ಕೊಪ್ಪಳ: ಕೈ ಭದ್ರಕೋಟೆಯಾಗಿತ್ತು ಭತ್ತದ ‌ನಾಡು ಗಂಗಾವತಿ

ಪ್ರಸ್ತುತ ಕಾಂಗ್ರೆಸ್‌ ನಲ್ಲಿದ್ದು ಟಿಕೆಟ್‌ಗೆ ಪೈಪೋಟಿ ನಡೆಸುತ್ತಿದ್ದಾರೆ.

Team Udayavani, Apr 1, 2023, 4:56 PM IST

ಕೊಪ್ಪಳ: ಕೈ ಭದ್ರಕೋಟೆಯಾಗಿತ್ತು ಭತ್ತದ ‌ನಾಡು ಗಂಗಾವತಿ

ಕೊಪ್ಪಳ: ಭತ್ತದ ಕಣಜ ಎಂದೆನಿಸಿದ ಗಂಗಾವತಿ ವಿಧಾನ ಸಭಾ ಕ್ಷೇತ್ರದ ರಾಜಕೀಯ ಇತಿಹಾಸವು ಇಡೀ ರಾಜ್ಯದ ಗಮನ ಸೆಳೆದಿತ್ತು. ಒಂದು ಕಾಲಘಟ್ಟದಲ್ಲಿ ಕಾಂಗ್ರೆಸ್‌ ಭದ್ರಕೋಟೆ ಎಂದೆನಿಸಿದ್ದ ಈ ಕ್ಷೇತ್ರದಲ್ಲಿ ತಿರುಮಲ ದೇವರಾಯಲು, ಎಚ್‌.ಜಿ. ರಾಮುಲು, ಶ್ರೀರಂಗದೇವರಾಲು ಅವರು ರಾಜ್ಯದ ಅಗ್ರಗಣ್ಯ ನಾಯಕರಾಗಿ ಬೀಗಿದ್ದರು. ಕ್ರಮೇಣ ದಳದತ್ತ ಬಾಗಿದ್ದ ಈ ಕ್ಷೇತ್ರವು ಪ್ರಸ್ತುತ ಕಮಲಕ್ಕೆ ನೆಲೆ ನೀಡಿದೆ.

ಹೌದು. ಜಿಲ್ಲೆಯ ಇನ್ನುಳಿದ ಕ್ಷೇತ್ರಗಳಿಗೆ ಹೋಲಿಕೆ ಮಾಡಿದರೆ ಗಂಗಾವತಿ ವಿಧಾನಸಭಾ ಕ್ಷೇತ್ರದ ರಾಜಕೀಯ ಚರ್ಚೆಗಳೇ ಅತ್ಯಂತ ಬಿರುಸಿನಿಂದ ಕೂಡಿರುತ್ತವೆ. ಬಹುಪಾಲು ಈ ಭಾಗದಲ್ಲಿನ ನಾಯಕರುಗಳೇ ಹೆಚ್ಚಾಗಿ ಮಂತ್ರಿಗಿರಿ ದರ್ಬಾರ್‌ ನಡೆಸಿ ರಾಜ್ಯದ ಗಮನ ಸೆಳೆದಿದ್ದಾರೆ. 1957 ರಿಂದ 2018ರ ವರೆಗಿನ 15 ಚುನಾವಣೆಗಳಲ್ಲಿ ಈ ಕ್ಷೇತ್ರದ ವಿಧಾನಸಭಾ ಚುನಾವಣಾ ಲೆಕ್ಕಾಚಾರಗಳನ್ನು ಅವಲೋಕಿಸಿದಾಗ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬರೋಬ್ಬರಿ 09 ಬಾರಿ ಗೆದ್ದು ಬೀಗಿದ್ದರೆ, ಜೆಡಿಎಸ್‌ 02 ಬಾರಿ, ಬಿಜೆಪಿ 02 ಬಾರಿ ಜೆಎನ್‌ಪಿ 01, ಪಕ್ಷೇತರರು 01 ಬಾರಿ ಗೆದ್ದಿರುವಂತಹ ಇತಿಹಾಸವಿದೆ.

