಸಂದರ್ಭದಲ್ಲಿ ಕೂಡಲಸಂಗಮದ ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮಿಗಳು, ಶಾಸಕ ಪರಣ್ಣ ಮುನವಳ್ಳಿ, ಮುಖಂಡರಾದ ಸಂತೋಷ್ ಕೆಲೋಜಿ, ಕಳನಕಗೌಡ, ಶ್ರವಣಕುಮಾರ್ ರಾಯ್ಕರ್,ಜಿ.ಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಪಂಚಮಸಾಲಿ ಸಮಾಜದ ಶಿವಪ್ಪ ಯಲಬುರ್ಗಾ,ಆರ್ ದೆವಾನಂದ್, ವಿರೇಶ ಅಂಗಡಿ, ವಿರುಪಾಕ್ಷಿ ದಾಸನಾಳ, ರೈತಮೋರ್ಚ ಅಧ್ಯಕ್ಷ ಚೆನ್ನವೀರನ ಗೌಡ ಕೋರಿ ಹಾಗೂ ಪಂಚಮಶಾಲಿ ಸಮಾಜದ ಮುಖಂಡರು ಹಿರಿಯರು ಗಣ್ಯರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!