
ಕುಮ್ಮಟದುರ್ಗದಲ್ಲಿ ಕುಮಾರರಾಮನ ವೀರಗಲ್ಲು ಪತ್ತೆ
Team Udayavani, Jan 23, 2023, 9:04 PM IST

ಗಂಗಾವತಿ: ದೆಹಲಿ ಸುಲ್ತಾನರಿಗೆ ಸೆಡ್ಡು ಹೊಡೆದು ಸ್ವಾವಲಂಬಿ ಕನ್ನಡ ಸಾಮ್ರಾಜ್ಯ ನಿರ್ಮಿಸಿ ಆಳ್ವಿಕೆ ನಡೆಸಿದ್ದ ಗಂಡುಗಲಿ ಕುಮಾರರಾಮ ನ ವೀರಗಲ್ಲು ಕೊಪ್ಪಳ ತಾಲೂಕಿನ ಪ್ರಸಿದ್ಧ ಚಾರಿತ್ರಿಕ ಸ್ಥಳ ಕುಮ್ಮಟದುರ್ಗದಲ್ಲಿ ಪತ್ತೆಯಾಗಿದೆ. ಕೋಟೆಯ ಎರಡನೇಯ ಪ್ರವೇಶ ದ್ವಾರದ ಬಳಿ ರಸ್ತೆ ನಿರ್ಮಾಣ ಸಮಯದಲ್ಲಿ ಭೂಮಿಯಲ್ಲಿ ಹುದುಗಿದ್ದ ಈ ಶಿಲ್ಪ ಬಯಲಿಗೆ ಬಂದಿದೆ.
ಶಿಲ್ಪವನ್ನು ಪರಿಶೀಲಿಸಿದ ಪ್ರಾಗೈತಿಹಾಸಿಕ ಸಂಶೋಧಕ ಡಾ. ಶರಣ ಬಸಪ್ಪ ಕೋಲ್ಕಾರ ಈ ಕುರಿತು ಮಾಹಿತಿ ನೀಡಿದ್ದಾರೆ. ಗಂಡುಗಲಿ ಕುಮಾರರಾಮ ರಾಮನ ವೀರಗಲ್ಲು ಕುಮ್ಮಟದ ಪತನಾನಂತರ ಅಂದರೆ 15 ನೇ ಶತಮಾನದಲ್ಲಿ ನಿರ್ಮಿಸಿದ ಶಿಲ್ಪವಾಗಿದೆ. ಅಶ್ವಾರೋಹಿ ವೀರನು ಖಡ್ಗವನ್ನು ಮೇಲಕ್ಕೆ ಎತ್ತಿ ಹಿಡಿದಿದ್ದು ಕುದುರೆಯ ಹಿಂಬದಿ ಯಲ್ಲಿ ಸೇವಕನು ಛತ್ರವನ್ನು ಹಿಡಿದಿದ್ದಾನೆ. ಶಿಲ್ಪದ ಶೈಲಿ ಹಾಗೂ ಅಶ್ವಾರೋಹಿಯ ಭಂಗಿ ಹಾಗೂ ಸ್ಥಳದ ಆಧಾರದ ಮೇಲೆ ಇದು ಕುಮಾರರಾಮನ ಶಿಲ್ಪವಾಗಿರುವ ಸಾಧ್ಯತೆ ಇದೆ ಎಂದು ಡಾ. ಕೋಲ್ಕಾರ ಅಭಿಪ್ರಾಯ ಪಟ್ಟಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train Tragedy ತಾಯ್ನಾಡಿಗೆ ವಾಪಸ್ ಆದ ಹುಣಸೂರಿನ ಕ್ರೀಡಾಪಟುಗಳು

Bengaluru 1,500 ಕ್ಕೂ ಹೆಚ್ಚು ರೈಲು ಪ್ರಯಾಣಿಕರ ಪರದಾಟ ; ಸರಕಾರದ ನೆರವು

Bhadravathi ಮೊಮ್ಮಗಳನ್ನು ನೋಡಲು ಬಂದ ಸಚಿವೆ ಹೆಬ್ಬಾಳ್ಕರ್ ರಿಗೆ ಭರ್ಜರಿ ಸ್ವಾಗತ

Congress Guarantee ಘೋಷಣೆಯಿಂದ ಬಿಜೆಪಿಗೆ ಆತಂಕ: ಸಚಿವ ಸತೀಶ್ ಜಾರಕಿಹೊಳಿ

ಸಿದ್ರಾಮಣ್ಣೋರ್ ಫೈವ್ ಗ್ಯಾರಂಟಿ ಕೊಟ್ಮ್ಯಾಕೆ ಲೈಫ್ ಈಸ್ ಜಿಂಗಾಲಾಲಾ…
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