ದೇಶಕ್ಕೆ ಸ್ವಾತಂತ್ರ್ಯ ದೊರೆತ ಕಾಲಘಟ್ಟದಲ್ಲಿ ಕಾಂಗ್ರೆಸ್‌ ಪ್ರಭಾವವೇ ಹೆಚ್ಚಿದ್ದ ವೇಳೆ ಗಂಗಾವತಿ ಕ್ಷೇತ್ರದಲ್ಲಿ 1957ರಲ್ಲಿ ದೇಸಾಯಿ ಭೀಮಸೇನ ರಾವ್‌ ಅವರು ಕಾಂಗ್ರೆಸ್‌ನಿಂದ ಸ್ಪ ರ್ಧಿಸಿ 12,862 ಮತಗಳನ್ನು ಪಡೆದು ಮೊದಲ ಬಾರಿಗೆ ಶಾಸಕರಾಗಿ ಗೆದ್ದು ಬೀಗಿದ್ದರು. 1962 ಹಾಗೂ 1967ರಲ್ಲಿ ಕಾಂಗ್ರೆಸ್‌ನಿಂದ ತಿರುಮಲ ದೇವರಾಯಲು ಗೆಲುವು ಕಂಡಿದ್ದರು.

1972ರಲ್ಲಿ ಎಚ್‌.ಆರ್‌.ರಾಮುಲು ಕಾಂಗ್ರೆಸ್‌ನಿಂದ ಗೆಲುವು ಕಂಡರೆ, 1974ರಲ್ಲಿ ಎಚ್‌.ಆರ್‌.ರಾಮುಲು ನಿಧನರಾದ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಿತು. ಉಪ ಚುನಾವಣೆಯಲ್ಲಿ ಅವರ ಪುತ್ರ ಹೆಚ್‌.ಜಿ.ರಾಮುಲು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಗೆದ್ದರು. 1978ರಲ್ಲಿ ಯಾದವರಾವ್‌ ಶೇಷರಾವ್‌ ಅವರು ಕಾಂಗ್ರೆಸ್‌ನಿಂದ ಗೆದ್ದರೆ, 1983ರಲ್ಲಿ ಕಾಂಗ್ರೆಸ್‌ ಭದ್ರಕೋಟೆ ಎನಿಸಿದ್ದ ಗಂಗಾವತಿ ಕ್ಷೇತ್ರ ಸೋಲು ಕಂಡಿತ್ತು.

ಆಗ ಎಚ್‌.ಎಸ್‌. ಮುರಳೀಧರ ಅವರು ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಕಂಡು ಕ್ಷೇತ್ರದಲ್ಲಿ ಮೊದಲ ಪಕ್ಷೇತರ ಶಾಸಕ ಎಂದೆನಿಸಿದರು. 1985ರಲ್ಲಿ ಜೆಎನ್‌ಪಿಯಿಂದ ಗೌಳಿ ಮಹಾದೇವಪ್ಪ ಗೆದ್ದಿದ್ದರು. 1989, 1994 ಹಾಗೂ 1999ರಲ್ಲಿ ಶ್ರೀರಂಗದೇವರಾಲು ಕಾಂಗ್ರೆಸ್‌ನಿಂದ ಸತತ ಗೆಲುವು ಸಾ ಧಿಸಿದ್ದಾರೆ. 2004ರಲ್ಲಿ ಜೆಡಿಎಸ್‌ ಖಾತೆ ತೆರೆದ ಇಕ್ಬಾಲ್‌ ಅನ್ಸಾರಿ ಅವರು ಗೆಲುವು ಕಂಡರೆ, 2008ರಲ್ಲಿ ಕಮಲದಿಂದ ಪರಣ್ಣ ಮುನವಳ್ಳಿ ಗೆದ್ದು ಬಿಜೆಪಿ ಖಾತೆ ತೆರೆದರು. ಮತ್ತೆ 2013ರಲ್ಲಿ ಇಕ್ಬಾಲ್‌ ಅನ್ಸಾರಿ ಗೆದ್ದರೆ, 2018ರಲ್ಲಿ ಮತ್ತೆ ಪರಣ್ಣ ಮುನವಳ್ಳಿ ಕಮಲ ಅರಳಿಸಿದ್ದಾರೆ.

ಪರಣ್ಣ 03, ಅನ್ಸಾರಿ 4 ಚುನಾವಣೆ: ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಅವರು 2004 ರಿಂದ ನಾಲ್ಕು ಚುನಾವಣೆಗಳನ್ನು ಎದುರಿಸಿದ್ದು, ಇವುಗಳಲ್ಲಿ ಎರಡು ಬಾರಿ ಜೆಡಿಎಸ್‌ನಿಂದ ಗೆಲುವು ಸಾ ಧಿಸಿದ್ದರೆ, ಒಂದು ಬಾರಿ ಜೆಡಿಎಸ್‌, ಮತ್ತೂಮ್ಮೆ ಕಾಂಗ್ರೆಸ್‌ನಿಂದ ಸೋಲು ಕಂಡಿದ್ದಾರೆ. ಇನ್ನು ಪರಣ್ಣ ಮುನವಳ್ಳಿ ಅವರು 2008 ರಿಂದ ಮೂರು ಚುನಾವಣೆಗಳನ್ನು ಎದುರಿಸಿ 02 ಬಾರಿ ಕಮಲದಿಂದ ಗೆಲುವು ಕಂಡು, 2013ರಲ್ಲಿ ಒಂದು ಬಾರಿ ಸೋಲು ಕಂಡಿದ್ದಾರೆ. ದಳದಲ್ಲೇ
ಅನ್ಸಾರಿ ತೇಲುತ್ತಾ ನಗೆ ಬೀರಿದ್ದರು. ಪ್ರಸ್ತುತ ಕಾಂಗ್ರೆಸ್‌ ನಲ್ಲಿದ್ದು ಟಿಕೆಟ್‌ಗೆ ಪೈಪೋಟಿ ನಡೆಸುತ್ತಿದ್ದಾರೆ. ಪರಣ್ಣ ಮುನವಳ್ಳಿ ಮತ್ತೆ ಕಮಲ ಅರಳಿಸುವ ಸಿದ್ಧತೆಯಲ್ಲಿದ್ದಾರೆ.

ಶ್ರೀರಂಗದೇವರಾಯಲು ಹ್ಯಾಟ್ರಿಕ್‌ ಸಾಧನೆ
ಆನೆಗೊಂದಿ ಮನೆತನದ ರಾಜವಂಶಸ್ಥ ಶ್ರೀ ರಂಗದೇವರಾಯಲು ಅವರು ಗಂಗಾವತಿ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿರುವ ಏಕೈಕ ಶಾಸಕ ಎಂದೆನಿಸಿದ್ದಾರೆ. 15 ವಿಧಾನಸಭಾ ಚುನಾವಣೆ ಕಂಡಿರುವ ಗಂಗಾವತಿ ಕ್ಷೇತ್ರದಲ್ಲಿ ಇವರನ್ನು ಹೊರತು ಪಡಿಸಿ ಇನ್ನುಳಿದ ಯಾರೂ ಮೂರು ಬಾರಿ ಸತತ ಶಾಸಕರಾಗಿ ಗೆಲುವು ಕಂಡಿಲ್ಲ. ಕಾಂಗ್ರೆಸ್‌ ಪಕ್ಷ ಸತತ ಗೆಲುವು ಕಂಡಿದೆ. ಆದರೆ ಅಭ್ಯರ್ಥಿಗಳು ಬೇರೆ ಬೇರೆ ಇದ್ದಾರೆ. ಒಂದೇ ಅಭ್ಯರ್ಥಿಯಾಗಿದ್ದು ಮೂರು ಬಾರಿ ಗೆಲುವು ಕಂಡ ಏಕೈಕ ಶಾಸಕ ಎಂದೆನಿಸಿದ್ದಾರೆ. ಇದಲ್ಲದೇ ಕನಕಗಿರಿ ಕ್ಷೇತ್ರದಲ್ಲೂ ಇವರು ಕೆಲವು ಬಾರಿ ಗೆದ್ದಿದ್ದಾರೆ.

ಕೈ ಭದ್ರಕೋಟೆಗೆ ದಳ-ಕಮಲ ಲಗ್ಗೆ
ಒಂದು ಕಾಲಘಟ್ಟದಲ್ಲಿ ಗಂಗಾವತಿ ಕಾಂಗ್ರೆಸ್‌ ಭದ್ರಕೋಟೆ ಎನಿಸಿತ್ತು. ಕಾಂಗ್ರೆಸ್‌ ಹೈಕಮಾಂಡ್‌ನಿಂದ ಏನೇ ಸಂದೇಶ ಬಂದರೂ ಹೆಚ್‌. ಆರ್‌.ರಾಮುಲು, ಹೆಚ್‌.ಜಿ.ರಾಮುಲು ಅವರ ಮೂಲಕವೇ ಇತರೆ ಕ್ಷೇತ್ರಗಳಿಗೆ ಸಂದೇಶ ರವಾನೆಯಾಗುತ್ತಿತ್ತು. ಕೇಂದ್ರ ನಾಯಕರೊಂದಿಗೆ ನೇರ ಸಂಪರ್ಕ ಹೊಂದಿದ್ದ ಹೆಚ್‌.ಜಿ. ರಾಮುಲು ಅವರು ಇಲ್ಲಿ ತಮ್ಮ ಅಧಿಪತ್ಯ ಸಾಧಿಸಿದ್ದರು. ಆದರೆ ಈಗ ಇದೇ ಕ್ಷೇತ್ರವು ದಳ, ಕಮಲದ ಪಾಲಾದ ಇತಿಹಾಸ ಮರೆಯುವಂತಿಲ್ಲ.

*ದತ್ತು ಕಮ್ಮಾರ

 

ಟಾಪ್ ನ್ಯೂಸ್

enWorld Environment Day- 2023: ಜಾಗೃತಿ ಇಲ್ಲದಿದ್ದರೆ ಕಾನೂನು ವ್ಯರ್ಥ: ಸಿದ್ದರಾಮಯ್ಯ

World Environment Day- 2023: ಜಾಗೃತಿ ಇಲ್ಲದಿದ್ದರೆ ಕಾನೂನು ವ್ಯರ್ಥ: ಸಿದ್ದರಾಮಯ್ಯ

Prabhu chouhan

Cow ಕಾಯ್ದೆ: ಸಚಿವ ವೆಂಕಟೇಶ್ ವಿರುದ್ಧ ಪ್ರಭು ಚೌಹಾಣ್ ಕಿಡಿ

1-asdadsa

ಪ್ರತಿಗ್ರಾಮದಲ್ಲೂ ಕಲ್ಯಾಣಿ ನಿರ್ಮಿಸಲು ಸಾಲುಮರದ ತಿಮ್ಮಕ್ಕ ಮನವಿ

1-goa

Goa ಆಕರ್ಷಣೆ; ಹೊಸ ಜುವಾರಿ ಸೇತುವೆಯ ಮೇಲೆ ಅವಳಿ ಗೋಪುರಗಳು

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

vijayendra

PSI ಹಗರಣ; ನನ್ನ ಹೆಸರು ತೇಲಿ ಬಿಟ್ಟಿದ್ದಾರೆ‌, ತನಿಖೆ ಮಾಡಲಿ:ಬಿ‌.ವೈ.ವಿಜಯೇಂದ್ರ

1-scsad

KSOU ಶೀಘ್ರದಲ್ಲಿ ಮುಕ್ತ ವಿವಿಯಿಂದ ಆನ್ ಲೈನ್ ಕೋಸ್೯ : ಕುಲಪತಿ ಪ್ರೊ ಹಲ್ಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-gangavathi

Gangavathi: ಪರಿಸರ ಸಮತೋಲನದಿಂದ ಜೀವಿ ಸಂಕುಲಕ್ಕೆ ಸಂರಕ್ಷಣೆ

1-sasdsa

Gangavati ಬಿಸಿಯೂಟ ಅಕ್ಕಿ ಪೂರೈಕೆ ; ಗೋಧಿ ಗೋಡೌನ್‌ನಲ್ಲೇ !

ಕೊಪ್ಪಳ: ರಾಜಕಾಲುವೆ ಒತ್ತುವರಿ; ನಗರಸಭೆ ಮೌನ

ಕೊಪ್ಪಳ: ರಾಜಕಾಲುವೆ ಒತ್ತುವರಿ; ನಗರಸಭೆ ಮೌನ

mb-patil

ನಿಶ್ಚಿತವಾಗಿ ಬಿಜೆಪಿ ಎಲ್ಲ ಹಗರಣಗಳ ತನಿಖೆ ಮಾಡುತ್ತೇವೆ: ಎಂ.ಬಿ.ಪಾಟೀಲ್

2-gangavathi

Gangavathi: ಸ್ಥಳೀಯರ ನೆರವಿನೊಂದಿಗೆ ಕರಿಕೋತಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿ

MUST WATCH

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಹೊಸ ಸೇರ್ಪಡೆ

enWorld Environment Day- 2023: ಜಾಗೃತಿ ಇಲ್ಲದಿದ್ದರೆ ಕಾನೂನು ವ್ಯರ್ಥ: ಸಿದ್ದರಾಮಯ್ಯ

World Environment Day- 2023: ಜಾಗೃತಿ ಇಲ್ಲದಿದ್ದರೆ ಕಾನೂನು ವ್ಯರ್ಥ: ಸಿದ್ದರಾಮಯ್ಯ

Perampalli: ಡಿವೈಡರ್‌ ಮೇಲೇರಿದ ಕಾರು!

Perampalli: ಡಿವೈಡರ್‌ ಮೇಲೇರಿದ ಕಾರು!

Prabhu chouhan

Cow ಕಾಯ್ದೆ: ಸಚಿವ ವೆಂಕಟೇಶ್ ವಿರುದ್ಧ ಪ್ರಭು ಚೌಹಾಣ್ ಕಿಡಿ

1-asdadsa

ಪ್ರತಿಗ್ರಾಮದಲ್ಲೂ ಕಲ್ಯಾಣಿ ನಿರ್ಮಿಸಲು ಸಾಲುಮರದ ತಿಮ್ಮಕ್ಕ ಮನವಿ

1-goa

Goa ಆಕರ್ಷಣೆ; ಹೊಸ ಜುವಾರಿ ಸೇತುವೆಯ ಮೇಲೆ ಅವಳಿ ಗೋಪುರಗಳು